Breaking News

ಗೋಕಾಕದಲ್ಲಿ ಬುಧವಾರ ಸಂಜೆ ಸಿಎಮ್ ಬಿಎಸ್‌ವೈ ರೋಡ ಶೋ.!

ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರ ಪರ ರೋಡ ಶೋ ಮೂಲಕ ನಗರದಲ್ಲಿ ಮತಯಾಚನೆ ನಡೆಸಲಿದ್ದಾರೆ. ಬುಧವಾರದಂದು ಸಂಜೆ ೪ ಗಂಟೆಗೆ ನಗರದ ಕೊಳವಿ ಮಾರುತಿ ದೇವಸ್ಥಾನದಿಂದ ಸಂಗೋಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ರೋಡ ಶೋ ಜರುಗಲಿದೆ. ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವರು. ರೋಡ ಶೋ …

Read More »

ಕುಟುಂಬವೇ ಬೇರೆ. ರಾಜಕಾರಣವೇ ಬೇರೆ. -ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕುಟುಂಬವೇ ಬೇರೆ. ರಾಜಕಾರಣವೇ ಬೇರೆ. ಕಾರ್ಯಕರ್ತರು ಏ-೧೭ ರಂದು ನಡೆಯುವ ಈ ಉಪಚುನಾವಣೆಯಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ದೇಶದ ಸಮಗ್ರತೆ, ಸುರಕ್ಷತೆ ಹಾಗೂ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕೆನ್ನುವ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಊಹಾ-ಪೋಹಗಳಿಗೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೆರೆ ಎಳೆದರು. ಸೋಮವಾರದಂದು ಸಂಜೆ ನಗರದ ಹೊರವಲಯದಲ್ಲಿರುವ …

Read More »

ಮೋದಿ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಆಧಾರ ಸ್ತಂಭವಾಗಿದೆ- ತೇಜಸ್ವಿನಿ ರಮೇಶ.!

ಗೋಕಾಕ: ನಯೀ ರೋಶನಿ, ನಯೀ ಮಂಜಿಲ ಯೋಜನೆಯಡಿ ಮೋದಿ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಆಧಾರ ಸ್ತಂಭವಾಗಿದೆ ಎಂದು ಸಂಸದೆ ಶ್ರೀಮತಿ ತೇಜಸ್ವಿನಿ ರಮೇಶ ಹೇಳಿದರು. ಅವರು, ಸೋಮವಾರದಂದು ನಗರದ ಲಕ್ಕಡಗಲ್ಲಿ ಶಾದಿ ಮಹಲದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಬೆಳಗಾವಿ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ಶ್ರೀಮತಿ ಮಂಗಳಾ ಅಂಗಡಿ ಅವರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮ ಎಲ್ಲರಿಗೂ ದೊಡ್ಡದು, ಕಾಂಗ್ರೆಸ್ ಪಕ್ಷ ಅದನ್ನು ರಾಜಕೀಯವಾಗಿ ಬಳಿಸಿಕೊಂಡು …

Read More »

ಉಪಚುನಾವಣೆ ಅಖಾಡಕ್ಕೆ ಬಾಲಚಂದ್ರ ಜಾರಕಿಹೊಳಿ ಎಂಟ್ರಿ.!

ಗೋಕಾಕ: ದಿ.ಸುರೇಶ ಅಂಗಡಿಯವರ ನಿಧನದ ಹಿನ್ನಲೆ ತೆರವಾದ ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಖಾಡಕ್ಕೆ ಬಾಲಚಂದ್ರ ಜಾರಕಿಹೊಳಿ ಪ್ರವೇಶಿಸಿದ್ದು, ಕಾಂಗ್ರೇಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಹೌದು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಕೊಡುವ ನಿಟ್ಟಿನಲ್ಲಿ ಜಾರಕಿಹೊಳಿ ಸಹೋದರರು ಕಾಂಗ್ರೇಸ್ ಪಕ್ಷಕ್ಕೆ ನಡುಕ ಹುಟ್ಟಿಸಿದ್ದರು. ಬೆಂಗಳೂರಿನಿAದ ಗೋಕಾಕಕ್ಕೆ ಆಗಮಿಸಿರುವ ಬಾಲಚಂದ್ರ ಜಾರಕಿಹೊಳಿ ಸೋಮವಾರ ಸಂಜೆ ೫ ಗಂಟೆಗೆ ಗೋಕಾಕ ನಗರದ ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಸಭೆ ಕರೆದಿದ್ದು ಕಾಂಗ್ರೇಸ್ …

Read More »

ರಮೇಶ ಜಾರಕಿಹೊಳಿ ದಾಖಲಾದ ಆಸ್ಪತ್ರೆಗೆ ಎಸ್ಐಟಿ ಅಧಿಕಾರಿಗಳ ಭೇಟಿ.!

