Breaking News

20 ವರ್ಷಗಳಿಂದ ಗ್ರಾಮೀಣದೊಂದಿಗಿದೆ ನನ್ನ ಒಡನಾಟ: ಲಖನ್ ಸಾಹುಕಾರ್!!

Spread the love

 

20 ವರ್ಷಗಳಿಂದ ಗ್ರಾಮೀಣದೊಂದಿಗಿದೆ ನನ್ನ ಒಡನಾಟ: ಲಖನ್ ಸಾಹುಕಾರ್!!

ಯುವ ಭಾರತ ಸುದ್ದಿ ಬೆಳಗಾವಿ(ಗ್ರಾ): ವಿರೋಧಿಗಳು ಅಪಪ್ರಚಾರ ಮಾಡುತ್ತಲೇ ಇರುತ್ತದೆ ಅದಕ್ಕೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಎ ಟೀಮ್ ನಮ್ಮ ವಿರೋಧಿಗಳೇ ಬಿ ಟೀಮ್ ಎಂದು ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಅವರು, ಸುಳೆಭಾವಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಮತದಾರರು ಎ ಒನ್. ನಾವು ಎ ಒನ್ ಎಂದ ವಿರೋಧಿಗಳ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ ಎಂದರು. ಚುನಾವಣೆಯಲ್ಲಿ ಕಾಲಿಗೆ ಬಿಳುತ್ತಾರೆ ನಂತರ ನಮ್ಮ ಗ್ರಾಮ ಪಂಚಾಯತಳ ಸಮೀಪವು ಸುಳಿಯುವದಿಲ್ಲ. ತಾವು ಜನರಿಂದ ಆಯ್ಕೆಯಾಗಿದ್ದಿರಿ, ನಿಮ್ಮಿಂದ ನಾನು ಜನಸೇವೆ ಮಾಡಲು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಎಂದು ಕೈ ಮುಗಿದು ವಿನಂತಿಸಿದರು.
ಶಾಸಕನಾಗಲಿ ಆಗದಿರಲಿ ನಿಮ್ಮ ಹಾಗೂ ನಮ್ಮ ಸಂಬಂಧಗಳು ಹೀಗೆ ಇರಲಿ. ನಮಗೆ ಪೊಲೀಸ್ ಸೆಕ್ಯೂರಿಟಿ ಬೇಡ ನಾವು ಸಿಂಪಾಲ್ಲಾಗೆ ಒಂದೆ ಕಾರನಲ್ಲಿ ತಮ್ಮೆಡೆಗೆ ಬರುತ್ತೆನೆ. ಇಪ್ಪತ್ತು ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದೆನೆ. ಎಂದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಬದ್ಧನಿದ್ದೆನೆ ತಮ್ಮ ಪ್ರಥಮ ಪ್ರಾಶಸ್ತ್ಯ ಮತ ನನಗೆ ನೀಡುವಂತೆ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮನವಿ ಮಾಡಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಏಳು ಜಿಲ್ಲಾ ಪಂಚಾಯತ ಕ್ಷೇತ್ರಗಳನ್ನು ಒಳಗೊಂಡಿದ್ದು, ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಉಳಿದಿದೆ. ಗ್ರಾಮಗಳ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮಾರಿಹಾಳ ಗ್ರಾಪಂ ಸದಸ್ಯ ಸದಾನಂದ ರಾಚನ್ನವರ ಮಾತನಾಡಿ, ದುಡ್ಡಿಗೆ ಬೆಲೆಕೊಡದೇ ಯೋಗ ಹಾಗೂ ಯೋಗ್ಯತೆ ಹೊಂದಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಗೆ ಒಗ್ಗಟ್ಟಿನಿಂದ ನಮ್ಮ ಮತ ಚಲಾಯಿಸುವ ಮೂಲಕ ಅವರ ಆಯ್ಕೆಗೆ ಶ್ರಮಿಸಬೆಕೆಂದರು.
ಬೆಳಗಾವಿ ಗ್ರಾಮೀಣದ ಮಾರಿಹಾಳ, ಕರಡಿಗುದ್ದಿ, ಸುಳೆಭಾಂವಿ, ಬಾಳೆಕುಂದ್ರಿ, ಮೊದಗಾ,‌ಮುತಗಾ, ಸಾಂಬ್ರಾ ಹಾಗೂ ನಿಲಜಗಿ ಸೇರಿದಂತೆ ವಿವಿದ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಕೃಷ್ಣಾ ಆನಗೋಳಕರ,ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿವಿದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರುಗಳಾದ ಅಬಿದಾಬೇಗಂ ಸನದಿ, ಭಾಗ್ಯಶ್ರೀ ಹನಬರ, ಅಲ್ಲನ್ನ ನಾಯ್ಕ, ನಾಗಪ್ಪ ಕಾಲೆರಿ, ಅಲ್ಲಾವುದ್ದಿನ‌ ಫನಿಬಂದ, ಬಸವರಾಜ ಮಾದಬನ್ನವರ, ಮಹೇಶ ಸುಗನೆನ್ನವರ, ರತ್ನವ್ವಾ ಕೊಲಕಾರ, ಸದಾನಂದ ರಾಚನ್ನವರ, ಮಿಲನ ಮಲಾರಿ, ತಂಗೆವ್ವಾ ಪೂಜೇರಿ, ಪ್ರಭಾಕರ ಪಾಟೀಲ, ಪಿಂಟು ಮಲ್ಲವ್ವಗೋಳ, ಮಲ್ಲವ್ವಗೋಳ, ಯೋಗಿತಾ ಬೆನ್ನಾಲಕರ, ಮಂಜುಳಾ ಮೆಲ್ಮನಿ, ಬಾಳಗೌಡ ಪಾಟೀಲ ಸೇರಿದಂತೆ ನೂರಾರು ಗ್ರಾಪಂ ಸದಸ್ಯರು ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

5 + 1 =