Breaking News

ಪ್ರಧಾನಿ ಮೋದಿಗಾಗಿ ಅಭಿಮಾನಿಯಿಂದ ಉಡುಪಿ ಕೃಷ್ಣನಿಗೆ ವಜ್ರ ಕವಚ ಸೇವೆ

Spread the love

ಪ್ರಧಾನಿ ಮೋದಿಗಾಗಿ ಅಭಿಮಾನಿಯಿಂದ ಉಡುಪಿ ಕೃಷ್ಣನಿಗೆ ವಜ್ರ ಕವಚ ಸೇವೆ

ಉಡುಪಿ :
ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಹಾಗೂ ಅವರ ಆರೋಗ್ಯ ವೃದ್ಧಿಯಾಗಬೇಕು ಎಂದು ಪ್ರಾರ್ಥಿಸಿ, ಮೋದಿ ಅಭಿಮಾನಿಯೊಬ್ಬರು ಉಡುಪಿ ಶ್ರೀ ಕೃಷ್ಣ ದೇವರಿಗೆ ವಜ್ರಕವಚ ಸೇವೆ ಸಲ್ಲಿಸಿದ್ದಾರೆ.

ದೇಶದ 21 ವಿರೋಧ ಪಕ್ಷಗಳು ಜೊತೆಗೂಡಿ ಮೋದಿ ಅವರನ್ನು ಸೋಲಿಸಲು ತಂತ್ರ ಹೆಣೆದಿವೆ. ಮೋದಿ ಅವರ ಆಡಳಿತದಲ್ಲಿ ದೇಶ ಸುಭದ್ರವಾಗುತ್ತಿದೆ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಮೋದಿ ಅಭಿಮಾನಿ ಚೇತನ ಐತಾಳ್ ಎಂಬುವವರು ಪ್ರಧಾನಿ ಮೋದಿ ಅವರು ಹೆಸರಲ್ಲಿ ಉಡುಪಿ ಶ್ರೀ ಕೃಷ್ಣನಿಗೆ ವಜ್ರಕವಚ ಸೇವೆ ನೀಡಿದ್ದಾರೆ.

ಮೋದಿಯವರು ನಮ್ಮ ದೇಶ ಕಂಡ ಧೀರ ಹಾಗೂ ದಿಟ್ಟ ನಾಯಕ. ಮೋದಿಯವರು ನಿಸ್ವಾರ್ಥದಿಂದ ದೇಶದ ಏಳಿಗೆಗೆ ಶ್ರಮಿಸುತ್ತಿದ್ದಾರೋ ಹಾಗೆ ಅವರ ಏಳಿಗೆಗೆ ನಾವು ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಉಡುಪಿ ಕೃಷ್ಣನ ಆಶೀರ್ವಾದ ಪ್ರಧಾನಿ ಮೋದಿ ಅವರಿಗೆ ವಜ್ರ ಕವಚವಾಗಲಿ ಎಂದು ಪ್ರಾರ್ಥಿಸಿ, ಈ ವಜ್ರ ಕವಚ ಸೇವೆಯಲ್ಲಿ ಸಲ್ಲಿಸುವುದಾಗಿ ಅವರು ತಿಳಿಸಿದ್ದು, ಈ ಸೇವೆಗೆ 10,000 ರೂ.ವೆಚ್ಚವಾಗುತ್ತಿದ್ದು ಅವರು ಮೋದಿ ಅಭಿಮಾನಿ ಬಳಗದ ಹೆಸರಿನ ರಸೀದಿ ಸೇವೆ ಮಾಡಿ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯ ಅಂಗವಾಗಿ ಕೃಷ್ಣನಿಗೆ ವಜ್ರದ ಕವಚ ತೊಡಿಸಿ ಪರ್ಯಾಯ ಶ್ರೀಗಳು ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸುತ್ತಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

15 + nineteen =