Breaking News

ರುದ್ರೇಶ ಸಂಪಗಾವಿ ಅವರಿಗೆ ಮಾಧ್ಯಮ ಐಸಿರಿ ಪ್ರಶಸ್ತಿ

Spread the love

ರುದ್ರೇಶ ಸಂಪಗಾವಿ ಅವರಿಗೆ ಮಾಧ್ಯಮ ಐಸಿರಿ ಪ್ರಶಸ್ತಿ

ಇಟಗಿ :
ಇಟಗಿ ಗ್ರಾಮದ ವಿಜಯ ಕರ್ನಾಟಕದ ವರದಿಗಾರ ರುದ್ರೇಶ ಸಂಪಗಾವಿ ರಾಜ್ಯಮಟ್ಟದ ಮಾಧ್ಯಮ ಐಸಿರಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಜು. 1 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮದಲ್ಲಿ ನಡೆಯಲಿರುವ ಕರುನಾಡ ಅಕ್ಷರ ಜಾತ್ರೆ ಯಲ್ಲಿ ಮಾದ್ಯಮ ಐಸಿರಿ ಪುರಸ್ಕಾರ ನಡೆಯಲಿದೆ. ಕಳೆದ 25 ವರ್ಷಗಳ ಮಾಧ್ಯಮ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ರುದ್ರೇಶ ಸಂಪಗಾವಿ ಅವರಿಗೆ ನೀಡಲಾಗುತ್ತಿದೆ.

ಈಗಾಗಲೇ ಅವರಿಗೆ “ಶಾಂಡಿಲ್ಯ ಸೇವಾರತ್ನ” ಹಾಗೂ “ಕಲ್ಮಠ ಶ್ರೀ” ಪ್ರಶಸ್ತಿಗಳು ಲಭಿಸಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ಈ ಪ್ರಶಸ್ತಿ ನೀಡುತ್ತಿದೆ ಎಂದು ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಅಧ್ಯಕ್ಷ ಜಗದೀಶ ಕಾಬನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eight + eleven =