Breaking News

ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ ಅರನ್ನು ಕಾಂಗ್ರೇಸ್ ಪಕ್ಷ ಸೋಲಿಸಿದ ಆ ಪಕ್ಷವನ್ನು ತಿರಸ್ಕರಿಸುವಂತೆ- ರಮೇಶ ಜಾರಕಿಹೊಳಿ!

Spread the love

ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ ಅರನ್ನು ಕಾಂಗ್ರೇಸ್ ಪಕ್ಷ ಸೋಲಿಸಿದ ಆ ಪಕ್ಷವನ್ನು ತಿರಸ್ಕರಿಸುವಂತೆ- ರಮೇಶ ಜಾರಕಿಹೊಳಿ!

ಯುವ ಭಾರತ ಸುದ್ದಿ ಗೋಕಾಕ: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ ಅರನ್ನು ಕಾಂಗ್ರೇಸ್ ಪಕ್ಷ ಸೋಲಿಸಿದ ಆ ಪಕ್ಷವನ್ನು ತಿರಸ್ಕರಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ ಸಮಾವೇಶ ಉದ್ಘಾಟಿಸುತ್ತಿರುವದು.

ಅವರು, ಶನಿವಾರದಂದು ನಗರ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ನಡೆದ ದಲಿತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ದಲಿತ ಸಮುದಾಯವನ್ನು ಕಾಂಗ್ರೇಸ ಪಕ್ಷ ಮತಗಳ ಬ್ಯಾಂಕನ್ನಾಗಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿಲ್ಲ. ನಾಯಕರುಗಳು ಬೆಳೆಯಲು ಅವಕಾಶ ಕೊಡದೆ, ಕೆಲವರ ಕಪಿಮುಷ್ಠಿಯಲ್ಲಿ ಪಕ್ಷ ಸಿಲೂಕಿ ನಿರ್ನಾಮವಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅವಸಾನದತ್ತ ಸಾಗಿದ್ದು, ಇದಕ್ಕೆ ಕಾರಣ ಡಿ ಕೆ ಶಿವಕುಮಾರ. ಕೇವಲ ತಮ್ಮ ಕ್ಷೇತ್ರದಲ್ಲಿ ಮಾತ್ರ ಪ್ರಭಾವ ಹೊಂದಿದ್ದು ರಾಜ್ಯದಲ್ಲೆಲ್ಲೂ ಇವರ ಪ್ರಭಾವವಿಲ್ಲ. ದೇವರ ಆಶೀರ್ವಾಧ ನಿಮ್ಮೆಲ್ಲರ ಶಕ್ತಿಯಿಂದ ಇಂದು ರಾಜ್ಯ ರಾಷ್ಟç ಮಟ್ಟದಲ್ಲಿ ನನಗೆ ಶಕ್ತಿ ಬಂದಿದೆ. ಅರಭಾಂವಿ ಮತ್ತು ಗೋಕಾಕ ಕ್ಷೇತ್ರಗಳು ಜಾತ್ಯಾತೀತ ಕ್ಷೇತ್ರಗಳಾಗಿದ್ದು ಎಲ್ಲ ಸಮುದಾಯ ಬಾಂಧವರು ಆಶೀರ್ವಧಿಸುತ್ತಲೇ ಬಂದಿದ್ದಾರೆ. ನಿಮ್ಮ ಆಶೀರ್ವಾಧ ಸದಾ ಹೀಗೆ ಇರಲಿ ಎಂದರು.
ಭಾರತೀಯ ಜನತಾ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜಗತ್ತಿನಲ್ಲೇ ಬಲಿಷ್ಠವಾಗುತ್ತಿದೆ. ಎಲ್ಲ ಸಮುದಾಯಗಳ ಅಭಿವೃದ್ಧಿಪರ ಯೋಜನೆಗಳೊಂದಿಗೆ ಮೋದಿಯವರು ಶ್ರಮಿಸುತ್ತಿದ್ದಾರೆ. ಸಿಎಮ್ ಬೊಮ್ಮಾಯಿ ಒಳಮೀಸಲಾತಿ ನೀಡಿ ದಲಿತರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಎಲ್ಲರೂ ಬೆಂಬಲಿಸುವAತೆ ವಿನಂತಿಸಿದರು.

