Breaking News

ಬೆಳಗಾವಿ

ಬೆಳಗಾವಿ ರಾಮಕೃಷ್ಣ ಮಿಶನ್ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ : ಶಿಕ್ಷಕರಿಗೆ ಕೇಳಿ ತಿಳಿಯುವ ನಮ್ರತೆ ಇರಬೇಕು-ಸ್ವಾಮಿ ನಿತ್ಯಸ್ಥನಂದಜೀ

ಬೆಳಗಾವಿ ರಾಮಕೃಷ್ಣ ಮಿಶನ್ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ : ಶಿಕ್ಷಕರಿಗೆ ಕೇಳಿ ತಿಳಿಯುವ ನಮ್ರತೆ ಇರಬೇಕು-ಸ್ವಾಮಿ ನಿತ್ಯಸ್ಥನಂದಜೀ ಯುವ ಭಾರತ ಸುದ್ದಿ ಬೆಳಗಾವಿ : ಆದರ್ಶ ಶಿಕ್ಷಕ ಎಂದರೆ ಇತರರಿಂದ ಕೇಳಿ ತಿಳಿಯುವ ನಮ್ರತೆ ಇರಬೇಕು. ಅನುಭವಗಳ ಮೂಲಕ ಕಲಿಯುವ ಮನೋವೃತ್ತಿ ಹೊಂದಿರಬೇಕು ಎಂದು ಬೆಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ನಿತ್ಯಸ್ಥನಂದಜೀ ಹೇಳಿದರು. ನಗರದ ಕೋಟೆ ಆವರಣದ ರಾಮಕೃಷ್ಣ ಮಿಶನ್ ಆಶ್ರಮದ ಶ್ರೀ ವಿಶ್ವಭಾವೈಕ್ಯ ಮಂದಿರದ …

Read More »

ಗುಡ್ಡಾಪುರ ದಾನಮ್ಮಳ ಸಾಮಾಜಿಕ ಸೇವೆ ಅನನ್ಯ : ಕಾರಂಜಿ ಶ್ರೀಗಳು

ಗುಡ್ಡಾಪುರ ದಾನಮ್ಮಳ ಸಾಮಾಜಿಕ ಸೇವೆ ಅನನ್ಯ : ಕಾರಂಜಿ ಶ್ರೀಗಳು ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ 38 ನೇ ವಾರ್ಷಿಕೋತ್ಸವ ಸಮಾರಂಭ ಯುವ ಭಾರತ ಸುದ್ದಿ ಬೆಳಗಾವಿ : ತನ್ನ ರಚನಾತ್ಮಕವಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಿಂದ ಬೆಳಗಾವಿಯ ಶಹಾಪುರದ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ ಬಹುಮೌಲಿಕವಾದ ಸೇವೆಯನ್ನು ಸಲ್ಲಿಸುತ್ತಿದೆ. ಮಹಾ ಶರಣೆ ದಾನಮ್ಮಳ ಧ್ಯೇಯದಂತೆ ಬಡವರ ಅನಾಥರ ಸೇವೆಯನ್ನು ಮಾಡುತ್ತಿದೆ ಎಂದು ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ನುಡಿದರು. ಶಹಾಪುರದಲ್ಲಿ …

Read More »

ಕಿರಣ ಜಾಧವ ಅವರಿಂದ ಬೆಳಗಾವಿಯಲ್ಲಿ ಭಾನುವಾರ ಬೃಹತ್ ಚಿತ್ರಕಲಾ ಶಿಬಿರ ಆಯೋಜನೆ

ಕಿರಣ ಜಾಧವ ಅವರಿಂದ ಬೆಳಗಾವಿಯಲ್ಲಿ ಭಾನುವಾರ ಬೃಹತ್ ಚಿತ್ರಕಲಾ ಶಿಬಿರ ಆಯೋಜನೆ ಯುವ ಭಾರತ ಸುದ್ದಿ ಬೆಳಗಾವಿ : ಬಿಜೆಪಿ ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಮತ್ತು ಸಕಲ ಮರಾಠಾ ಸಮಾಜದ ಸಂಯೋಜಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಬೆಳಗಾವಿಯ ಯುವ ನಾಯಕ ಕಿರಣ ಜಾಧವ ಅವರು ತಮ್ಮ ವಿಮಲ್ ಫೌಂಡೇಶನ್ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಬೆಳಗಾವಿ ಮಹಾನಗರದ ಶಾಲೆಗಳಲ್ಲಿ ಫೆಬ್ರವರಿ 5 ರಂದು …

Read More »

