Breaking News

ದೇವಸ್ಥಾನದಿಂದ ಕದ್ದ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿದ ಕಳ್ಳ

Spread the love

ದೇವಸ್ಥಾನದಿಂದ ಕದ್ದ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿದ ಕಳ್ಳ

ಯುವ ಭಾರತ ಸುದ್ದಿ ಭುವನೇಶ್ವರ :
ದೇವಸ್ಥಾನದಿಂದ ಕಳ್ಳತನ ಮಾಡಿದ್ದ ಆಭರಣಗಳನ್ನು ಅನಾಮಧೇಯ ಕಳ್ಳನೊಬ್ಬ 9 ವರ್ಷಗಳ ಬಳಿಕ ಅದನ್ನು ಹಿಂತಿರುಗಿಸಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ರಾಜಧಾನಿ ಭುವನೇಶ್ವರದ ಧೌಲಿ ಪ್ರದೇಶದಲ್ಲಿರುವ ಗೋಪಿನಾಥಪುರದ ಗೋಪಿನಾಥ ದೇವಸ್ಥಾನದಿಂದ 2014ರ ಮೇ ತಿಂಗಳಿನಲ್ಲಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಕಿವಿಯೋಲೆ, ಬಳೆಗಳು, ಕೊಳಲು ಮತ್ತು ತಲೆಯ ಕವಚ ಸೇರಿದಂತೆ ಒಟ್ಟು ₹4 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು.
ಆದರೆ ಬರೋಬ್ಬರಿ 9 ವರ್ಷಗಳ ಬಳಿಕ ಕಳ್ಳತನ ಮಾಡಿದ್ದ ಎಲ್ಲ ಆಭರಣಗಳನ್ನು ದೇವಸ್ಥಾನಕ್ಕೆ ಹಿಂತಿರುಗಿಸಿರುವ ಕಳ್ಳ, ಆಭರಣಗಳ ಬ್ಯಾಗ್‌ ಜೊತೆಗೆ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ತೆರಳಿದ್ದಾನೆ. ಆ ವ್ಯಕ್ತಿ ಇತ್ತೀಚೆಗೆ ತಾನು ಭಗವದ್ಗೀತೆ ಓದಿರುವುದಾಗಿ ಹೇಳಿದ್ದಾನೆ ಮತ್ತು ಅದನ್ನು ಓದಿದ ನಂತರ ತಾನು ತಪ್ಪು ದಾರಿಯಲ್ಲಿ ಸಾಗಿರುವುದನ್ನು ಅರಿತುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ʻದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಆದರೆ ನಂತರದ ದಿನಗಳಲ್ಲಿ ನಾನು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಆದ್ದರಿಂದ, 9 ವರ್ಷಗಳ ನಂತರ ನಾನು ದೇವರ ಮುಂದೆ ಶರಣಾಗಲು ಮತ್ತು ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದೆ. ನಾನು ಹೆಸರು, ವಿಳಾಸ ಅಥವಾ ಗ್ರಾಮವನ್ನು ಉಲ್ಲೇಖಿಸುತ್ತಿಲ್ಲ. ನನ್ನ ಕೃತ್ಯಕ್ಕೆ ವಿಷಾದಿಸುತ್ತೇನೆ, ಕ್ಷಮಿಸಿʼ ಎಂದು ಆತ ಪತ್ರದಲ್ಲಿ
ಬೆಳ್ಳಿ ಆಭರಣಗಳಿದ್ದ ಬರೆದಿದ್ದಾನೆ. ಜೊತೆಗೆ ದೇವಸ್ಥಾನಕ್ಕೆ ದೇಣಿಗೆಯಾಗಿ 201 ರೂಪಾಯಿ ಮತ್ತು ಕಳ್ಳತನಕ್ಕೆ ಪ್ರಾಯಶ್ಚಿತವಾಗಿ 100 ದಂಡ ಸೇರಿದಂತೆ ಒಟ್ಟು 301 ರೂಪಾಯಿಯನ್ನು ʻಅನಾಮಧೇಯ ಕಳ್ಳʼ ಪತ್ರದ ಜೊತೆಗಿರಿಸಿದ್ದಾನೆ ಎಂದು ದೇವಸ್ಥಾನದ ಅರ್ಚಕ ಕೈಲಾಶ ಪಾಂಡಾ ತಿಳಿಸಿದ್ದಾರೆ. ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ.
ಕಳ್ಳತನವಾದ ಚಿನ್ನಾಭರಣಗಳು ವಾಪಸ್ ಬಂದಿರುವುದು ದೇವಸ್ಥಾನದ ಅಧಿಕಾರಿಗಳು ಹಾಗೂ ಭಕ್ತರಲ್ಲಿ ಸಂತಸ ತಂದಿದೆ. ಪಶ್ಚಾತ್ತಾಪ ಪಡುವ ಕಳ್ಳನ ಕೃತ್ಯ ಮತ್ತು ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನು ಆತ ಅರಿತುಕೊಂಡಿರುವುದು ಭಗವದ್ಗೀತೆಯ ಶಕ್ತಿಗೆ ಸಾಕ್ಷಿಯಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × 1 =