Breaking News

ಬೆಳಗಾವಿವರೆಗೂ ಬಾರದು ವಂದೇ ಭಾರತ್ ರೈಲು

ಬೆಳಗಾವಿವರೆಗೂ ಬಾರದು ವಂದೇ ಭಾರತ್ ರೈಲು ಯುವ ಭಾರತ ಸುದ್ದಿ ಬೆಳಗಾವಿ : ಜುಲೈ 26 ರಿಂದ ಹುಬ್ಬಳ್ಳಿ -ಬೆಂಗಳೂರು ನಡುವೆ ಅತಿ ವೇಗವಾಗಿ ಚಲಿಸುವ ವಂದೇ ಭಾರತ್ ರೈಲು ಆರಂಭವಾಗಲಿದೆ. ಆದರೆ ಈ ರೈಲು ಬೆಳಗಾವಿಗೆ ಬರಲು ತಾಂತ್ರಿಕ ಸಮಸ್ಯೆಯಂತೆ ! ಈ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಪಷ್ಟನೆ ನೀಡಿ ವಂದೇ ಭಾರತ ರೈಲು ಸೇವೆ ಧಾರವಾಡದಿಂದ ಬೆಳಗಾವಿವರೆಗೆ ವಿಸ್ತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ವಂದೇ …

Read More »

ರಾಹುಲ್ ಗಾಂಧಿಗೆ ಮದುವೆಯಾಗಲು ಕಿವಿಮಾತು ಹೇಳಿದ ಲಾಲು ಪ್ರಸಾದ್ !

ರಾಹುಲ್ ಗಾಂಧಿಗೆ ಮದುವೆಯಾಗಲು ಕಿವಿಮಾತು ಹೇಳಿದ ಲಾಲು ಪ್ರಸಾದ್ ! ಯುವ ಭಾರತ ಸುದ್ದಿ ಪಾಟ್ನಾ : ಪಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲಹೆಯೊಂದನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಅವರೇ ಆದಷ್ಟು ಬೇಗ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ನೀವು ಹೇಳಿದ ಮೇಲೆ ಅದು ಆಗುತ್ತದೆ ಎಂದು …

Read More »

ಪಿಂಚಣಿ ಕುರಿತು ಕೇಂದ್ರದಿಂದ ಕೊನೆಗೂ ನಿಲುವು ಬದಲು ?

ಪಿಂಚಣಿ ಕುರಿತು ಕೇಂದ್ರದಿಂದ ಕೊನೆಗೂ ನಿಲುವು ಬದಲು ? ಯುವ ಭಾರತ ಸುದ್ದಿ ದೆಹಲಿ : ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ, ಸೇವಾವಧಿಯ ಕಡೆಯ ವೇತನದ ಕನಿಷ್ಠ ಶೇಕಡ 40–45ರಷ್ಟು ಮೊತ್ತವನ್ನು ಖಾತರಿ ಪಿಂಚಣಿಯಾಗಿ ನೀಡುವ ಸಾಧ್ಯತೆ ಇದೆ. ಈಗ ಜಾರಿಯಲ್ಲಿ ಇರುವ, ಬಂಡವಾಳ ಮಾರುಕಟ್ಟೆ ಆಧಾರಿತ ಎನ್‌ಪಿಎಸ್ ಬದಲಿಗೆ, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಲು ಕೆಲವು ರಾಜ್ಯ ಸರ್ಕಾರಗಳು ಮುಂದಾಗಿವೆ. ಹೀಗಾಗಿ, ಈಗಿನ ಪಿಂಚಣಿ ನಿಯಮಗಳಲ್ಲಿ …

Read More »

ಮೋದಿಯನ್ನು ಸೋಲಿಸಲು ಪಾಟ್ನಾದಲ್ಲಿಂದು ಮಹತ್ವದ ಪ್ರತಿಪಕ್ಷಗಳ ಸಭೆ : ಆರ್‌ಎಲ್‌ಡಿ ಗೈರು; ಬಿಎಸ್‌ಪಿಗೆ ಆಹ್ವಾನವಿಲ್ಲ

