Breaking News

Yuva Bharatha

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು ಸೃಷ್ಟಿಕರ್ತನಾದ ಪರಬ್ರಹ್ಮನು ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿಸಿ ಪೂರ್ಣಗೊಳಿಸಿದನೆಂದು ಪ್ರತೀತಿ. ನಾವು ಪ್ರಕೃತಿ ಮಾತೆಯ ಮಡಿಲಿನ ಅತ್ಯಂತ ಬುದ್ಧಿವಂತ ಸೃಷ್ಟಿಯಾದ ಕಾರಣ ; ಈ ದಿನದಂದು ಸುತ್ತಲಿನ ನಿಸರ್ಗವನ್ನು ಸೂಕ್ಷ್ಮ ವಾಗಿ ಅವಲೋಕಿಸಿದಾಗ ಹೊಸ ಚೈತನ್ಯದ ಅನುಭವ ಖಂಡಿತವಾಗಿಯೂ ನಮ್ಮ ಇಂದ್ರಿಯ ಮತ್ತು ಮನಸ್ಸುಗಳಿಗೆ ನಿಲುಕುತ್ತದೆ. ಮಾವು -ಬೇವು ಹೊಂಗೆಯಂಥ ಮರಗಳತ್ತ ಸುಮ್ಮನೇ …

Read More »

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ ಯುವ ಭಾರತ ಸುದ್ದಿ ಬೆಂಗಳೂರು: ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಶ್ರೀ ಮಠದ ಪರಂಪರೆಯನ್ನು ಉಳಿಸುವಲ್ಲಿ ಸ್ವಾಮೀಜಿಗಳ ಕಾರ್ಯ ಅಪಾರವಾಗಿತ್ತು. ಶೈಕ್ಷಣಿಕ ಕ್ಷೇತ್ರದ ಸಮಗ್ರ ಪ್ರಗತಿಗಾಗಿಯೂ ಹಗಲಿರುಳು ದುಡಿದಿದ್ದಾರೆ‌. ಕಳೆದ ನಾಲ್ಕು ದಶಕಗಳಿಂದ …

Read More »

ದೀರ್ಘ ದಂಡ ಹಾಕುವುದು ಕಾರು ಹರಿದು ಯುವತಿ ಸಾವು

ದೀರ್ಘ ದಂಡ ಹಾಕುವುದು ಕಾರು ಹರಿದು ಯುವತಿ ಸಾವು ಯುವ ಭಾರತ ಸುದ್ದಿ ಅಥಣಿ : ತೀರ್ಥ ಗ್ರಾಮದಲ್ಲಿ ದೇವರಿಗೆ ದೀರ್ಘ ದಂಡ ಹಾಕುವಾಗ ಕಾರು ಹರಿದು ಐಶ್ವರ್ಯಾ ನಾಯಿಕ (23) ಎಂಬುವವರು ಗುರುವಾರ ಮೃತಪಟ್ಟಿದ್ದಾರೆ. ಜಾತ್ರೆ ಪ್ರಯುಕ್ತ ಕೃಷ್ಣಾ ನದಿ ತೀರದಿಂದ ದೇವಸ್ಥಾನದವರೆಗೆ ದೀರ್ಘ ದಂಡ ಹಾಕುವಾಗ ಕಾರು ಹರಿದಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವ್ಯಾಕ್ಸಿನ್ ಡಿಪೋ ಬಳಿ ಅಕ್ರಮವಾಗಿ ಮರಕ್ಕೆ ಕೊಡಲಿ : ತಕ್ಷಣ ಧಾವಿಸಿ ಕ್ರಮಕ್ಕೆ ಒತ್ತಾಯಿಸಿದ ಕಿರಣ ಜಾಧವ

