Breaking News

ಅಮರನಾಥ ಜಾರಕಿಹೊಳಿ ಅವರಿಂದ ಉಚಿತ ಸ್ಫಾರ್ಧಾತ್ಮಕ ತಬೇತಿ ಶಿಭಿರ ಉದ್ಘಾಟನೆ ರವಿವಾರ.!

ಅಮರನಾಥ ಜಾರಕಿಹೊಳಿ ಅವರಿಂದ ಉಚಿತ ಸ್ಫಾರ್ಧಾತ್ಮಕ ತಬೇತಿ ಶಿಭಿರ ಉದ್ಘಾಟನೆ ರವಿವಾರ.! ಗೋಕಾಕ: 75 ನೇ ಸ್ವಾತಂತ್ರö್ಯ ಅಮೃತ ಮಹೋತ್ಸವ ಅಂಗವಾಗಿ ಸ್ಫರ್ಧಾ ಗೋಕಾಕ ಕೋಚಿಂಗ ಸೆಂಟರನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾದ ಉಚಿತ ಸ್ಪರ್ಧಾತ್ಮಕ ತರಬೇತಿ ಶಿಭಿರವನ್ನು ದಿ.೪ರ ರವಿವಾರದಂದು ಬೆಳಿಗ್ಗೆ 11ಗಂಟೆಗೆ ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ …

Read More »

ಆಜಾದ್ ಹಿಂದ್ ಫೌಜ್ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣೀಮ ಅಧ್ಯಾಯ ಕುರಿತು ಉಪನ್ಯಾಸ

ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಐಎನ್‌ಎ ಪಾತ್ರ ಹಿರಿದು ಆಜಾದ್ ಹಿಂದ್ ಫೌಜ್ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣೀಮ ಅಧ್ಯಾಯ ಕುರಿತು ಉಪನ್ಯಾಸ ಯುವ ಭಾರತ ಸುದ್ದಿ   ಬೆಳಗಾವಿ:ಎರಡನೇ ವಿಶ್ವಯುದ್ಧದ ತರುವಾಯ ಭಾರತದಲ್ಲಿ ಜರುಗಿದ ನೌಕಾ ಬಂಡಾಯ ಮತ್ತು ಭಾರತೀಯ ಸೈನ್ಯದಲ್ಲಿ ಬ್ರಿಟಿಷ ಆಡಳಿತ ವಿರುದ್ಧ ದಂಗೆ ಉಂಟಾದ ಕಾರಣ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು. ಇದಕ್ಕೆಲ್ಲ ಹಿನ್ನೆಲೆ ರಚನೆಗೊಂಡಿದ್ದು ಆಜಾದ ಹಿಂದ ಫೌಜ್ ಮತ್ತು ಅದನ್ನು ಸಂಘಟಿಸಿದ ಸುಭಾಷಚಂದ್ರ ಭೋಸ್ ಅವರಿಂದ …

Read More »

ಗೋಕಾಕ ನಗರದಲ್ಲಿ ಪ್ರತಿಸ್ಥಾಪಿಸಲಾದ ಗಣಪತಿಗಳು.!

ಗೋಕಾಕ: ನಗರದಲ್ಲಿ ಗಜಾನನ ಉತ್ಸವ ಮಂಡಳಿಗಳಿAದ ವಿವಿಧ ಸ್ಥಳಗಳಲ್ಲಿ ಪ್ರತಿಸ್ಥಾಪಿಸಲಾದ ಗಣಪತಿಗಳು. ಗೋಕಾಕ: ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. ಗೋಕಾಕ: ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. ಗೋಕಾಕ: ಸೋಮವಾರ ಪೇಟೆಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. ಗೋಕಾಕ: ಸಿದ್ಧೇಶ್ವರ ನಗರದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. ಗೋಕಾಕ: ಬಣಗಾರ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. ಗೋಕಾಕ: ರವಿವಾರ ಪೇಟೆಯ ಕಲಬುರ್ಗಿ ಕೂಟದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. ಗೋಕಾಕ: ರವಿವಾರ ಪೇಟೆಯ ಭಗವಾನ್ ಶೇಡಜೀ ಕೂಟದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ. …

Read More »

ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು.- ಸತೀಶ್ ಜಾರಕಿಹೊಳಿ.!

ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು.- ಸತೀಶ್ ಜಾರಕಿಹೊಳಿ.! ಗೋಕಾಕ: ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹುಮುಖ್ಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಅವರು, ಬುಧವಾರದಂದು ಸಾಯಂಕಾಲ ನಗರದ ಕೆಜಿಎನ್ ಸಭಾಂಗಣದಲ್ಲಿ ಇಲ್ಲಿನ ಜಮಿಯತ ಎ ಉಲಮಾ ಹಿಂದ್ ಸಂಘಟನೆ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಜಾಗೃತಿ ಮತ್ತು ತರಬೇತಿ ಶಿಬಿರದಲ್ಲಿ ಮುಖ್ಯ ಅತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಮುಸ್ಲಿಂ …

Read More »

ಕನ್ನಡಪ್ರಭದ ವೆಂಕಟೇಶ ಪಾಗಾದಗೆ ವಿನ್ಯಾಸ ಭೂಷಣ, ಪಬ್ಲಿಕ ಟಿವಿ ಅರುಣಗೆ ಮಾಧ್ಯಮ ರತ್ನ ಪ್ರಶಸ್ತಿ

ಕನ್ನಡಪ್ರಭದ ವೆಂಕಟೇಶ ಪಾಗಾದಗೆ ವಿನ್ಯಾಸ ಭೂಷಣ, ಪಬ್ಲಿಕ ಟಿವಿ ಅರುಣಗೆ ಮಾಧ್ಯಮ ರತ್ನ ಪ್ರಶಸ್ತಿ ಯುವ ಭಾರತ ಸುದ್ದಿ   ಬೆಳಗಾವಿ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಬೆಂಗಳೂರು) ವಿಜಯಪುರ ಜಿಲ್ಲಾ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಘಟಕದ ವತಿಯಿಂದ ಕೊಡಮಾಡುವ ೨೦೨೧-೨೧ನೇ ಸಾಲಿನ ಮಾಧ್ಯಮ ಕ್ಷೇತ್ರದಲ್ಲಿನ ವಿವಿಧ ಪ್ರಶಸ್ತಿಗಾಗಿ ಸಾಧಕರನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ರಾಜ್ಯಮಟ್ಟದ ಮಾಧ್ಯಮ ರತ್ನ ಪ್ರಶಸ್ತಿಗೆ ಪಬ್ಲಿಕ ಟಿವಿ ಸುದ್ದಿವಾಹಿನಿ ಪತ್ರಕರ್ತ, ನಿರೂಪಕ ಅರುಣ ಬಡಿಗೇರ, ವಿನ್ಯಾಸ …

Read More »

ವೀಶಿಷ್ಠ ಚೇತನರಿಗೆ ಉಚಿತ ದ್ವೀಚಕ್ರ ವಾಹನ ಹಸ್ತಾಂತರಿಸಿದ ಶಾಸಕ ರಮೇಶ ಜಾರಕಿಹೊಳಿ.!

ವೀಶಿಷ್ಠ ಚೇತನರಿಗೆ ಉಚಿತ ದ್ವೀಚಕ್ರ ವಾಹನ ಹಸ್ತಾಂತರಿಸಿದ ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ವೀಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಗೋಕಾಕ ಮತಕ್ಷೇತ್ರದ 11 ವೀಶಿಷ್ಠ ಚೇತನರಿಗೆ ಉಚಿತ ದ್ವೀಚಕ್ರ ವಾಹನಗಳನ್ನು ಶಾಸಕ ರಮೇಶ ಜಾರಕಿಹೊಳಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ, ಕಾಂತು ಎತ್ತಿನಮನಿ, ವೀಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನೂಡಲ್ ಅಧಿಕಾರಿ ನಸರೀನ್ ಕೊಣ್ಣೂರ, ಎಸ್ …

Read More »

ಕನ್ನಡಪ್ರಭ ಬೆಳಗಾವಿ ಆವೃತ್ತಿ 25ನೇ ಬೆಳ್ಳಿ ಸಂಭ್ರಮದ ವಿಶೇಷ ಪುರವಣಿ ಬಿಡುಗಡೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮೆಚ್ಚುಗೆ!!

