Breaking News

ಕಳೆಗಟ್ಟಿದ ಉತ್ಸಾಹ : ಯರಗಟ್ಟಿ ಗ್ರಾಮದೇವತೆ ಜಾತ್ರೆ ಮಂಗಳವಾರದಿಂದ ಆರಂಭ

Spread the love

ಕಳೆಗಟ್ಟಿದ ಉತ್ಸಾಹ : ಯರಗಟ್ಟಿ ಗ್ರಾಮದೇವತೆ ಜಾತ್ರೆ ಮಂಗಳವಾರದಿಂದ ಆರಂಭ

ಯುವ ಭಾರತ ಸುದ್ದಿ ಯರಗಟ್ಟಿ :
ಗ್ರಾಮದೇವಿ ಜಾತ್ರಾ ಮಹೋತ್ಸವ ಜೂನ್ 27 ರಿಂದ 5 ದಿನಗಳ ಕಾಲ ನಡೆಯಲಿದೆ. ಜೂನ್ 27 ರಂದು ಬೆಳಗ್ಗೆ 9 ಗಂಟೆಗೆ ಭವ್ಯ ಮೆರವಣಿಗೆ ಮೂಲಕ ದೇವಿಯನ್ನು ಸೀಮೆಯಿಂದ ಪುರ ಪ್ರವೇಶ ಮಾಡಿಕೊಳ್ಳಲಾಗುತ್ತದೆ.

ಜೂ.28 ರಂದು ಬೆಳಗ್ಗೆ ಹೋಮ, ಮಹಾಪೂಜೆ, ರಾತ್ರಿ 7 ಕ್ಕೆ ಶಾಸಕ ವಿಶ್ವಾಸ ವೈದ್ಯ ಅವರ ಸನ್ಮಾನ ಕಾರ್ಯಕ್ರಮ, ನಂತರ ಜಾನಪದ ಕಲಾವಿದ ಶಬ್ಬೀರ್ ಡಾಂಗೆ ತಂಡದವರಿಂದ ರಸಮಂಜರಿ ಜರಗಲಿದೆ.

ಜೂನ್ 29 ರಂದು ಬೆಳಗ್ಗೆ ಉಡಿ ತುಂಬುವುದು, ರಾತ್ರಿ 9 ಕ್ಕೆ ಚೌಡಕಿ ಪದಗಳು, ಜೂನ್ 30 ರಂದು ದೇವಿಗೆ ವಿಶೇಷ ಪೂಜೆ, ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 8 ಕ್ಕೆ ದೇವಿಯರ ಹೊನ್ನಾಟ ಪ್ರಾರಂಭವಾಗಿ ರಾತ್ರಿ ಇಡೀ ನಡೆಯಲಿದೆ. ವಾದ್ಯ ಮೇಳ ಸಾಥ್ ನೀಡಲಿದೆ.

ಜುಲೈ 1 ರಂದು ಹೊನ್ನಾಟದ ಮೂಲಕ ಪಾದಗಟ್ಟಿ ತಲುಪುವುದು. ನಂತರ ದೇವಿಯನ್ನು ಸೀಮೆಗೆ ಕಳಿಸಲಾಗುವುದು. ಜೂನ್ 29 ಮತ್ತು 30 ರಂದು ಎತ್ತಿನಗಾಡಿ ಹಾಗೂ ಕುದುರೆ ಗಾಡಿ ಶರ್ಯತ್ತು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × one =