Breaking News

ಹುತಾತ್ಮ ಯೋಧನ ಪುತ್ಥಳಿ ಸನಾವರಣಗೊಳಿಸಿದ ಸಾವಳಗಿ ಶ್ರೀಗಳು.!

Spread the love

ಹುತಾತ್ಮ ಯೋಧನ ಪುತ್ಥಳಿ ಸನಾವರಣಗೊಳಿಸಿದ ಸಾವಳಗಿ ಶ್ರೀಗಳು.!


ಗೋಕಾಕ: ತಾಲೂಕಿನ ಶಿವಾಪೂರ (ಕೊ) ಗ್ರಾಮದ ಹುತಾತ್ಮ ಯೋಧ ದಿ. ಮಂಜುನಾಥ ಅಣ್ಣಪ್ಪ ಗೌಡನವರ ಅವರ ಪುತ್ಥಳಿಯನ್ನು ಸಾವಳಗಿಯ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಅನಾವರಣಗೊಳಿಸಿದರು.
ಹುತಾತ್ಮ ವೀರ ಯೋಧ ದಿ.ಮಂಜುನಾಥ ಅಣ್ಣಪ್ಪಾ ಗೌಡನವರ ೪ನೇ ಇಂಜನೀಯರಿAಗ್ ರೇಜಿಮೆಂಟ್‌ನಲ್ಲಿ ಹವಾಲ್ದಾರನಾಗಿ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಪರ್ವತ ಕುಸಸಿತದಿಂದಾಗಿ ಸಾವನ್ನಪ್ಪಿದ್ದರು.
ಈ ಸಂದರ್ಭದಲ್ಲಿ ಗುಬ್ಬಲಗುಡ್ಡದ ಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಕುಂದರಗಿಯ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಜಿ, ಘೋಡಗೇರಿಯ ಶ್ರೀ ಕಾಶಿನಾಥ ಸ್ವಾಮಿಜಿ, ಯುವ ನಾಯಕ ಹಾಗೂ ಕೆಎಮ್‌ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ, ಸುರೇಶ ಸನದಿ ಸೇರಿದಂತೆ ಹುತಾತ್ಮ ಯೋಧನ ಕುಟುಂಬಸ್ಥರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

eighteen − 7 =