Breaking News

ಸೋಂಕಿನಿಂದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿಲೆಂದು ಅಭಿಮಾನಿಗಳಿಂದ ದೇವರ ಮೊರೆ.!

Spread the love

ಸೋಂಕಿನಿಂದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿಲೆಂದು ಅಭಿಮಾನಿಗಳಿಂದ ದೇವರ ಮೊರೆ.!

ಯುವ ಭಾರತ ಸುದ್ದಿ,  ಗೋಕಾಕ: ಗೋಕಾಕ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿ ಕಷ್ಟದಲ್ಲಿಯೂ ದೇವರ ಮೋರೆ ಹೋಗುವದು ಸಾಮಾನ್ಯ ಈಗ ರಮೇಶ ಜಾರಕಿಹೊಳಿ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನಲೆ ಅಭಿಮಾನಿಗಳು ಸಹ ದೇವರ ಮೊರೆ ಹೋಗಿದ್ದಾರೆ.
ಕರೋನಾ ಸೋಂಕಿನಿAದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿ ಬರಲೆಂದು ಹಾರೈಸಿ ಅಭಿಮಾನಿಗಳು ಮಂಗಳವಾರದAದು ನಗರದ ಮಹಾಲಕ್ಷಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ನಗರಸಭೆ ಸದಸ್ಯರಾದ ಬಾಬು ಮುಳಗುಂದ, ಪ್ರಕಾಶ ಮುರಾರಿ, ಯೂಸುಪ ಅಂಕಲಗಿ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಅಬ್ಬಾಸ ದೇಸಾಯಿ, ಮುಖಂಡರುಗಳಾದ ಶಿವಾನಂದ ಹತ್ತಿ, ದುರ್ಗಪ್ಪ ಶಾಸ್ತಿçಗೊಲ್ಲರ, ಲಕ್ಷö್ಮಣ ಖಡಕಬಾಂವಿ, ಕಿರಣ ಡಮಾಮಗರ, ವಿಜಯ ಜತ್ತಿ, ಮುತ್ತು ಜಮಖಂಡಿ,ಅನೀಲ ತುರಾಯಿದಾರ, ಮಂಜು ಮಾವರಕರ, ಸಚೀನ ಕಮಟೇಕರ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ವಡೆಯರ, ಮಲ್ಲಿಕಜಾನ ತಳವಾರ, ಸುಧೀರ ಜೋಗೊಜಿ, ವಿರೇಂದ್ರ ಎಕ್ಕೇರಿಮಠ, ಪುನೀತ ಸೇರಿದಂತೆ ಅಭಿಮಾನಿಗಳು ಇದ್ದರು.

ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಮುಂದಾಗಿದ್ದಾಗ ರಮೇಶ ಜಾರಕಿಹೊಳಿ ಶಾಸಕತ್ವ ಸ್ಥಾನ ಅಮಾನತುಗೊಂಡ ಸಂದರ್ಭದಲ್ಲಿ ಸಹ ರಮೇಶ ಜಾರಕಿಹೊಳಿ ಅಭಿಮಾನಿಗಳು ಮಹಾಲಕ್ಷಿö್ಮÃ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಇಲ್ಲಿ ಸ್ಮರಿಸಬಹುದು.”


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

8 + ten =