Breaking News

ಧರ್ಮಜಾಗೃತಿಯ ಪರಮತಪೋನಿಧಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ದಲಿಂಗ ಭಗವತ್ಪಾದರು

Spread the love

ಧರ್ಮಜಾಗೃತಿಯ ಪರಮತಪೋನಿಧಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ದಲಿಂಗ ಭಗವತ್ಪಾದರು
(ದಿನಾಂಕ:೨೯-೦೧-೨೦೨೪ ರಂದು ಜರುಗುವ ಪುಣ್ಯ ಸಂಸ್ಮರಣೆ ನಿಮಿತ್ಯ)


ನಿರಂಜನ ದೇವರಮನೆ, ಚಿತ್ರದುರ್ಗ.

ಪ್ರಪಂಚದಲ್ಲಿ ಹಲವು ಧರ್ಮಗಳು ಉದಯಿಸಿ ಧರ್ಮಜಾಗೃತಿ ಹಾಗೂ ಸಮಾಜದ ಪ್ರಗತಿಗೆ ಸದಾ ಶ್ರಮಿಸುತ್ತಾ ಬಂದಿವೆ. ಇಂಥ ಧರ್ಮಗಳ ಸಂಗಮವಾಗಿರುವ ಭಾರತದ ನೆಲದಲ್ಲಿ ವೀರಶೈವ ಧರ್ಮವು ಶ್ರೀ ಜಗದ್ಗುರು ಪಂಚಾಚಾರ್ಯರ ಆಣತಿಯಂತೆ ಸ್ಥಾಪನೆಗೊಂಡು ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಸತ್ಕಾçಂತಿಯುAಟು ಮಾಡಿದ ಒಂದು ವಿಶಿಷ್ಟ ಧರ್ಮವಾಗಿದೆ.
ಯುಗಗಳ ಇತಿಹಾಸ-ಪರಂಪರೆ ಹೊಂದಿರುವ ಈ ಪವಿತ್ರ ಧರ್ಮಪೀಠಗಳ ಶ್ರೀ ಜಗದ್ಗುರುಗಳು ಜನಮನದಲ್ಲಿ ಧಾರ್ಮಿಕ ಆಚಾರ-ವಿಚಾರಗಳನ್ನು ಅರುಹಿ, ಸದೃಢ ಸಮಾಜ, ರಾಷ್ಟçಪ್ರೇಮ ಹಾಗೂ ಜಾಗತಿಕ ಶಾಂತಿ-ನೆಮ್ಮದಿಯನ್ನ ತಂದಿತ್ತ ಕಾರಣಿತ ಯುಗಪುರುಷರಾಗಿದ್ದಾರೆ.
ಇಂಥ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀ ಮದುಜ್ಜಯನಿ ಸದ್ಧರ್ಮ ಪೀಠ ಸದಾ ಸಮಾಜಮುಖಿಯಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಎಲ್ಲಾ ಸಮುದಾಯದ ಜನತೆಗೆ ಸರ್ವೋದಯ-ಸಮನ್ವಯ ಸಾಮರಸ್ಯ ಹಾಗೂ ಶಾಂತಿ-ಸಮೃದ್ಧಿಯ ಸಂದೇಶ ನೀಡುತ್ತಾ ಬಂದಿದೆ. ಶ್ರೀ ಉಜ್ಜಯಿನಿ ಸದ್ಧರ್ಮ ಪೀಠ ದಾಖಲೆಯು ನಿರ್ಮಿತ ಪೀಠ. ಇದು ನೀತಿಯ ಆಧಾರದ ಮೇಲೆ ನಿರ್ಮಿತವಾಗಿ ರಾಷ್ಟಿçÃಯ ಗುರುಪೀಠವಾಗಿ, ಅಂತರಾಷ್ಟಿçÃಯ ಭಾವೈಕ್ಯತೆಯ ಭವ್ಯಪೀಠವಾಗಿ ರಾಜಮನ್ನಣೆಗೆ ಪಾತ್ರವಾಗಿ, ರಾಜಗುರು ಪೀಠವಾಗಿ ಹಾಗೂ ಪ್ರಜೆಗಳ ಹಿತರಕ್ಷಣೆಗೆ ಧರ್ಮವನ್ನು ಧಾರೆಯೆರೆದು ಪ್ರಜಾಸತ್ತಾತ್ಮಕ ಜನಪೀಠವೂ ಆಗಿ ಕಾರ್ಯನಿರ್ವಹಿಸುತ್ತ ಬಂದಿದೆ.
