Breaking News

ಕಮಲ ಕಹಳೆಗೆ ಕ್ಷಣಗಣನೆ !

Spread the love

ಕಮಲ ಕಹಳೆಗೆ ಕ್ಷಣಗಣನೆ !

ಯುವ ಭಾರತ ಸುದ್ದಿ ಗೋಕಾಕ :
ಗೋಕಾಕ ಮತಕ್ಷೇತ್ರದ ಬಿಜೆಪಿ ಸಮಾವೇಶ ಕೆಲವೇ ಗಂಟೆಗಳಲ್ಲಿ ನಡೆಯಲಿದೆ. ಇದಕ್ಕಾಗಿ ಅಂಕಲಗಿ ಗ್ರಾಮ ಸಜ್ಜಾಗಿದ್ದು ಸಮಾವೇಶಕ್ಕೆ ಕ್ಷಣಗಣನೆ ನಡೆದಿದೆ.

ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಅಪಾರ ಅಭಿಮಾನಿಗಳನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡುವರು. ಬಿಜೆಪಿ ಸಮಾವೇಶಕ್ಕೆ ಇಡೀ ಕುಂದರನಾಡು ಸನ್ನದಗೊಂಡಿದೆ. ಅಂಕಲಗಿ, ಅಕ್ಕ ತಂಗೇರಹಾಳ ಪಟ್ಟಣ ಪಂಚಾಯಿತಿ, ಕುಂದರಗಿ, ಬೆಣಚನಮರಡಿ-ಉ, ತವಗ ಮದವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಇಂದು ಸಂಜೆ 5 ಗಂಟೆಗೆ ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಬಳಿಯ ಹೈಸ್ಕೂಲ್ ಮೈದಾನ ಇದೀಗ ಸಂಪೂರ್ಣ ಕೇಸರಿಮಯಗೊಂಡಿದ್ದು ಎಲ್ಲರ ಚಿತ್ತ ಬಿಜೆಪಿ ಸಮಾವೇಶದತ್ತ ನೆಟ್ಟಿದೆ.

ಬೃಹತ್ ರೋಡ್ ಶೋ :
ಅಂಕಲಗಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ನಿಂದ ಸಮಾವೇಶ ನಡೆಯುವ ಸ್ಥಳದವರೆಗೆ 3,500ಕ್ಕೂ ಅಧಿಕ  ಬೈಕ್ ರ‌್ಯಾಲಿ ಮೂಲಕ ರೋಡ್ ಶೋನ್ನು ಶಾಸಕ ರಮೇಶ ಜಾರಕಿಹೊಳಿ ನಡೆಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಮಲ ಸೇರ್ಪಡೆ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಎಲ್.ತಳವಾರ ಸೇರಿದಂತೆ 25 ಕ್ಕೂ ವಿವಿಧ ಪಕ್ಷಗಳ ಮುಖಂಡರು ಇಂದು ಅಂಕಲಗಿ ಸಮಾವೇಶದಲ್ಲಿ ಬಿಜೆಪಿ ಸೇರಲಿದ್ದಾರೆ.


Spread the love

About Yuva Bharatha

Check Also

ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಾಮಾನ್ಯ ವ್ಯಕ್ತಿಯ ಕಡೆಯಿಂದ ಶಂಕುಸ್ಥಾಪನೆಗೆ ಚಾಲನೆ ನೀಡಿದ ರಮೇಶ ಜಾರಕಿಹೊಳಿ !

Spread the loveಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಾಮಾನ್ಯ ವ್ಯಕ್ತಿಯ ಕಡೆಯಿಂದ ಶಂಕುಸ್ಥಾಪನೆಗೆ ಚಾಲನೆ ನೀಡಿದ ರಮೇಶ ಜಾರಕಿಹೊಳಿ …

Leave a Reply

Your email address will not be published. Required fields are marked *

six − 6 =