Breaking News

ಎತ್ತಿನ ಬಂಡಿ ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಕಿರಣ ಜಾಧವ

Spread the love

ಎತ್ತಿನ ಬಂಡಿ ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಕಿರಣ ಜಾಧವ

ಯುವ ಭಾರತ ಸುದ್ದಿ ಬೆಳಗಾವಿ :
ಮಜಗಾವಿಯ ಶ್ರೀ ಶೇತಕರಿ ಸಂಘಟನೆ, ಬಿಜೆಪಿ ರಾಜ್ಯ ಒಬಿಸಿ ಯುವ ಮೋರ್ಚಾದ ಕಾರ್ಯದರ್ಶಿ ಹಾಗೂ ಸಕಲ ಮರಾಠ ಸಮಾಜದ ಸಂಚಾಲಕ ಕಿರಣ ಜಾಧವ ಅವರ ಬೆಂಬಲದೊಂದಿಗೆ ಮಾರ್ಚ್ 4 ರಂದು ನಡೆದ ಖಾಲಿ ಬಂಡಿ ಓಟದ ಸ್ಪರ್ಧೆಯಲ್ಲಿ ವಿಜೇತರಾದವರು ಮತ್ತು 5 ಮಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮಜಗಾವಿಯ ಹೆದ್ದಾರಿಯಲ್ಲಿ ಓಟ ನಡೆಯಿತು.

ಓಟವನ್ನು ಕಿರಣ ಜಾಧವ್ ಎತ್ತಿನ ಬಂಡಿ ಪೂಜೆ ನೆರವೇರಿಸಿ ಉದ್ಘಾಟಿಸಿದರು. ಜ್ಯೋತಿಬಾ ಗುರವ ಅವರು ಸಮಯ ಪಾಲಕರಾಗಿ ಕೆಲಸ ನಿರ್ವಹಿಸಿದರು.

ಈ ಓಟದ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು. ಓಟದಲ್ಲಿ ಜಾಫರವಾಡಿಯ ಶ್ರೀ ಬಸವಣ್ಣ ಪ್ರಸನ್ನ, ಬೆಳಗುಂದಿಯ ಶ್ರೀ ರಾವಳನಾಥ ಕಲ್ಮೇಶ್ವರ ಪ್ರಸನ್ನ ಮತ್ತು ಕುಂದರಗಿಯ ಲಕ್ಷ್ಮೀ ಪ್ರಸನ್ನ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

ಪ್ರಥಮ ಸ್ಥಾನ ಪಡೆದವರಿಗೆ 25,000, ದ್ವಿತೀಯ ಸ್ಥಾನ ಪಡೆದವರಿಗೆ 21,000, ತೃತೀಯ ಸ್ಥಾನ ಪಡೆದವರಿಗೆ 18,000 ಮತ್ತು 4 ರಿಂದ 21ನೇ ಸ್ಥಾನ ಪಡೆದವರಿಗೆ ಕ್ರಮವಾಗಿ 16,000 ರಿಂದ 2,000. ವಿಜೇತರಿಗೆ ಕಿರಣ ಜಾಧವ ಮತ್ತಿತರ ಗಣ್ಯರು ಬಹುಮಾನ ವಿತರಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 + eighteen =