ಮೋದಿಯನ್ನು ಸೋಲಿಸಲು ಪಾಟ್ನಾದಲ್ಲಿಂದು ಮಹತ್ವದ ಪ್ರತಿಪಕ್ಷಗಳ ಸಭೆ : ಆರ್‌ಎಲ್‌ಡಿ ಗೈರು; ಬಿಎಸ್‌ಪಿಗೆ ಆಹ್ವಾನವಿಲ್ಲ ಯುವ ಭಾರತ ಸುದ್ದಿ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ರಣತಂತ್ರ ಹೆಣೆಯಲು ಮುಂದಾಗಿವೆ. ಈ ನಿಟ್ಟಿನಲ್ಲಿ ಅತಿರಥ ಮಹಾರಥ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಲು ಸಜ್ಜಾಗಿವೆ. ಶುಕ್ರವಾರ, ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮಹತ್ವದ ಸಭೆಗೆ ಮೊದಲು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ …

Read More »

ಮೋದಿ ಮತ್ತೆ ವಿಶ್ವದ ನಂಬರ್ ಒನ್ ನಾಯಕ

ಮೋದಿ ಮತ್ತೆ ವಿಶ್ವದ ನಂಬರ್ ಒನ್ ನಾಯಕ ಯುವ ಭಾರತ ಸುದ್ದಿ ದೆಹಲಿ: ಜನಪ್ರಿಯ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದು, ಈ ಬಾರಿ ಶೇ.76ರಷ್ಟು ಅನುಮೋದನೆಯ ರೇಟಿಂಗ್‌ ಪಡೆದುಕೊಂಡಿದ್ದಾರೆ ಎಂದು ಮಾರ್ನಿಂಗ್‌ ಕನ್ಸಲ್ಟ್‌ನ ಸಮೀಕ್ಷೆ ತಿಳಿಸಿದೆ. ಅಮೆರಿಕ ಮೂಲದ ಈ ಸಂಸ್ಥೆ ಪ್ರತಿ ತಿಂಗಳು ಸಮೀಕ್ಷೆ ನಡೆಸುತ್ತಿದ್ದು, ಜೂನ್‌ ತಿಂಗಳಲ್ಲೂ ಪ್ರಧಾನಿ ಮೋದಿ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೇ.59ರಷ್ಟು …

Read More »

ಪ್ಲಾಸ್ಟಿಕ್ ಡಬ್ಬ ನುಂಗಿ ಹೆಣಗಾಡಿದ ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಕೊನೆಗೂ ಕಾಡಿಗೆ ಮರಳಿದ ಹಾವು

ಪ್ಲಾಸ್ಟಿಕ್ ಡಬ್ಬ ನುಂಗಿ ಹೆಣಗಾಡಿದ ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಕೊನೆಗೂ ಕಾಡಿಗೆ ಮರಳಿದ ಹಾವು ಯುವ ಭಾರತ ಸುದ್ದಿ ಮಂಗಳೂರು : ಸುಣ್ಣದ ಪ್ಲಾಸ್ಟಿಕ್ ಡಬ್ಬವೊಂದನ್ನು ನುಂಗಿ ಸಂಕಟಪಡುತ್ತಿದ್ದ ನಾಗರಹಾವಿಗೆ ಮಂಗಳೂರಿನ ಯುವ ವೈದ್ಯರೊಬ್ಬರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಬಂಟ್ವಾಳದ ವಗ್ಗದಲ್ಲಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿ ಇದ್ದ ಬಿಲವೊಂದರಲ್ಲಿ ಸಿಲುಕಿ ಈ ನಾಗರಹಾವು ಹೊರಬರಲು …

Read More »

27 ರಂದು ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಶಿಕ್ಷಣ ಕಾ ಸಹಾರಾ (ಪೋಷಕ ಶಿಕ್ಷಣ) ಉದ್ಘಾಟನೆ

27 ರಂದು ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಶಿಕ್ಷಣ ಕಾ ಸಹಾರಾ (ಪೋಷಕ ಶಿಕ್ಷಣ) ಉದ್ಘಾಟನೆ ಯುವ ಭಾರತ ಸುದ್ದಿ ಬೆಳಗಾವಿ : ಸಮುದಾಯ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಬೆಳಗಾವಿ ಸೌತ್‌ನ ರೋಟರಿ ಕ್ಲಬ್, ಕೋವಿಡ್ -19 ಪೀಡಿತ ಕುಟುಂಬಗಳು ಮತ್ತು ಇತರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಅಸಾಧಾರಣ ಯೋಜನೆಯಾದ ಶಿಕ್ಷಣ ಕಾ ಸಹಾರಾವನ್ನು ಪ್ರಾರಂಭಿಸುವ ಮೂಲಕ ತನ್ನ ಹೊಸ ಉಪಕ್ರಮದೊಂದಿಗೆ ಬಂದಿದೆ. ಅಧ್ಯಕ್ಷ …

Read More »