ಬೆಳಗಾವಿ ರಾಮಕೃಷ್ಣ ಮಿಷನ್ ಶ್ರೀ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ವಾರ್ಷಿಕೋತ್ಸವ ; ನ್ಯೂನತೆ ಬದಿಗೊತ್ತಿ ಸಾಧನೆ ಮಾಡಿ : ಪದ್ಮಶ್ರೀ ಮಾಲತಿ ಹೊಳ್ಳ

ಬೆಳಗಾವಿ ರಾಮಕೃಷ್ಣ ಮಿಷನ್ ಶ್ರೀ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ವಾರ್ಷಿಕೋತ್ಸವ ; ನ್ಯೂನತೆ ಬದಿಗೊತ್ತಿ ಸಾಧನೆ ಮಾಡಿ : ಪದ್ಮಶ್ರೀ ಮಾಲತಿ ಹೊಳ್ಳ ಆಧ್ಯಾತ್ಮಿಕ ತಳಹದಿ ಮೇಲೆ ರಾಮಕೃಷ್ಣ ಆಶ್ರಮ ನಿಂತಿದೆ. ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಯಾರೊಬ್ಬರೂ ತಮ್ಮ ಜೀವನದಲ್ಲಿ ವೈಫಲ್ಯತೆ ಅನುಭವಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಪುರುಷೋತ್ತಮನಂದರ ಭಾಷಣ ಕೇಳಿದ ನಂತರ ನನ್ನ ಜೀವನವೇ ಬದಲಾಯಿತು ಎಂದು ಕುಡಚಿ …

Read More »

ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮದ 19 ನೇ ವಾರ್ಷಿಕೋತ್ಸವ ಶುಕ್ರವಾರ ಆರಂಭ

ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮದ 19 ನೇ ವಾರ್ಷಿಕೋತ್ಸವ ಶುಕ್ರವಾರ ಆರಂಭ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ವಿಶ್ವ ಭಾವೈಕ್ಯ ಮಂದಿರದ 19 ನೇ ವಾರ್ಷಿಕೋತ್ಸವ ಫೆ. 3 ರಿಂದ 5 ರವರೆಗೆ ನಡೆಯಲಿದೆ ಎಂದು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಪರಿವ್ರಾಜಕ ಸಂನ್ಯಾಸಿಯಾಗಿ ದೇಶವನ್ನು ಪರ್ಯಟನೆ ಮಾಡುತ್ತ 1892 ರ ಅಕ್ಟೋಬರ್ ತಿಂಗಳಲ್ಲಿ …

Read More »

ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ವಿಜಯ ಸಂಕಲ್ಪ ಅಭಿಯಾನ ಆರಂಭ

ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ವಿಜಯ ಸಂಕಲ್ಪ ಅಭಿಯಾನ ಆರಂಭ ಯುವ ಭಾರತ ಸುದ್ದಿ ಖಾನಾಪುರ :        ಭಾರತದಾದ್ಯಂತ ಭಾರತೀಯ ಜನತಾ ಪಕ್ಷ (ಬಿಜೆಪಿ)ಮಾಡಿದ ಕೆಲಸಗಳನ್ನು ಪ್ರಚಾರ ಮಾಡಲು ವಿಜಯ ಸಂಕಲ್ಪ ಅಭಿಯಾನವನ್ನು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಇದೀಗ ಖಾನಾಪುರ ಮಂಡಲದ ಡಾ.ಸೋನಾಲಿ ಸರ್ನೋಬತ್ ಅವರು ಅಭಿಯಾನವನ್ನು ಪ್ರಚಾರ ಮಾಡಲು ಖಾನಾಪುರದ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಚಿಕ್ಕಮುನವಳ್ಳಿಯಲ್ಲಿ ಡಾ.ಸೋನಾಲಿ ಸರ್ನೋಬತ್, ಬಿಜೆಪಿ ಮುಖಂಡರಾದ ಆನಂದ ಪಾಟೀಲ, …

Read More »

ಮೊದಲ ಬಾರಿಗೆ ಮೋದಿ ಗಿಫ್ಟ್ : ವಿಶ್ವಕರ್ಮರಿಗೆ ವಿಶೇಷ ಯೋಜನೆ ಕೌಶಲ್ ಸಮ್ಮಾನ್ ಪ್ರಕಟ

ಮೊದಲ ಬಾರಿಗೆ ಮೋದಿ ಗಿಫ್ಟ್ : ವಿಶ್ವಕರ್ಮರಿಗೆ ವಿಶೇಷ ಯೋಜನೆ ಕೌಶಲ್ ಸಮ್ಮಾನ್ ಪ್ರಕಟ ಯುವ ಭಾರತ ಸುದ್ದಿ ನವದೆಹಲಿ: ಬುಧವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭಾರತಾದ್ಯಂತ ನೂರಾರು ವರ್ಷಗಳಿಂದ ಕರಕುಶಲ ಕೆಲಸ, ವಸ್ತುಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ವಿಶ್ವಕರ್ಮ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪಿಎಂ ವಿಕಾಸ್ ಅಡಿ ‘ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್’ ಯೋಜನೆ ಪ್ರಕಟಿಸಲಾಗಿದೆ, ಈ ಯೋಜನೆಯಡಿ ಫಲಾನುಭವಿಗಳು ಸಹಾಯಧನ, ಸಾಲ ಸೌಲಭ್ಯ, ತರಬೇತಿ, …