  ನಿಷ್ಪಕ್ಷಪಾತ ವರದಿ ನೀಡುತ್ತಿರುವ ಕನ್ನಡಪ್ರಭ ಕನ್ನಡಪ್ರಭ ಬೆಳಗಾವಿ ಆವೃತ್ತಿ 25ನೇ ಬೆಳ್ಳಿ ಸಂಭ್ರಮದ ವಿಶೇಷ ಪುರವಣಿ ಬಿಡುಗಡೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮೆಚ್ಚುಗೆ!! ಯುವ ಭಾರತ ಸುದ್ದಿ ಗೋಕಾಕ ಸದೃಢ ಸಮಾಜ ರೂಪಿಸುವಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಪ್ರಭ ದಿನಪತ್ರಿಕೆ ಸಂಪಾದಕರಾದ ರವಿ ಹೆಗಡೆ ನೇತೃತ್ವದಲ್ಲಿ ಕನ್ನಡಪ್ರಭ ಪತ್ರಿಕೆ ಶ್ರಮಿಸುತ್ತಿದ್ದು, ಪತ್ರಿಕೆ ಮತ್ತಷ್ಟೂ ಜನಪ್ರಿಯತೆ ಗಳಿಸಲಿ ಎಂದು ಮಾಜಿ …

Read More »

ಶ್ರೀ ಜಗದ್ಗುರು ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ 25.10 ಲಕ್ಷ ರೂಗಳ ನಿವ್ವಳ ಲಾಭ.

ಶ್ರೀ ಜಗದ್ಗುರು ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ 25.10 ಲಕ್ಷ ರೂಗಳ ನಿವ್ವಳ ಲಾಭ.! ಗೋಕಾಕ : ನಗರದ ಶ್ರೀ ಪಂಚಾಚಾರ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 25.10 ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಸಂಸ್ಥೆಯ ಸದಸ್ಯರಿಗೆ ಶೇಕಡ 15% ರಷ್ಟು ಲಾಭ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ || ಸಂಜಯ್ ಪಂಚಾಕ್ಷರಿ ಹೊಸಮಠ ತಿಳಿಸಿದರು . ಶ್ರೀ …

Read More »

ಆರೋಗ್ಯವಂತ ಸಮಾಜದ ನಿರ್ಮಾಣವೇ ಪ್ರವಚನದ ಉದ್ಧೇಶ- ಗಂಗಾಧರ ಮಳಗಿ.!

ಆರೋಗ್ಯವಂತ ಸಮಾಜದ ನಿರ್ಮಾಣವೇ ಪ್ರವಚನದ ಉದ್ಧೇಶ- ಗಂಗಾಧರ ಮಳಗಿ.! ಗೋಕಾಕ: ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಆರೋಗ್ಯವಂತ ಸಮಾಜದ ನಿರ್ಮಾಣವೇ ಪ್ರವಚನದ ಉದ್ಧೇಶವಾಗಿರುತ್ತದೆ ಎಂದು ಸಾಹಿತಿ ಗಂಗಾಧರ ಮಳಗಿ ಹೇಳಿದರು. ನಗರದ ಶ್ರೀ ಬಸವ ಮಂದಿರದ ೧೭ನೇ ವಾರ್ಷಿಕೋತ್ಸವ ಹಾಗೂ ಶ್ರಾವಣ ಮಾಸದ ಪ್ರವಚನ ಮಂಗಲೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಭಾರತೀಯ ಸಂಸ್ಕೃತಿಯಲ್ಲಿ ಪುರಾನ, ಪ್ರವಚನ, ಸತ್ಸಂಗಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಪ್ರವಚನ ಕೇಳುವದರಿಂದ ಉತ್ತಮ ಸಂಸ್ಕಾರ ಪಡೆದು, ಒಳ್ಳೆಯ ನಾಗರಿಕರಾಗಲು …

Read More »

ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ.- ಗಜಾನನ ಮನ್ನಿಕೇರಿ.!

ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ.- ಗಜಾನನ ಮನ್ನಿಕೇರಿ.! ಗೋಕಾಕ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳುವದರಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು. ರವಿವಾರದಂದು ಇಲ್ಲಿನ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸದ ಮುಕ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಜೀವನದ ಭರಾಟೆಯಿಂದ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಾಯವಾಗುತ್ತಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ …

Read More »