Breaking News

ತೀವ್ರ ಕುತೂಹಲ ಕೆರಳಿಸಿತು ಮುಂದಿನ ಸಿಎಂ ಕುರಿತ ಭವಿಷ್ಯ !

Spread the love

ತೀವ್ರ ಕುತೂಹಲ ಕೆರಳಿಸಿತು ಮುಂದಿನ ಸಿಎಂ ಕುರಿತ ಭವಿಷ್ಯ !

ಯುವ ಭಾರತ ಸುದ್ದಿ ಮಂಡ್ಯ :
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಆರ್ಭಟ ತುಸು ಜೋರಾಗಿದೆ. ಈ ನಡುವೆ ಜ್ಯೋತಿಷಿಗಳು ಹಾಗೂ ಚುನಾವಣಾ ಸಮೀಕ್ಷೆಗಳು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಮತ್ತು ಯಾರೂ ಮುಖ್ಯಮಂತ್ರಿ ಆಗುವ ಯೋಗ ಹೊಂದಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಈ ನಡುವೆ ಇಲ್ಲೊಂದು ಕುತೂಹಲಭರಿತ ಭವಿಷ್ಯ ಹೊರಬಿದ್ದಿದೆ.

ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ ನಾಡಿನಲ್ಲಿ ನಡೆದಿದೆ. ಆದರೆ ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಫೋಟೋವನ್ನು ಗೋಪಿ ಎಂಬುವವರ ಶ್ವಾನವೊಂದು ಎತ್ತಿ ಹಿಡಿಯುವ ಮೂಲಕ ಮುಂದಿನ ಮುಖ್ಯಮಂತ್ರಿ ಎನ್ನುವ ಸೂಚನೆಯನ್ನು ನೀಡಿದೆಯಂತೆ.

ಈ ಮೊದಲು ಹೆಸರಾಂತ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಸಾಯುವುದಕ್ಕೂ ಮುನ್ನಾ ಪ್ರತಿ ದಿನ ಅವರ ಫೋಟೋ ಹಿಡಿದುಕೊಳ್ಳುತ್ತಿತ್ತಂತೆ. ಹೀಗೆ ಗೋಪಿ ಅವರ ಶ್ವಾನ ನೀಡುತ್ತಿರುವ ಸೂಚನೆ ನಿಜವಾಗುತ್ತವೆ ಎನ್ನಲಾಗಿದೆ. ಈಗ ಕುಮಾರಸ್ವಾಮಿ ಫೋಟೋವನ್ನು ಎತ್ತಿ ಹಿಡಿದು ಮುಂದಿನ ಮುಖ್ಯಮಂತ್ರಿ ಎಂಬ ಸೂಚನೆ ನೀಡಿದೆ. ಕಳೆದ ಎರಡು ವರ್ಷಗಳಿಂದ ಈ ಶ್ವಾನ ಭವಿಷ್ಯ ನಿಜವಾಗುತ್ತಿದೆಯಂತೆ.

ಮಂಡ್ಯದ ಅಶೋಕನಗರದ ಗೋಪಿ ಎಂಬವರ ಭೈರವ ಹೆಸರಿನ ಶ್ವಾನ ಹೆಚ್‍.ಡಿ. ಕುಮಾರಸ್ವಾಮಿ ಅವರ ಭಾವಚಿತ್ರ ಸೂಚಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಎಂಬ ಸುಳಿವು ನೀಡಿದೆ. ಗೋಪಿ ಅವರು ಕಾಲಭೈರವನ ಭಕ್ತರು. ಪ್ರತಿ ಸೋಮವಾರ ಅವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ. ದೇವಸ್ಥಾನಕ್ಕೆ ತಮ್ಮ ಶ್ವಾನವನ್ನು ಸಹ ಕರೆದುಕೊಂಡು ಹೋಗುತ್ತಾರೆ. ಅದರಂತೆ ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಸಲ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂದು ಎಂದು ಡಿ.ಕೆ. ಶಿವಕುಮಾರ್, ಹೆಚ್‍.ಡಿ. ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಫೋಟೋ ಇಟ್ಟು ಕೇಳಿದ್ದಾರೆ. ಆಗ ಈ ಶ್ವಾನ ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ಹಿಡಿದಿದೆ. ಶ್ವಾನದ ಭವಿಷ್ಯ ನಿಜವಾಗುತ್ತದೋ ಎನ್ನುವುದನ್ನು ಕಾಲವೇ ನಿರ್ಧರಿಸಬೇಕಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

12 + 12 =