Breaking News

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧ ಉತ್ಸಾಹದಿಂದ ಪಡೆದ ಜನರು.!

Spread the love

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧ ಉತ್ಸಾಹದಿಂದ ಪಡೆದ ಜನರು.!


 ಯುವ ಭಾರತ ಸುದ್ದಿ, ಗೋಕಾಕ: ಗೋಕಾಕ ನಗರ ಸೇರಿದಂತೆ ತಾಲೂಕಿನಲ್ಲಿ ಕರೋನಾ ಮಹಾಮಾರಿ ಅತೀ ವೇಗವಾಗಿ ಹಬ್ಬುತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಕನ್ಹೇರಿ ಮಠದಲ್ಲಿ ತಾಯಾರಿಸಿದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧವನ್ನು ನಗರದಲ್ಲಿ ಸಾರ್ವಜನಿಕರು ಅತಿ ಉತ್ಸಾಹದಿಂದ ಪಡೆಯುತ್ತಿದ್ದು ಕಂಡು ಬಂದಿತು.
ಈ ಔಷಧವನ್ನು ೧/೨ ಲೀಟರ್ ಆರ್‌ಓ ನೀರಿನಲ್ಲಿ ಮಿಶ್ರಣ ಮಾಡಿ ಕೊಡಲಾಗುತ್ತಿದೆ. ೧೦ ವರ್ಷ ಮೇಲ್ಪಟ್ಟವರು ಈ ಮಿಶ್ರಣವನ್ನು ಎರಡು ದಿನ ಮುಂಜಾನೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಕೊರೋನಾ ರೋಗದಿಂದ ದೂರವಿರಬಹುದೆಂದು ಸಂಘಟಕರು ತಿಳಿಸಿದ್ದಾರೆ.
ಇನ್ನೂ ನಾಲ್ಕು ದಿನಗಳ ವರೆಗೆ ಪ್ರತಿ ದಿನ ಬೆಳಿಗ್ಗೆ ೭ಗಂಟೆಯಿAದ ೯ಗಂಟೆಯ ವರೆಗೆ ಮಾತ್ರ ನೀಡಲಾಗುತ್ತದೆ. ನಗರದ ಶೂನ್ಯ ಸಂಪಾದನಾ ಮಠ ಶಿಕ್ಷಣ ಸಂಸ್ಥೆ ಕೋಳಿಕಾಟಾ, ಕಿಲ್ಲಾದ ಶ್ರೀ ವೆಂಕಟೇಶ್ವರ ದೇವಸ್ಥಾನ ಆವರಣ, ಅಂಬಿಗೇರ ಗಲ್ಲಿಯ ಶ್ರೀ ಹಣಮಂತ ದೇವಸ್ಥಾನ, ಸೋಮವಾರ ಪೇಠೆಯ ಮುಪ್ಪಯ್ಯನ ಮಠ, ನಾಗನಾಥ ಮಂಗಲ ಕಾರ್ಯಾಲಯ, ಶ್ರೀ ಪಾಯಸಾಗರ ಶಾಲಾ ಆವರಣ, ಗೋಕಾಕ ಫಾಲ್ಸ್ ರಸ್ತೆಯ ನ್ಯೂ ಇಂಗ್ಲಿಷ್ ಸ್ಕೂಲ್ ಫಾಲ್ಸ್ ರೋಡ, ಮಯೂರ ಸ್ಕೂಲ್ ಆವರಣ, ಜಿ.ಆರ್.ಬಿ.ಸಿ ಆವರಣ ಹಾಗೂ ಕೆ.ಎಲ್.ಇ ಸ್ಕೂಲ್ ಉಮರಾಣಿ ಆಸ್ಪತ್ರೆ ಎದುರಿಗೆ ವಿತರಿಸಲಾಗುವದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

twelve − 1 =