ಈ ಪವಿತ್ರ ಪರಂಪರೆಯಲ್ಲಿ ಅನೇಕ ಶ್ರೀ ಭಗವತ್ಪಾದರು ತಾವು ನಡೆದ ಧರ್ಮದ ಹಾದಿಯಲ್ಲಿ ಜನತೆಯನ್ನು ಮುನ್ನೆಡೆಸಿ ಸಾರ್ಥಕತೆ ಪಡೆದಿದ್ದಾರೆ. ಅವರಲ್ಲಿ ಲಿಂಗೈಕ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಸಹ ಒಬ್ಬರಾಗಿದ್ದಾರೆ.
ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಭಗವತ್ಪಾದರಾದ ಇವರು ವೀರಶೈವ ಧರ್ಮ ಮತ್ತು ಸಂಸ್ಕೃತಿಯನ್ನು ಬಲಗೊಳಿಸಿ ಅದನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಮುಖೇನ ಅದರ ಅಖಂಡತೆಯನ್ನು ವಿಸ್ತರಿಸಿದ ಮಹಾಮಹಿಮರಲ್ಲಿ ಪ್ರಮುಖರಾಗಿದ್ದಾರೆ.
ಚಿತ್ರದುರ್ಗ ಸೀಮೆಯ ಬಂಗಾರನಾಯಕನಹಳ್ಳಿ ಹಿರೇಮಠದ ವೇ|| ಚನ್ನಬಸಯ್ಯ ಮತ್ತು ಸೌ|| ಗುರುಸಿದ್ಧಮ್ಮನವರ ಪುಣ್ಯಗರ್ಭದಲ್ಲಿ ದಿನಾಂಕ: ೦೧-೦೨-೧೮೯೦ ರಂದು ಜನಿಸಿ ಎಲ್ಲಗುರು-ಹಿರಿಯರ ಅಚ್ಚು-ಮೆಚ್ಚಿನ ಸಾಧಕನಾಗಿ ಬೆಳೆದು ತನ್ನ ೮ನೇ ವಯಸ್ಸಿನಲ್ಲಿಯೇ ಇಷ್ಟಲಿಂಗ ದೀಕ್ಷೆ ಹಾಗೂ ಧರ್ಮೋಪದೇಶವನ್ನು ಪಡೆದು ೧೯೦೬ ರಂದು ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದಜಗದ್ಗುರುವಾಗಿ ನಿಯುಕ್ತಿ ಹೊಂದಿ ತಮ್ಮಅಧಿಕಾರವನ್ನು ಸ್ವೀಕರಿಸಿ ಪೀಠವನ್ನು ಮುನ್ನೆಡೆಸುವಲ್ಲಿ ಯಶಸ್ವಿಯಾದ ಧೀರ ಪುರುಷರು.
ಪತಂಜಲಿ ಮಹರ್ಷಿಯ ಯೋಗಶಾಸ್ತç, ಷಡ್‌ದರ್ಶನಗಳ ಅಧ್ಯಯನ ಹಾಗೂ ಸಿದ್ಧಾಂತ ಶಿಖಾಮಣಿ, ಭಗವದ್ಗೀತೆಯಂಥ ವಿಷಯಗಳ ಚಿಂತನೆಯ ಮೂಲಕ ತಮ್ಮ ವಿದ್ವತ್ತನ್ನು ಹೆಚ್ಚಿಸಿಕೊಂಡವರು.