ವ್ಯಾಕ್ಸಿನ್ ಡಿಪೋ ಬಳಿ ಅಕ್ರಮವಾಗಿ ಮರಕ್ಕೆ ಕೊಡಲಿ : ತಕ್ಷಣ ಧಾವಿಸಿ ಕ್ರಮಕ್ಕೆ ಒತ್ತಾಯಿಸಿದ ಕಿರಣ ಜಾಧವ ಯುವ ಭಾರತ ಸುದ್ದಿ ಬೆಳಗಾವಿ : ವ್ಯಾಕ್ಸಿನ್ ಡಿಪೋ ರಸ್ತೆ ಟಿಳಕವಾಡಿ ರಸ್ತೆಯಲ್ಲಿ ಯಾರ ಸೂಚನೆಯಿಲ್ಲದೇ ಇದ್ದರೂ ಮರ ಕಡಿದ ಘಟನೆ ನಡೆದಿದೆ. ಇಂದು ಮಾ. 23 ರಂದು ಬೆಳಗ್ಗೆ ಅರಣ್ಯ ಇಲಾಖೆಯ ಕೆಲ ನೌಕರರು ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಗಮನಿಸಿದ ಪರಿಸರ ಪ್ರೇಮಿಗಳು ತಕ್ಷಣ ಬಿಜೆಪಿ ನಾಯಕ ಕಿರಣ ಜಾಧವ …

Read More »

ಶರಣರು ಜನಸಾಮಾನ್ಯರಿಗೆ ಹತ್ತಿರವಾದ ಕನ್ನಡದಲ್ಲಿಯೇ ಸಾಹಿತ್ಯ ಬರೆದರು : ಡಾ.ಪಿ.ಜಿ.ಕೆಂಪಣ್ಣವರ

ಶರಣರು ಜನಸಾಮಾನ್ಯರಿಗೆ ಹತ್ತಿರವಾದ ಕನ್ನಡದಲ್ಲಿಯೇ ಸಾಹಿತ್ಯ ಬರೆದರು : ಡಾ.ಪಿ.ಜಿ.ಕೆಂಪಣ್ಣವರ ಯುವ ಭಾರತ ಸುದ್ದಿ ಬೆಳಗಾವಿ : ಕನ್ನಡ ಭಾಷೆಯ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿದವರು ಹನ್ನೆರಡನೆಯ ಶತಮಾನದ ಶರಣರು. ಜನಸಾಮಾನ್ಯರ ಆವರಣಕ್ಕೆ ಸಾಹಿತ್ಯವನ್ನು ತಂದುನಿಲ್ಲಿಸಿದರು ಎಂದು ಹಿರಿಯ ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಹೇಳಿದರು. ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಜರುಗಿದ ಯುಗಾದಿ ಅಮಾವಾಸ್ಯೆ ಅನುಭಾವ ಕಾರ್ಯಕ್ರಮದಲ್ಲಿ ಅವರು ವಚನ ಸಾಹಿತ್ಯದಲ್ಲಿ …

Read More »

ಶುಕ್ರವಾರದಂದು ಸಂಜೆ ಗೋಕಾಕ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಮಾವೇಶ.!

ಶುಕ್ರವಾರದಂದು ಗೋಕಾಕ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಮಾವೇಶ.! ಗೋಕಾಕ: ಗೋಕಾಕ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಮಾವೇಶ ಶುಕ್ರವಾರದಂದು ನಡೆಯಲಿದೆ ಎಂದು ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ದಿ.24 ಶುಕ್ರವಾರದಂದು ಸಂಜೆ 5ಗಂಟೆಗೆ ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ಸಮಾವೇಶ ಜರುಗಲಿದ್ದು, ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ, ಕುಂದರಗಿ …

Read More »

ಶುಕ್ರವಾರದಂದು ಗೋಕಾಕನಲ್ಲಿ ಬೆಳಗಾವಿ ಜಿಲ್ಲಾ ಯುವಮೋರ್ಚಾ ಸಮಾವೇಶ.!

