Breaking News

ಬಿಡಿಸಿದ ಹತ್ತಿಗೆ ಬೆಂಕಿ ತಗುಲಿ ಹಾಳು : ಶಾಸಕರ ಸಹೋದರನಿಂದ ವೈಯಕ್ತಿಕ ಧನಸಹಾಯ

Spread the love

ಬಿಡಿಸಿದ ಹತ್ತಿಗೆ ಬೆಂಕಿ ತಗುಲಿ ಹಾಳು : ಶಾಸಕರ ಸಹೋದರನಿಂದ ವೈಯಕ್ತಿಕ ಧನಸಹಾಯ

ಯುವ ಭಾರತ ಸುದ್ದಿ ದೇವರಹಿಪ್ಪರಗಿ :
ರೈತ ತನ್ನ ಹೊಲದಲ್ಲಿ ಬಿಡಿಸಿಟ್ಟ ಹತ್ತಿಗೆ ಅಕಾಲಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾಳಾದ ಘಟನೆ ತಾಲೂಕಿನ ಕೋರವಾರ ಗ್ರಾಮದ ರೈತ ಮಲಕಪ್ಪ ಹೊನಮಟ್ಟಿ ಅವರ ಕೈಗೆ ಬಂದ ತುತ್ತು ಬಾಯಿಗೆ ಬರಾದ ಪರಿಸ್ಥಿತಿಯಿಂದ ರೈತ ತುಂಬಾ ನೊಂದುಕೊಂಡಿದ್ದ. ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಬೆಳಗಾವಿಯಲ್ಲಿ ಇದ್ದ ಕಾರಣ ರವಿವಾರದಂದು ಅವರ ಸಹೋದರರಾದ ಸುರೇಶಗೌಡ ಪಾಟೀಲ ಸಾಸನೂರ ಅವರು ಮಾಹಿತಿ ಬಂದ ತಕ್ಷಣ ರೈತನ ಕುಟುಂಬಕ್ಕೆ ಸಾಂತ್ವನದ ಜೊತೆ ಧನ ಸಹಾಯ ಮಾಡಿ ಆತ್ಮಸ್ಥೈರ್ಯ ತುಂಬಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ಅಧಿಕಾರಿಗಳಿಗೆ ತಿಳಿಸಿರುತ್ತಾರೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಿಬಿನಾಳ ಸೇರಿದಂತೆ ಗ್ರಾಮದ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

twelve − eleven =