ಶ್ರೀ ಭಗವತ್ಪಾದರು ಸದಾಇಷ್ಟಲಿಂಗಪೂಜೆ, ಜಪ-ತಪಗಳಿಂದ ದಿವ್ಯಜ್ಞಾನಿಯಾಗಿ ಶಿವಯೋಗ ಸಿದ್ಧಿಯನ್ನು ಸಾಧಿಸಿಕೊಂಡು ಜೀವನದ ಕಷ್ಟ-ನಷ್ಟಗಳಿಗೆ ಸಿಲುಕಿ ಬಾಯಿ ಬಿಡುವ ಭಕ್ತರಿಗೆತಮ್ಮ ಶಕ್ತಿಯನ್ನು ಅನುಗ್ರಹಿಸುತ್ತಿದ್ದ ಅಪ್ರತಿಮ ಶಿವಯೋಗಿಗಳು, ನಿರಂತರವಾಗಿ ತಮ್ಮ ಆಚಾರ-ವಿಚಾರಗಳನ್ನು ಕಾಯ್ದುಕೊಂಡು ಸಂಸ್ಕೃತ, ವೇದ, ಆಗಮಗಳನ್ನು ಅಧ್ಯಯನಮಾಡಿ, ಶಿವಾದ್ವೆöÊತವನ್ನು ಮತ್ತಷ್ಟು ಪ್ರಜ್ವಲಗೊಳಿಸಿ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಮುಖೇನ ಶಿವಯೋಗವನ್ನು ಸಾಧಿಸುವ ಪರಿಯನ್ನುಅತ್ಯಂತ ವ್ಯವಸ್ಥಿತವಾಗಿ ಬೋಧಿಸುತ್ತಿದ್ದರು.
ನಾಡಿನ ಹಲವು ಧರ್ಮಪೀಠಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂದರ್ಭಗಳಲ್ಲಿ ತಮ್ಮ ಪ್ರಬದ್ಧ ಚಿಂತನೆ ಮತ್ತು ಕ್ರಿಯಾತ್ಮಕ ಆಚರಣೆಯ ಮೂಲಕ ಅವುಗಳನ್ನು ಪರಿಹರಿಸುತ್ತಿದ್ದರು. ಜಾತಿ ಮತ ಪಂಥಗಳ ಮೇರೆಯನ್ನು ದಾಟಿ ಜೀವಾತ್ಮಗಳಿಗೆ ಲೇಸನ್ನೇ ಬಯಸುವ ಹಂಬಲ ಹೊಂದಿ ಬೇಡಿ ಬಂದ ಭಕ್ತರಿಗೆ ಧರ್ಮ, ಸಂಸ್ಕಾರ, ಸಂದೇಶಗಳನ್ನು ನೀಡುತ್ತಿದ್ದರು. ತಾವು ಸಂಚರಿಸಿದ ಕಡೆಗಳಲ್ಲೆಲ್ಲ ಕುಡಿಯುವ ನೀರು, ಕಲಿಯುವ ಶಾಲೆ, ಸಂಸ್ಕಾರ-ಸAಸ್ಕೃತಿ ನೀಡುವ ದೇವಮಂದಿರ, ಮುಕ್ತಿ ನೀಡುವ ರುದ್ರಭೂಮಿ ಹಾಗೂ ದೀನ-ದಲಿತ-ಶೋಷಿತ-ಅಸಹಾಯಕರಿಗೆ ಜೀವನ ಸೌಲಭ್ಯದ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಜಾತ್ಯಾತೀತ ಸಮಾಜವಾದ ಪ್ರಜಾಸತ್ತಾತ್ಮಕ ನಿಲುವುಗಳನ್ನು ಎತ್ತಿಹಿಡಿಯುತ್ತಿದ್ದರು. ಇದಕ್ಕೆ ಪವಾಡ ಸದೃಶಗಳೆಂಬAತೆ ಸಿದ್ಧಲಿಂಗನ ಬಾವಿಗಳು ಉತ್ತರಕರ್ನಾಟಕದಲ್ಲಿ ಇಂದಿಗೂ ಸಾಕ್ಷಿಯಾಗಿವೆ.
ಭಕ್ತರಿಗೆ ಏನೇ ಕಷ್ಟ-ಕಾರ್ಪಣ್ಯಗಳು ಬಂದರೂ ತಮ್ಮ ತಪಃಶಕ್ತಿಯಿಂದ ಅವೆಲ್ಲವುಗಳನ್ನು ಪರಿಹರಿಸಿ, ಅವರಲ್ಲಿ ಧರ್ಮ ಶ್ರದ್ಧೆ-ದೈವ ಶ್ರದ್ಧೆ ಬೆಳೆಯುವಂತೆ ಮಾಡಿದ್ದರು.
ಜನತೆಯ ಬದುಕಿಗೆ ಬೇಕಾಗಿದ್ದ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡಲು ಹಾಗೂ ಅನ್ನದಾಸೋಹ ಮತ್ತು ವಿದ್ಯಾದಾನಕ್ಕೆ ಅನುಕೂಲ ಕಲ್ಪಿಸಲುತಾವು ಸಾವಿರಾರು ಹೊನ್ನುಗಳನ್ನು ಅನುಗ್ರಹಿಸಿ, ವೀರಶೈವ ವಿದ್ಯಾವರ್ದಕ ಸಂಘವನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದವರು. ಈ ಸಂಘ ಇಂದು ನಾಡಿನೆಲ್ಲೆಡೆತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟಿದೆ.
