Breaking News

ಸತೀಶ ಜಾರಕಿಹೊಳಿ ಅಭಿಮಾನಿಗಳಿಂದ ನ.‌ 14ರಂದು ಬೆಳಗಾವಿಯಲ್ಲಿ  ಶಕ್ತಿ ಪ್ರದರ್ಶನ!!

Spread the love

 

ಸತೀಶ ಜಾರಕಿಹೊಳಿ ಅಭಿಮಾನಿಗಳಿಂದ ನ.‌ 14ರಂದು ಬೆಳಗಾವಿಯಲ್ಲಿ  ಶಕ್ತಿ ಪ್ರದರ್ಶನ!!

ಬೆಳಗಾವಿಯಲ್ಲಿ‌ ನ.14 ರಂದು‌ ಶಕ್ತಿ ಪ್ರದರ್ಶನ.

25 ಸಾವಿರ ಜನ‌ ಸೇರುವ ನಿರೀಕ್ಷೆ.

ತೇಜೋವಧೆ ಮಾಡುವವರ‌ ವಿರುದ್ಧ ಕ್ರಮಕ್ಕೆ ಪಟ್ಟು

 

ಯುವ ಭಾರತ ಸುದ್ದಿ  ಬೆಳಗಾವಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕುಹೊಳಿ ಬಳಸಿದ ಹಿಂದೂ ಶಬ್ದದ ವಿವಾದ ಈಗ ಮತ್ತೇ ತಾರಕಕ್ಕೇರುವ ಲಕ್ಷಣಗಳು ಕಾಣಸಿಗುತ್ತಿವೆ.

ಸತೀಶ ಜಾರಕಿಹೊಳಿ ಆ ಶಬ್ದವನ್ನು ವಾಪಸ್ಸು ಪಡೆದ ಮೇಲೂ ಕೂಡ ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗೆ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದರು.

ಈಗ ಅದಕ್ಕೆ ಟಕ್ಜರ ಕೊಡಲು ಪಕ್ಷವನ್ನು ದೂರವಿಟ್ಟು ಸತೀಶ ಜಾರಕಿಹೊಳಿ ಅಭಿಮಾನಿಗಳು ಇದೇ ದಿ.‌ 14 ರಂದು ಬೆಳಗಾವಿಯಲ್ಲಿ ಭಾರೀ ಪ್ರಮಾಣದಲ್ಲಿ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.

ಸಮಾರು‌ 25 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.

ಬಿಜೆಪಿಯವರು ಅನಗತ್ಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಅವರ ತೇಜೋವಧೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು ಎನ್ನುವ ಬೇಡಿಕೆ ಇಟ್ಟುಕೊಂಡು ಈ ಪ್ರತಿಭಟನೆ ನಡೆಯಲಿದೆ.

ಅಂದು‌ ಬೆಳಿಗ್ಗೆ 10 ಕ್ಕೆ ಡಾ.‌ಬಾಬಾಸಾಹೇಬ‌ ಅಂಬೇಡ್ಜರ ಉದ್ಯಾನದಿಂದ ಆರಂಭಗೊಳ್ಖುವ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಂಚರಿಸಲಿದೆ.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

11 − 11 =