Breaking News

ರಾಜ್ಯದಲ್ಲಿ 57 ಸಾವು: 2313 ಜನರಿಗೆ ಸೊಂಕು

Spread the love

ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 57 ಸಾವು: 2313 ಜನರಿಗೆ ಸೊಂಕು
ಬೆಳಗಾವಿ. ಜು: 10: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು ಇಂದು 2313 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು 33418 ಸೊಂಕಿತರ ಸಂಖ್ಯೆಕ್ಕೆ ಏರಿದೆ. ಇಂದು 1003 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಇಂದು ರಾಜ್ಯದಲ್ಲಿ ಒಟ್ಟು 57 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 15 ಜನರಿಗೆ ಸೊಂಕು ತಗುಲಿದೆ. ಹುಕ್ಕೇರಿ ಪಟ್ಟಣದ 58 ವರ್ಷದ ಮಹಿಳೆ ಮತ್ತು ಅಥಣಿ ಪಟ್ಟಣದ 67 ವರ್ಷದ ‌ಮಹಿಳೆ ಇಂದು ಸಾವನ್ನಪ್ಪಿದ್ದಾರೆ.
ಬೆಳಗಾವಿ ನಗರದ ಸದಾಶಿವ ನಗರ, ಹಿಂದವಾಡಿ, ಖಾಸಬಾಗ, ಬಸವಣ ಕುಡಚಿ, ಬೆಳಗಾವಿ , ಎಳೆಬೈಲ ಪ್ರದೇಶದಲ್ಲಿ ತಲಾ ಓರ್ವರಿಗೆ, ಬೈಲಹೊಂಗಲ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಇಬ್ಬರಿಗೆ, ಹುಕ್ಕೇರಿ ಪಟ್ಟಣದಲ್ಲಿ , ಚಿಕ್ಕೋಡಿ ತಾಲೂಕಿನ ಆಡಿ, ಸೌಂದಲಗಾ , ಜೈನವಾಡಿ, ಅಥಣಿ ಪಟ್ಟಣದಲ್ಲಿ, ತಾಲೂಕಿನ ಐನಾಪುರ, ಹಾಗೂ ರಾಯಬಾಗ ತಾಲೂಕಿನ ಬೊಚವಾಡ ಗ್ರಾಮದಲ್ಲಿ ತಲಾ ಓರ್ವರಿಗೆ ಸೇರಿದಂತೆ ಒಟ್ಟು 15 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಬೆಂಗಳೂರು ನಗರದಲ್ಲಿ- 1447, ದಕ್ಷಿಣ ಕನ್ನಡ -139, ವಿಜಯಪುರ-89, ಬಳ್ಳಾರಿ-66, ಕಲಬುರಗಿ -58, ಯಾದಗಿರಿ ಮತ್ತು ಮೈಸೂರು ತಲಾ-51, ಧಾರವಾಡ -50, ಹಾವೇರಿ-42, ಉಡುಪಿ-34, ಉತ್ತರ ಕನ್ನಡ ಮತ್ತು ಕೊಡಗು -33, ಮಂಡ್ಯ-31, ರಾಯಚೂರು-23, ದಾವಣಗೆರೆ-21, ಬೀದರ ಮತ್ತು ಗದಗ – 19, ಚಿಕ್ಕಬಳ್ಳಾಪುರ – 12, ತುಮಕೂರು-10, ಕೋಲಾರ ಮತ್ತು ಚಾಮರಾಜನಗರ ತಲಾ -9, ಕೊಪ್ಪಳ-7, ಹಾಸನ, ಶಿವಮೊಗ್ಗ, ಬಾಗಲಕೋಟ ತಲಾ – 6, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ತಲಾ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

9 + 15 =