Breaking News

ಶಾಲೆ ಅಭಿವೃದ್ಧಿಗೆ ಡಾ.ಸಿ.ಸೋಮಶೇಖರ ಅವರಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ರುದ್ರೇಶ ಸಂಪಗಾವಿ ಮನವಿ ಸಲ್ಲಿಕೆ

Spread the love

ಶಾಲೆ ಅಭಿವೃದ್ಧಿಗೆ ಡಾ.ಸಿ.ಸೋಮಶೇಖರ ಅವರಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ರುದ್ರೇಶ ಸಂಪಗಾವಿ ಮನವಿ ಸಲ್ಲಿಕೆ

ಯುವ ಭಾರತ ಸುದ್ದಿ ಇಟಗಿ :
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರಿಗೆ ಇಟಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಅಭಿವೃದ್ದಿಗೆ ಮನವಿ ಅರ್ಪಿಸಲಾಯಿತು.
ಖಾನಾಪುರ ಪಟ್ಟಣದ ಪಟ್ಟಣ ಪಂಚಾಯ್ತಿ ಕಲ್ಯಾಣ ಮಂಟಪದಲ್ಲಿ ಕರುನಾಡು ಕನ್ನಡ ಸಂಘದ ವತಿಯಿಂದ ನಡದ ಕರುನಾಡು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ಸಿ.ಸೋಮಶೇಖರ ಅವರಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ರುದ್ರೇಶ ಸಂಪಗಾವಿ ಮನವಿ ಅರ್ಪಿಸಿದರು.
ಈ ಶಾಲೆ 50 ವಸಂತಗಳನ್ನು ಪೂರೈಯಿಸಿದೆ. ಶಾಲೆಯ ಮೇಲ್ಚಾವಣಿ ಮತ್ತು ಗೋಡೆಗಳು ಶಿಥಿಲಾವಸ್ಥೆಗೆ ಸಾಗಿವೆ. ನೂತನ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಕಾರದ ವತಿಯಿಂದ ಸಹಾಯ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿಗೆ ಸ್ಪಂದಿಸಿದ ಪ್ರಾಧಿಕಾರದ ಅಧ್ಯಕ್ಷರು ಒಂದು ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರಿಗೊಳಿಸುವುದಾಗಿ ತಿಳಿಸಿದರು.
ಬಿಇಒ ರಾಜೇಶ್ವರಿ ಕುಡಚಿ, ಕರುನಾಡು ಕನ್ನಡ ಸಂಘದ ಅಧ್ಯಕ್ಷ ಜಗದೀಶ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

20 − fifteen =