ಧರ್ಮಪೀಠಗಳ ಸುಧಾರಣೆ ಹಾಗೂ ಮಹತ್ವವನ್ನು ಹೆಚ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ಭಾರತ ದಧರ್ಮದ ಪುಣ್ಯ ನೆಲೆವೀಡು ವಾರಣಾಸಿಯಲ್ಲಿ ೧೯೧೮ನೇ ಮಾರ್ಚಿ ೨೦ ರಂದು ಮಹಾ ಸಮ್ಮೇಳನವನ್ನು ಅರ್ಥಪೂರ್ಣತೆಯಿಂದ ನಡೆಸಿ ಎಲ್ಲಾಧರ್ಮೀಯರು ವೀರಶೈವವನ್ನು ಗೌರವಿಸುವಂತೆ ಮಾಡಿದ್ದವರು. ಸಮಾಜದ ಉನ್ನತಿ ಮತ್ತು ಪ್ರಗತಿಗಾಗಿ ಹಾಗೂ ಏಕತೆ ಮತ್ತು ಸಮನ್ವಯತೆ ಸಾಧಿಸಲು ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಜರುಗಿದ ವೀರಶೈವ ಮಹಾಸಭೆಯ ೫ನೇ ಅಧಿವೇಶನದ ಸಾರಥ್ಯ-ಸಾನಿಧ್ಯವಹಿಸಿ, ತಮ್ಮ ಸಂದೇಶದಲ್ಲಿ ಸಹಕಾರ ಸಮೃದ್ಧಿ ಸಹಬಾಳ್ವೆ ಸಮನ್ವಯತೆ ಮುಂತಾದ ಸಮಾಜೋದ್ಧಾರ್ಮಿಕ ಮೌಲ್ಯಗಳನ್ನು ಹರಿಯಬಿಟ್ಟಿದ್ದು. ಇಂದಿನ ವೀರಶೈವಧರ್ಮ ಹಾಗೂ ಸಮಾಜದ ಗಟ್ಟಿತನಕ್ಕೆ ಅಡಿಪಾಯವಾಗಿದೆ. ಇದೇ ಜಿಲ್ಲೆಯ ಬುಕ್ಕಾಂಬುಧಿ ಬೆಟ್ಟದಲ್ಲಿ ಉಗ್ರವಾದ ತಪಸ್ಸನ್ನು ಕೈಗೊಂಡು ತಮ್ಮಯೋಗಿಕ ಶಕ್ತಿಯನ್ನು ಪಡೆದು ಅಷ್ಟಸಿದ್ಧಿಗಳನ್ನು ಸಾಧಿಸಿಕೊಂಡು ಅವುಗಳನ್ನು ಭಕ್ತರಿಗೆ ಧಾರೆಯೆರೆಯುತ್ತಿದ್ದ ದೃಶ್ಯಗಳು ಇಂದಿಗೂ ಅವರ್ಣನೀಯವಾಗಿವೆ.
ಹೀಗೆ ಭಕ್ತರನ್ನ ಬೆಳಕಿನೆಡೆಗೆ ಕರೆತಂದು, ಜ್ಞಾನ-ಕ್ರಿಯೆಗಳನ್ನು ಧಾರೆಯೆರೆದು ಶಿವಾದ್ವೆöÊತ ಸಿದ್ಧಾಂತದ ಪ್ರಭೋಧಕರಾಗಿ, ಲಿಂಗಗುಣ ಸಂಪನ್ನ ಶಿವಾಚಾರದ ಗಣಿಯಾಗಿ, ಗುರು-ಲಿಂಗ-ಜAಗಮತ್ವದ ಗುರುಸಾರ್ವಭೌಮರಾಗಿ, ಪಂಚಪೀಠಗಳ ಕಾರಣಿಕ ಯುಗಪುರುಷರಾಗಿ, ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಶಕ್ತಿ ತುಂಬಿದ ಜ್ಞಾನಸೂರ್ಯರಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಸಾವಿರಾರು ಪವಾಡಗಳು ಹಾಗೂ ಸಂಕಲ್ಪಿತ ಕಾರ್ಯಗಳನ್ನು ಕಾರ್ಯಗತಗೊಳಿಸುವ ಮುಖೇನ ಭಕ್ತರ ಹೃದಯದಲ್ಲಿ ಸಾಧನೆಯ ಸಿದ್ಧಿ ಸತ್ಪುರುಷನೆಂದೆ ಅಭಿದಾನವನ್ನು ಪಡೆದು ೧೯೩೬ರಲ್ಲಿ ಲಿಂಗಾAಗ ಸಾಮರಸ್ಯದಲ್ಲಿ ಒಂದಾಗಿ ತಮ್ಮ ಚಿತ್ಪçಭೆಯನ್ನು ಹಾಗೂ ಉಳಿಸಿಕೊಂಡವರು. ಇಂಥ ಪರಮತಪೋನಿಧಿಗಳ ಪವಾಡ ಸದೃಶ ಬಹುಮುಖಿ ಕಾರ್ಯಗಳು ಭಕ್ತರ ಹೃನ್ಮಂದಿರಗಳಲ್ಲಿ ಈಗಲೂ ವಿರಾಜಮಾನವಾಗಿವೆ.


