ಕೊರೊನಾ ಸೋಂಕಿನಿಂದ ವ್ಯಕ್ತಿ ಸಾವು: ಸಂಬಂಧಿಕರಿಂದ ಕಲ್ಲು ತೂರಾಟ :ಅಂಬ್ಯಲೆನ್ಸಗೆ ಬೆಂಕಿ
ಬೆಳಗಾವಿ: ಜು.22 : ಕೊರೋನಾದಿಂದ ರೋಗಿಯೊಬ್ಬ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ರೊಗಿಯ ಸಂಬಂಧಿಕರು ಮತ್ತು ಕುಟುಂಬಸ್ಥರು ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕಲ್ಲು ತೂರಾಡಿದ ಪ್ರಸಂಗ ಬೆಳಗಾವಿಯ ಅಂಬೇಡ್ಕರ್ ರಸ್ತೆಯ ಜಿಲ್ಲಾ ಆಸ್ಪತ್ರೆ ಎದುರಿಗೆ ಜರುಗಿದೆ.
ಈ ಘಟನೆ ಜರುಗುತ್ತಿದ್ದಂತೆ ಪೊಲೀಸರಿಗೂ ಗಾಯಗಳಾಗಿದ್ದು ಅವರು ಕೂಡ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಎದುರುಗಡೆ ಈ ಘಟನೆ ಜರುಗಿದೆ .
ಜಿಲ್ಲಾ ಆಸ್ಪತ್ರೆ ಯಲ್ಲಿ ಈ ಘಟನೆ ನಡೆಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರು ಆಸ್ಪತ್ರೆ ಕಡೆಗೆ ದೌಡಾಯಿಸಿದ್ದಾರೆ.