Breaking News

ಹರ್ಷನ ಹತ್ಯೆಯನ್ನು ಖಂಡಿಸಿ-ಶ್ರೀ ರಾಮ ಸೇನೆಯಿಂದ ಸರಕಾರಕ್ಕೆ ಮನವಿ!!

Spread the love

ಹರ್ಷನ ಹತ್ಯೆಯನ್ನು ಖಂಡಿಸಿ-ಶ್ರೀ ರಾಮ ಸೇನೆಯಿಂದ ಸರಕಾರಕ್ಕೆ ಮನವಿ!!

ಯುವ ಭಾರತ ಸುದ್ದಿ ಗೋಕಾಕ: ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷನ ಹತ್ಯೆಯನ್ನು ಖಂಡಿಸಿ ಇಲ್ಲಿನ ಶ್ರೀ ರಾಮ ಸೇನೆ ಕರ್ನಾಟಕ ಕಾರ್ಯಕರ್ತರು ಮಂಗಳವಾರದAದು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತ ಹರ್ಷ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಆ ಯುವಕನಿಗೆ ಎಸ್.ಡಿ.ಪಿ.ಐ,ಪಿ.ಎಫ್.ಐ, ಸಿ.ಎಫ್.ಐ ಸಂಘಟನೆಗಳು ಹತ್ಯೆಗೆ ಪ್ರಯತ್ನ ನಡೆಸಿದ್ದರು ರಕ್ಷಣೆ ನೀಡದಿರುವುದು ಸರಕಾರದ ನಾಚಿಕೆಗೇಡಿ ಸಂಗತಿಯಾಗಿದೆ. ಹಿಂದುಗಳ ಹತ್ಯೆ ಅವ್ಯಾಹತವಾಗಿ ನಡೆದಿದ್ದರೂ ಸರಕಾರ ದಿವ್ಯ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ವಿರೋಧ ಪಕ್ಷದಲ್ಲಿದ್ದಾಗ ಈ ಸಂಘಟನೆಗಳನ್ನು ನಿಷೇಧಿಸುವದಕ್ಕೆ ಆಗ್ರಹಿಸಿ ಈಗ ಅಧಿಕಾರದಲ್ಲಿದ್ದರೂ ನಿಷೇಧಿಸದಿರುವದು ಸರಕಾರದ ಮೇಲೆ ಸಂಶಯ ಮೂಡುತ್ತಿದೆ.ತಕ್ಷಣ ಈ ಸಂಘಟನೆಗಳನ್ನು ನಿಷೇಧಿಸಬೇಕು ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು. ಮೃತನ ಕುಟುಂಬಕ್ಕೆ ರೂ ೨೫ ಲಕ್ಷ ಪರಿಹಾರ ನೀಡಬೇಕು. ಹಿಂದು ಕಾರ್ಯಕರ್ತರಿಗೆ, ಹಿಂದು ನಾಯಕರಿಗೆ ಸೂಕ್ತ ಭದ್ರತೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಕರ್ನಾಟಕ ತಾಲೂಕು ಅಧ್ಯಕ್ಷ ರವಿ ಪೂಜೇರಿ, ಮುಖಂಡರಾದ ಶಿವು ಹಿರೇಮಠ, ಸಂತೋಷ ನಾಯಿಕ, ರಮೇಶ ಸಂಗಪಾಳೆ, ಪ್ರವಿಣ ಬೆಕ್ಕೇರಿ, ಪ್ರವಿಣ ಹೂವನ್ನವರ, ಶಿವು ಪೂಜೇರಿ, ರಾಮು ತೋಳಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕಂಡು ಕಾಂಗ್ರೇಸ್‌ಗೆ ನಡುಕ.!

Spread the loveಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಗೋಕಾಕ ಮತಕ್ಷೇತ್ರದಲ್ಲಿ ಮತಯಾಚನೆ.! ಗೋಕಾಕ: ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ …

Leave a Reply

Your email address will not be published. Required fields are marked *

nineteen − 2 =