ನನ್ನ ಅಧಿಕಾರಿ ಅವಧಿಯಲ್ಲಿ ಅರಭಾಂವಿ, ಗೋಕಾಕ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ರಾಜ್ಯಾಧ್ಯಂತ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರೈಸಿ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಶ್ರಮಿಸಿದ್ದು ಮುಂದಿನ ದಿನಗಳಲ್ಲೂ ಉಳಿದ ಯೋಜನೆಗಳನ್ನು ಕಾರ್ಯಗತ ಮಾಡಿ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಲಾಗುವದು. ರಾಜ್ಯದಲ್ಲಿ ಎರಡು ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನ ಹಾಗೂ ಸಹೋದರ ಬಾಲಚಂದ್ರ ಅವರ ಪಾತ್ರ ಮಹತ್ವದ್ದಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡು ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ನಮಗೆ ಆಶಿರ್ವಧಿಸಿ ಶಕ್ತಿ ನೀಡುವಂತೆ ಮನವಿ ಮಾಡಿದರು.
ದಲಿತ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಅಶೋಕ ಅಸೂದೆ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಸಮುದಾಯಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರ ಮಾರ್ಗದಲ್ಲಯೇ ನಮ್ಮೆಲ್ಲರ ನಾಯಕರಾದ ರಮೇಶ ಜಾರಕಿಹೊಳಿ ಅವರು ಬದಲಾವಣೆಯೊಂದಿಗೆ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹೃದಯ ಶ್ರೀಮಂತಿಕೆಯೊAದಿಗೆ ಜನಸ್ನೇಹಿಯಾಗಿ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿ ನಿಜವಾದ ನಾಯಕರಾಗಿದ್ದಾರೆ. ಅವರನ್ನು ಅತಿ ಹೆಚ್ಚು ಮತಗಳ ಅಂತರದಿAದ ಆರಿಸಿ ಅವರ ಶಕ್ತಿ ಹೆಚ್ಚಿಸುವಂತೆ ಕರೆ ನೀಡಿದರು.

ಗೋಕಾಕ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ.

ವೇದಿಕೆಯ ಮೇಲೆ ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ವೀರಭದ್ರ ಗಂಡವ್ವಗೋಳ, ಮಂಜುನಾಥ ಮಾವರಕರ, ತಳದಪ್ಪ ಅಮ್ಮನಗಿ, ಎಮ್ ಆರ್ ಭಜಂತ್ರಿ, ನಿವೃತ್ತ ಪೋಲಿಸ್ ಅಧಿಕಾರಿ ಶಿಂಗ್ಯಾಗೋಳ, ಸುಧೀರ ಜೊಡಟ್ಟಿ, ಹನಮಂತ ಗಾಡಿವಡ್ಡರ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಹನಮಂತ ಕವಲಗಿ, ಶ್ರೀಮತಿ ಸುಂದ್ರವ್ವ ಕಟ್ಟಿಮನಿ, ಅಜೀತ ಹರಿಜನ, ನಟರಾಜ ಶೆಟ್ಟೆನ್ನವರ, ಭರಮಣ್ಣ ಮುತ್ತೆನ್ನವರ, ಮಹಾದೇವ ಜಟ್ಟೆಪ್ಪನವರ, ಮಲ್ಲಪ್ಪ ಕಾಂಬಳೆ, ಮಯೂರ ತಳವಾರ, ವೀರಭದ್ರ ಮೈಲನ್ನವರ, ವಿಠ್ಠಲ ಸಣ್ಣಕ್ಕಿ, ಅಶೋಕ ಮೇಸ್ತ್ರಿ, ಕಾಡಪ್ಪ ಮೇಸ್ತ್ರಿ, ರಾಮಕೃಷ್ಣ ಮನ್ನಿಕೇರಿ.ಲಕ್ಷ್ಮಣ ಕಡೆಪ್ಪಗೊಳ, ದಯಾನಂದ ಗುಡಾಜ, ಸಂತೋಷ ಬೂದಿಹಾಳ, ಎಲ್ ಸಿ ಗಾಡಿವಡ್ಡರ, ಮಂಜುನಾಥ ಅಮ್ಮಣಗಿ ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

17 − two =