ಕರಡಿ ವಿರುದ್ಧ ಹೋರಾಡಿ ಜೀವ ಉಳಿಸಿಕೊಂಡ ವೃದ್ಧ: ಕಣ್ಣುಗುಡ್ಡೆಗೆ ಗಂಭೀರ ಗಾಯ

ಕರಡಿ ವಿರುದ್ಧ ಹೋರಾಡಿ ಜೀವ ಉಳಿಸಿಕೊಂಡ ವೃದ್ಧ: ಕಣ್ಣುಗುಡ್ಡೆಗೆ ಗಂಭೀರ ಗಾಯ ಯುವ ಭಾರತ ಸುದ್ದಿ ಕಾರವಾರ: ಸುಮಾರು 70 ವರ್ಷದ ವೃದ್ಧರೊಬ್ಬರ ಮೇಲೆ ಕರಡಿ ದಾಳಿ ಮಾಡಿದ್ದು, ಅವರು ಪವಾಡ ಸದೃಶರೀತಿಯಲ್ಲಿ ಪಾರಾಗಿ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ತಿಂಬಾಲಿ ಎಂಬ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ. ಕರಡಿ ದಾಳಿಯಿಂದ ವೃದ್ಧಿ ಕಣ್ಣುಗುಡ್ಡೆಗೆ ಬಲವಾದ ಏಟುಬಿದ್ದಿದ್ದರೂ ವೃದ್ಧ 2 ಕಿಮೀ ನಡೆದುಕೊಂಡು ಬಂದಿದ್ದು, …

Read More »

ಪ್ರಧಾನಿ ಮೋದಿ ಔತಣಕೂಟದಲ್ಲಿ ಟಾಪ್ ಉದ್ಯಮಿಗಳು ಸೇರಿದಂತೆ 400 ಗಣ್ಯರು ಭಾಗಿ

ಪ್ರಧಾನಿ ಮೋದಿ ಔತಣಕೂಟದಲ್ಲಿ ಟಾಪ್ ಉದ್ಯಮಿಗಳು ಸೇರಿದಂತೆ 400 ಗಣ್ಯರು ಭಾಗಿ ಯುವ ಭಾರತ ಸುದ್ದಿ ವಾಷಿಂಗ್ಟನ್‌ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸುವ ಅಮೆರಿಕದ ಸರ್ಕಾರಿ ಭೋಜನಕೂಟದಲ್ಲಿ ಅಧ್ಯಕ್ಷ ಜೋ ಬೈಡನ್ ಅಮೆರಿಕ ಮತ್ತು ಭಾರತದ ನಡುವಿನ ಟೆಕ್ ಉದ್ಯಮ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನದಲ್ಲಿ ಸಿಲಿಕಾನ್ ವ್ಯಾಲಿಯ ಮಹತ್ವದ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಶ್ವೇತಭವನದ ಈ ಭೋಜನಕ್ಕೆ 400ಕ್ಕೂ ಹೆಚ್ಚು ಅತಿಥಿಗಳಿಗೆ ವೈಟ್​​ಹೌಸ್ ಆಹ್ವಾನವನ್ನು ನೀಡಿದೆ. ಶ್ವೇತಭವನದಲ್ಲಿ ನಡೆದ …

Read More »

ಕೇವಲ ಎರಡೇ ಬಲ್ಬ್‌‌ ಇರುವ ವೃದ್ಧೆ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ !

ಕೇವಲ ಎರಡೇ ಬಲ್ಬ್‌‌ ಇರುವ ವೃದ್ಧೆ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ! ಕೊಪ್ಪಳ : ಕೊಪ್ಪಳದಲ್ಲಿ ಶೆಡ್‌ನಲ್ಲಿ ವಾಸವಾಗಿರುವ ವೃದ್ಧೆಗೆ ಬರೋಬ್ಬರಿ 1ಲಕ್ಷ ರೂಪಾಯಿ ಕರೆಂಟ್ ಬಿಲ್‌ ಬಂದಿದೆ. ಬಿಲ್‌ ಕಂಡು ವೃದ್ಧೆ ಕಂಗಾಲಾಗಿದ್ದಾರೆ. ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್​ನಲ್ಲಿ ವಾಸವಾಗಿರುವ 90 ವಯಸ್ಸಿನ ಗಿರಿಜಮ್ಮ ಎಂಬ ವೃದ್ಧೆ ಮನೆಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಮನೆಯಲ್ಲಿ ಎರಡು ಬಲ್ಬ್ ಮಾತ್ರ …

Read More »