Breaking News

ಶಾಸಕ ಬಾಲಚಂದ್ರ ಜಾರಕಿಹೊಳಿಸರ್ವ ಜನಾಂಗಗಳ ಶಾಂತಿಯ ಪ್ರತೀಕರಾಗಿದ್ದಾರೆ-ಭೂತಪ್ಪ ಗೊಡೇರ.!

Spread the love

ಶಾಸಕ ಬಾಲಚಂದ್ರ ಜಾರಕಿಹೊಳಿಸರ್ವ ಜನಾಂಗಗಳ ಶಾಂತಿಯ ಪ್ರತೀಕರಾಗಿದ್ದಾರೆ-ಭೂತಪ್ಪ ಗೊಡೇರ.!


ಗೋಕಾಕ: ೨೦೦೪ ರಿಂದ ಅರಭಾವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಎಲ್ಲ ಧರ್ಮಿಯರ ಜನಾಂಗಗಳನ್ನು ಒಂದುಗೂಡಿಸುವ ಮೂಲಕ ಸರ್ವ ಜನಾಂಗಗಳ ಶಾಂತಿಯ ಪ್ರತೀಕರಾಗಿದ್ದಾರೆ ಎಂದು ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ ಹೇಳಿದರು.
ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯಿಂದ ೩ ಕೋಟಿ ರೂ. ವೆಚ್ಚದ ಉದಗಟ್ಟಿ ಕ್ರಾಸ್‌ದಿಂದ ಉದಗಟ್ಟಿವರೆಗಿನ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಲಚಂದ್ರ ಜಾರಕಿಹೊಳಿ ಅವರಿಂದ ಅರಭಾವಿ ಕ್ಷೇತ್ರದಲ್ಲಿ ಶಾಂತಿ-ಸಾಮರಸ್ಯ ಮೂಡುತ್ತಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಈ ನಾಡಿನ ಕೊಡಗೈ ದೊರೆಯಾಗಿ ಹೆಸರುವಾಸಿಯಾಗಿದ್ದಾರೆ. ಅವರಲ್ಲಿ ಯಾರೇ ಅಪರಿಚಿತರು ಬಂದು ತಮ್ಮ ಕಷ್ಠ-ಕಾರ್ಪಣ್ಯಗಳನ್ನು ತೋಡಿಕೊಂಡರೂ ತತಕ್ಷಣವೇ ಸ್ಪಂದನ ಮಾಡುವ ಹೃದಯವಂತ ಶಾಸಕರು ಎಂದು ಅವರು ಹೇಳಿದರು.
ಮುಖಂಡರಾದ ಹನಮಂತ ಕೊಪ್ಪದ, ತಾಪಂ ಮಾಜಿ ಸದಸ್ಯ ಮಲಕಾರಿ ವಡೇರ, ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರAಗ ದೊಡಮನಿ, ಮುಂತಾದವರು ಮಾತನಾಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿದರು. ಉದಗಟ್ಟಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉದಗಟ್ಟಿ ಗ್ರಾಪಂ ಅಧ್ಯಕ್ಷ ಅರ್ಜುನ ಸನದಿ, ರಂಗಪ್ಪ ಛಪ್ರಿ, ರಾಜು ಬಳಿಗಾರ, ಸಂಜು ಸನದಿ, ಮುತ್ತೆಪ್ಪ ಬಾಗನ್ನವರ, ಯಲ್ಲಪ್ಪ ಮಿಂಚ್ಯಾಗೋಳ, ಲಕ್ಷö್ಮಣ ಗುಡದಾರ, ಮುತ್ತೆಪ್ಪ ನಾಯ್ಕ, ನಾಗಪ್ಪ ಗುಡದಾರ, ಕಲ್ಲಪ್ಪ ಅಕ್ಕೆನ್ನವರ, ಕೃಷ್ಣಾ ಛಪ್ರಿ, ಭೀಮಶೆಪ್ಪ ಗೊಡೇರ, ಗೋಪಾಲ ಮುಧೋಳ, ಪುಂಡಲೀಕ ಬಾಗನ್ನವರ, ಪಿಡಿಓ ದೇಯನ್ನವರ, ಗುತ್ತಿಗೆದಾರ ಬಸವಂತ ದಾಸನವರ ಮುಂತಾದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

1 × five =