Breaking News

ಶ್ರೀ ಭಗೀರಥಪೀಠಕ್ಕೆ ಬಿ ವೈ ವಿಜಯೇಂದ್ರ ಭೇಟಿ..!!

Spread the love

ಶ್ರೀ ಭಗೀರಥಪೀಠಕ್ಕೆ ಬಿ ವೈ ವಿಜಯೇಂದ್ರ ಭೇಟಿ..!!

 


ಯುವ ಭಾರತ ಸುದ್ದಿ, ಹೊಸದುರ್ಗ: ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪರವರ ಪುತ್ರರು ರಾಜ್ಯ ಭಾಜಪ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರರವರು ವಿಜಯದಶಮಿ ಹಬ್ಬದ ಶುಭ ದಿನ ಭಗೀರಥಪೀಠಕ್ಕೆ ಆಗಮಿಸಿ ಜಗದ್ಗುರುಶ್ರೀ ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾ ಸ್ವಾಮಿಜಿ ಯವರ ಆಶೀರ್ವಾದ ಪಡೆದರು, ಕರೋನ ಮಹಾ ಮಾರಿ ರೋಗದಿಂದ ಹಾಗೂ ಪ್ರವಾಹದಿಂದ ಜನರು ಮುಕ್ತರಾಗಲು ಜಗದ್ಗುರುಗಳು ದೇವರಲ್ಲಿ ಪ್ರಾರ್ಥಿಸಿದರು,ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉಪ್ಪಾರ ಸಮಾಜವನ್ನು ಎಸ್ ಟಿ ಗೆ ಸೇರಿಸುವುದು, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಪದಾಧಿಕಾರಿಗಳ ನೇಮಕ, ಹಾಗೂ ಹೆಚ್ಚಿನ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸುವುದು, ಮುಖಂಡರಿಗೆ ಸರ್ಕಾರದ ಬೇರೆ ಬೇರೆ ನಾಮ ನಿರ್ದೇಶನ ಸ್ಥಾನಮಾನ ದೊರಕಿಸುವುದು ಸೇರಿದಂತೆ ಮುಖ್ಯವಿಷಯಗಳನ್ನು ಜವಾಬ್ದಾರಿ ತೆಗೆದುಕೊಂಡು ಮುಖ್ಯಮಂತ್ರಿ ಯವರಿಂದ ಮಾಡಿಸಬೇಕೆಂದು ಜಗದ್ಗುರುಗಳು ಆಗ್ರಹಿಸಿದರು,ಈಹಿಂದೆ ನನ್ನ ಅಣ್ಣ ಯುಗಾದಿ ಹಬ್ಬದ ಶುಭದಿನ ಭಗೀರಥಪೀಠಕ್ಕೆ ಬಂದು ಜಗದ್ಗುರುಗಳಿಂದ ಆಶೀರ್ವಾದ ಪಡೆದು ಸಂಸದರು,ಹಾಗೂ ಶಾಸಕರಾದರು,ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ಪಡೆಯಲು ಗುರುಪೀಠದ ಆಶೀರ್ವಾದವಿದೆ,ನನಗೂ ಭಗೀರಥಪೀಠದ ಜಗದ್ಗುರುಗಳು ಆಶೀರ್ವಾದ ಮಾಡಿದ್ದು ಗುರುಗಳ ಆದೇಶ ಪಾಲಿಸುತ್ತೇನೆಂದು ವಿನಮ್ರತೆಯಿಂದ ನುಡಿದರು,


Spread the love

About Yuva Bharatha

Check Also

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ.!

Spread the loveಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ.! ಗೋಕಾಕ: ತಾಲೂಕಿನ ಮರಡಿ …

Leave a Reply

Your email address will not be published. Required fields are marked *

seventeen + ten =