Read More »

ಅಶು ಭಾಷಣ ಸ್ಪರ್ಧೆಯಲ್ಲಿ ಮಿಂಚಿದ ಆರ್ ಎಲ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು

ಅಶು ಭಾಷಣ ಸ್ಪರ್ಧೆಯಲ್ಲಿ ಮಿಂಚಿದ ಆರ್ ಎಲ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಯುವ ಭಾರತ ಸುದ್ದಿ ಬೆಳಗಾವಿ : ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಏರ್ಪಡಿಸಿದ್ದ ಹುತಾತ್ಮರ ದಿನಾಚರಣೆಯ ಅಶು ಭಾಷಣ ಸ್ಪರ್ಧೆಯಲ್ಲಿ ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮೂರು ಬಹುಮಾನಗಳನ್ನು ಪಡೆದರು. ಮಲ್ಲಿಕಾರ್ಜುನ ಪೂಜಾರಿ ನಗದು ಬಹುಮಾನದೊಂದಿಗೆ ಪ್ರಥಮ, ಸಮರ್ಥ ಸಾಲಿಮಠ ದ್ವಿತೀಯ ಮತ್ತು ಅವಧೂತ ಗಾಯಡೋಳೆ ನಾಲ್ಕನೇ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ 30 …

Read More »

ಸುಳೇಭಾವಿಯಲ್ಲಿ ಪುನೀತ್, ಕಾಂತಾರ ಹಾಡಿಗೆ ಮಕ್ಕಳ ಸಖತ್ ಸ್ಟೆಪ್ !

ಸುಳೇಭಾವಿಯಲ್ಲಿ ಪುನೀತ್, ಕಾಂತಾರ ಹಾಡಿಗೆ ಮಕ್ಕಳ ಸಖತ್ ಸ್ಟೆಪ್ ! ಯುವ ಭಾರತ ಸುದ್ದಿ ಬೆಳಗಾವಿ : ವಿದ್ಯೆ ಎಂಬುದು ಯಾರೂ ಕಸಿದುಕೊಳ್ಳಲಾಗದ, ಬಳಸಿದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಹೀಗಾಗಿ ತಾಯಂದಿರರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಮಹೇಶ ಸುಗಣೆನ್ನವರ ಹೇಳಿದರು. ತಾಲೂಕಿನ ಸುಳೇಭಾವಿ ಗ್ರಾಮದ ಶಾಂಭವಿ ಮಹಿಳಾ ಶಿಕ್ಷಣ ಸಂಸ್ಥೆಯ ಶ್ರೀ ವಾಣಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ …

Read More »

ಬೆಳಗಾವಿ ಸಮಾದೇವಿ ಜಯಂತ್ಯುತ್ಸವ ಆರಂಭ

ಬೆಳಗಾವಿ ಸಮಾದೇವಿ ಜಯಂತ್ಯುತ್ಸವ ಆರಂಭ ಯುವ ಭಾರತ ಸುದ್ದಿ ಬೆಳಗಾವಿ: ಶ್ರೀ ಸಮಾದೇವಿ ಸಂಸ್ಥಾನ, ವೈಶ್ಯವಾಣಿ ಸಮಾಜದ ವತಿಯಿಂದ ಬುಧವಾರದಿಂದ ಶ್ರೀ ಸಮಾದೇವಿ ಜಯಂತಿ ಉತ್ಸವ ಆರಂಭವಾಗಿದ್ದು, ಶನಿವಾರದವರೆಗೆ ನಡೆಯಲಿದೆ. ಫೆ.2 ರಿಂದ 4 ರವರೆಗೆ ನಡೆಯುವ ಈ ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ಸಂಪನ್ನವಾಗಲಿವೆ. ಉತ್ಸವದಲ್ಲಿ ವೈಶ್ಯವಾಣಿ ಸಮಾಜದ ಬಾಂಧವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ. ಸಮಾದೇವಿ ಗಲ್ಲಿಯಲ್ಲಿರುವ ಶ್ರೀ ಸಮಾದೇವಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ 6ರಿಂದ …

Read More »