ಶ್ರೀ ರಂಭಾಪುರಿ ಶಿವಾನಂದ ಶಿವಾಚಾರ್ಯ ಭಗವತ್ಪಾದರಿಗೆ ರಂಭಾಪುರಿ ಪೀಠದ ಜಗದಾಚಾರ್ಯರನ್ನಾಗಿ ಆರೈಸಿ, ಅಭಿನಂದಿಸಿದ್ದು ಹಾಗೂ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರಿಗೆ ಮುಂದೊAದು ದಿನ ಜಗದ್ಗುರುಗಳಾಗುವಂತೆ ಆರ್ಶೀವಾದ ಮಾಡಿದ್ದು ಹಾಗೂ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರಕ್ಕಾಗಿ ೧೯೨೭ ರ ಶ್ರೀ ಜಗದ್ಗುರು ದಾರುಕ ಜಯಂತಿ ಶುಭ ಸಂದರ್ಭದಲ್ಲಿ ಪಂಚಾಚಾರ್ಯ ಪ್ರಭಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಶ್ರೀ ಕಾಶೀನಾಥ ಶಾಸ್ತಿçಗಳವರ ದಕ್ಷ ಸಂಪಾದಕತ್ವದೊAದಿಗೆ ಪಂಚಪೀಠಾಚಾರ್ಯರ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಾಭಿವೃದ್ಧಿ ಕಾರ್ಯಗಳನ್ನು ಅನಾವರಣಗೊಳಿಸಿದ್ದು ಅತ್ಯಂತ ಅವಿಸ್ಮರಣೀಯ ಚಾರಿತ್ರಿಕ ಸಂಗತಿಯಾಗಿದೆ.
ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀಮದ್ ಉಜ್ಜಯಿನಿ ಸದ್ಧರ್ಮಪೀಠದ ಪರಂಪರೆ ಹಾಗೂ ಧರ್ಮಾಚರಣೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅನುಷ್ಟಾನಗೊಳಿಸುವ ಮುಖೇನ ಲಿಂ.ಭಗವತ್ಪಾದರ ಪವಾಡ ಸದೃಶ ಕಾರ್ಯಗಳನ್ನು ಸಮಾಜಮುಖಿಯಾಗಿಸಿರುವುದು ಇನ್ನಷ್ಟು ವಿಶೇಷವಾಗಿದೆ. ವೀರಶೈವ-ಲಿಂಗಾಯಿತ ಧರ್ಮ ಮತ್ತು ಸಂಸ್ಕೃತಿಯನ್ನು ಆಧುನಿಕತೆಗೆ ಮುಖಾಮುಖಿಯಾಗಿಸುವ ಮುಖೇನ ಶ್ರೀ ರೇಣುಕಾದಿ ಪಂಚಾಚಾರ್ಯರ ಕಾರ್ಯಕ್ಷಮತೆಯ ಆಸ್ಮಿತೆಯನ್ನು ಇಡೀ ರಾಷ್ಟçಕ್ಕೆ ಅನಾವರಣಗೊಳಿಸಿದ್ದಾರೆ. ಧರ್ಮ ಜಾಗೃತಿಯ ಪರಮ ತಪೋನಿಧಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ೮೮ನೇ ವರ್ಷ ಪುಣ್ಯ ಸಂಸ್ಮರಣೆ ನಿಮಿತ್ತ ಪ್ರಸ್ತುತ ಶ್ರೀ ಜಗದ್ಗುರುಗಳು ಚಿಕ್ಕಮಗಳೂರು ಜಿಲ್ಲೆಯ ಬುಕ್ಕಾಂಬುಧಿ ತಪೋಕ್ಷೇತ್ರದಲ್ಲಿ ದಿನಾಂಕ: ೨೪-೦೧-೨೦೨೪ ರಿಂದ ೨೮-೦೧-೨೦೨೪ ರವರೆಗೆ ಇಷ್ಟಲಿಂಗ ತಪೋನುಷ್ಟಾನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವರು. ದಿನಾಂಕ: ೨೯-೦೧-೨೦೨೪ ರಂದು ಬುಕ್ಕಾಂಬುಧಿ ಮಹಾಕ್ಷೇತ್ರದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನಿಧ್ಯದಲ್ಲಿ ಪುಣ್ಯ ಸ್ಮರಣೋತ್ಸವ ಮತ್ತು ಶ್ರೀ ಉಜ್ಜಯಿನಿ ಮಹಾಪೀಠದಲ್ಲಿ ಪ್ರಸ್ತುತ ಶ್ರೀ ಸಿದ್ದಲಿಂಗರಾಜದೇಶಿಕೇAದ್ರ ಶಿವಾಚಾರ್ಯ ಭಗವತ್ಪಾದರ ಪವಿತ್ರ ಸಾನಿಧ್ಯದಲ್ಲಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳವರ ಸಂಸ್ಮರಣೆ ಹಾಗೂ ದಿನಾಂಕ: ೦೧-೦೨-೨೦೨೪ ರಂದು ಬಳ್ಳಾರಿ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಪುಣ್ಯ ಸ್ಮರಣೋತ್ಸವ ಅತ್ಯಂತ ಭಕ್ತಿ, ಶ್ರದ್ಧೆ, ನಿಷ್ಠೆಯೊಂದಿಗೆ ನಾಡಿನ ಸಮಸ್ತ ಭಕ್ತಾದಿಗಳ ಉಪಸ್ಥಿತಿಯಲ್ಲಿ ಜರುಗುವುದು.
ಈ ದಿಸೆಯಲ್ಲಿ ಪರಮ ತಪೋನಿಧಿಗಳ ಪವಾಡ ಸದೃಶ ಬಹುಮುಖಿ ಕಾರ್ಯಗಳು ಭಕ್ತರ ಹೃನ್ಮಂದಿರದಲ್ಲಿ ವಿರಾಜಮಾನವಾದ ನಿಮಿತ್ತ ಇವರನ್ನು ಅನುದಿನವೂ ನೆನೆಯುವುದರೊಂದಿಗೆ ಅವರಿಗೆ ಕೃತಜ್ಞತಭಾವ ಸಮರ್ಪಿಸೋಣ.

-ನಿರಂಜನ ದೇವರಮನೆ
ಚಿತ್ರದುರ್ಗ.
ಮೊ: ೯೪೪೯೦ ೨೨೦೬೯.

 


Spread the love

About Yuva Bharatha

Check Also

ಮಿನಿ ಗೂಡ್ಸ್ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.!

Spread the loveಮಿನಿ ಗೂಡ್ಸ್ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.! ಗೋಕಾಕ: …

Leave a Reply

Your email address will not be published. Required fields are marked *

6 − two =