ಶುಕ್ರವಾರದಂದು ಗೋಕಾಕನಲ್ಲಿ ಬೆಳಗಾವಿ ಜಿಲ್ಲಾ ಯುವಮೋರ್ಚಾ ಸಮಾವೇಶ.! ಗೋಕಾಕ: ಬೆಳಗಾವಿ ಗ್ರಾಮಾಂತರ ಜಿಲ್ಲೆ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶ ಶುಕ್ರವಾರದಂದು ನಡೆಯಲಿದೆ ಎಂದು ಬಿಜೆಪಿ ಗೋಕಾಕ ನಗರ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ ತಿಳಿಸಿದ್ದಾರೆ. ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಇದೆ ದಿ.೨೪ ಶುಕ್ರವಾರದಂದು ಮುಂಜಾನೆ ೧೦ ಗಂಟೆಗೆ ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದರು. ಸ್ಥಳೀಯ ಶಾಸಕ …

Read More »

16 ಲಕ್ಷ ರೂ. 5000 ಸೀರೆ ವಶ !

16 ಲಕ್ಷ ರೂ. 5000 ಸೀರೆ ವಶ ! ಯುವ ಭಾರತ ಸುದ್ದಿ ಬೆಳಗಾವಿ : ರಾಯಬಾಗ ವಿಧಾನಸಭಾ ಮತಕ್ಷೇತ್ರದ ಮತದಾರರಿಗೆ ವಿತರಣೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲಾ 350 ರೂಪಾಯಿ ಬೆಲೆಯುಳ್ಳ 5000 ಸೀರೆ ಪತ್ತೆಯಾಗಿದೆ. ಇವುಗಳ ಒಟ್ಟು ಬೆಲೆ 16 ಲಕ್ಷ. ಇದನ್ನು ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ಮಿನಿ ಲಾರಿ ವಶಪಡಿಸಿಕೊಳ್ಳಲಾಗಿದೆ. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಮನೋಹರ ಪತ್ತಾರ್ ಮತ್ತು …

Read More »

ಮುಖ್ಯಮಂತ್ರಿ ನಾನೇ ಆಗುವೆ !

ಮುಖ್ಯಮಂತ್ರಿ ನಾನೇ ಆಗುವೆ ! ಯುವ ಭಾರತ ಸುದ್ದಿ ಬಾಗಲಕೋಟೆ : ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ. ಮುಧೋಳದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಆಗ ವಿವಿಧ ಕ್ಷೇತ್ರಗಳಿಗೆ ಮತ್ತೆ ಭೇಟಿ ನೀಡುತ್ತೇನೆ …

Read More »

ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆ ರೌಡಿ ಶೀಟರ್ ಮೇಲೆ ಕಾರು ಹತ್ತಿಸಿ ಭಯಾನಕ ಕೊಲೆಗೆ ಯತ್ನ

ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆ ರೌಡಿ ಶೀಟರ್ ಮೇಲೆ ಕಾರು ಹತ್ತಿಸಿ ಭಯಾನಕ ಕೊಲೆಗೆ ಯತ್ನ ಯುವ ಭಾರತ ಸುದ್ದಿ ಬೆಂಗಳೂರು : ಸಚಿವ ಶಶಿಕಲಾ ಜೊಲ್ಲೆ ಅವರ ಮನೆಯ ಮುಂದೆ ಭಯಾನಕ ರೀತಿಯಲ್ಲಿ ಕೊಲೆಯ ಯತ್ನ ಬುಧವಾರ ನಡೆದಿದೆ. ಸ್ನೇಹಿತನ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ. ಸುನಿಲ್ ಕುಮಾರ್, ಅರುಣ್, ಕೃಷ್ಣ ಎಂಬುವರು ಈ ಕೃತ್ಯ ನಡೆಸಿದ್ದಾರೆ. ರೌಡಿಶೀಟರ್ ಗಗನ್ ಮತ್ತು ಉಳಿದ ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದಾರೆ. …

Read More »