Breaking News

ಹೃದಯಾಘಾತದಿಂದ ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐ ಸಾವು !

Spread the love

ಹೃದಯಾಘಾತದಿಂದ ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐ ಸಾವು !

 

ಯುವ ಭಾರತ ಸುದ್ದಿ ಗೋಕಾಕ:
ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಕಳೆದ ಇಪ್ಪತ್ತು ದಿನಗಳ ಹಿಂದೆ ವರ್ಗಾವಣೆಯಾಗಿ ಗೋಕಾಕ ಗ್ರಾಮೀಣ ಠಾಣೆಗೆ ಅಪರಾಧ ವಿಭಾಗಕ್ಕೆ ಆಗಮಿಸಿದ್ದರು.ಗುರುವಾರ ರಾತ್ರಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಪಿಎಸ್ಐ ಪಕೀರಪ್ಪಾ ವಾಯ್ ತಳವಾರ (55) ಮೂಲತಃ ಬೀಳಗಿ ತಾಲೂಕು ಶಿರಗುಪ್ಪಿ ಗ್ರಾಮದವರಾಗಿದ್ದಾರೆ.
ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ಬಂದು ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆ ಗೋಕಾಕ ನಗರ‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸರಿಗೆ ಸಂದೇಹ :
ಫಕೀರಪ್ಪ ಅವರಿಗೆ ಪೊಲೀಸರು ಸಾಕಷ್ಟು ಸಲ ಫೋನ್ ಮಾಡಿದ್ದಾರೆ. ಆದರೆ ಅವರು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂದೇಹ ಬಂದು ಅವರ ಕೊಠಡಿ ಪರಿಶೀಲನೆ ನಡೆಸಿದಾಗ ನಿಧನರಾಗಿರುವುದು ಬೆಳಕಿಗೆ ಬಂದಿದೆ.

ಎಸ್‌ಪಿ ಭೇಟಿ :
ವಿಷಯ ತಿಳಿಯುತ್ತಲೇ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

twenty − 17 =