ರಮೇಶ ಜಾರಕಿಹೊಳಿ ದಾಖಲಾದ ಆಸ್ಪತ್ರೆಗೆ ಎಸ್ಐಟಿ ಅಧಿಕಾರಿಗಳ ಭೇಟಿ.! ಯುವ ಭಾರತ ಸುದ್ದಿ, ಗೋಕಾಕ: ರಮೇಶ್ ಜಾರಕಿಹೊಳಿ‌ಗೆ ಕೊರೊನಾ ಪಾಸಿಟಿವ್ ಹಿನ್ನಲೆ ರಮೇಶ್ ಜಾರಕಿಹೊಳಿ‌ ಅವರು ದಾಖಲಾಗಿರುವ ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗೋಕಾಕ್ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಯುನಲ್ಲಿ ರಮೇಶ್ ಜಾರಕಿಹೊಳಿ‌ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಎಸ್ಐಟಿ ಅಧಿಕಾರಿಗಳು ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ರಿಂದ ಮಾಹಿತಿ ಪಡೆದಿದ್ದಾರೆ. ರಮೇಶ್ ಜಾರಕಿಹೊಳಿ‌ ಆರೋಗ್ಯದ ಕುರಿತು ವಿಚಾರಿಸಿ …

Read More »

ಸೋಂಕಿನಿಂದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿಲೆಂದು ಅಭಿಮಾನಿಗಳಿಂದ ದೇವರ ಮೊರೆ.!

ಸೋಂಕಿನಿಂದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿಲೆಂದು ಅಭಿಮಾನಿಗಳಿಂದ ದೇವರ ಮೊರೆ.! ಯುವ ಭಾರತ ಸುದ್ದಿ,  ಗೋಕಾಕ: ಗೋಕಾಕ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿ ಕಷ್ಟದಲ್ಲಿಯೂ ದೇವರ ಮೋರೆ ಹೋಗುವದು ಸಾಮಾನ್ಯ ಈಗ ರಮೇಶ ಜಾರಕಿಹೊಳಿ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನಲೆ ಅಭಿಮಾನಿಗಳು ಸಹ ದೇವರ ಮೊರೆ ಹೋಗಿದ್ದಾರೆ. ಕರೋನಾ ಸೋಂಕಿನಿAದ ರಮೇಶ ಜಾರಕಿಹೊಳಿ ಬೇಗ ಗುಣಮುಖರಾಗಿ ಬರಲೆಂದು ಹಾರೈಸಿ ಅಭಿಮಾನಿಗಳು ಮಂಗಳವಾರದAದು ನಗರದ ಮಹಾಲಕ್ಷಿ …

Read More »

ಸಹೋದರ ರಮೇಶ ಹಾಗೂ ಬಾಲಚಂದ್ರ ಬಿಜೆಪಿ ಪಕ್ಷದಲ್ಲಿದ್ದಾರೆ ಆ ಪಕ್ಷಕ್ಕೆ ಬೆಂಬಲಿಸೋದಾಗಿ ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ

ಗೋಕಾಕ: ಸಹೋದರ ರಮೇಶ ಹಾಗೂ ಬಾಲಚಂದ್ರ ಬಿಜೆಪಿ ಪಕ್ಷದಲ್ಲಿದ್ದಾರೆ ಆ ಪಕ್ಷಕ್ಕೆ ಬೆಂಬಲಿಸೋದಾಗಿ ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ. ಸೋಮವಾರದಂದು ಆದಿತ್ಯಾ ನಗರದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರುಗಳ ಭೇಟಿಯ ಬಗ್ಗೆ ಮಾತನಾಡಿ, ಬಿಜೆಪಿಗೆ ಬರುವಂತೆ ದೊಡ್ಡವರೆಲ್ಲ ಆಹ್ವಾನ ನೀಡಿದ್ದಾರೆ. ಸಹೋದರರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದಿದ್ದಾರೆ. ದಿ. ಸುರೇಶ ಅಂಗಡಿಯವರು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಒಳ್ಳೆಯ ಜನಪ್ರತಿನಿಧಿಯಾಗಿದ್ದರು, ಸದ್ಯ …

Read More »

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಜಯಶ್ರೀ ಪಾಟೀಲ ಮತಯಾಚನೆ.!

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಜಯಶ್ರೀ ಪಾಟೀಲ ಮತಯಾಚನೆ.! ಯುವ ಭಾರತ ಸುದ್ದಿ,ಗೋಕಾಕ್: ಗೋಕಾಕ ನಗರದ ವಿವಿಧ ನಗರ, ಗಲ್ಲಿಗಳಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಬಿಜೆಪಿ ಚುನಾವಣಾ ವಿಶೇಷ ಅಹ್ವಾನಿತ ಸಂಪರ್ಕ ಪ್ರಮುಖರಾದ ಜಯಶ್ರೀ ಪಾಟೀಲ ಮತಯಾಚನೆ ನಡೆಸಿದರು. ನಗರದ ಸತೀಶ ನಗರ, ದುರ್ಗಾ ನಗರ, ಬಾಂಬೆಚಾಳ, ಬಸವ ನಗರ, ಗುರುವಾರ ಪೇಠ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿಯ ಮಠಾಧೀಶರು, ವಿವಿಧ ಸಮುದಾಯಗಳ ಮುಖಂಡರುಗಳನ್ನು ಭೇಟಿ …

Read More »

ಬಿಜೆಪಿ ಅಭ್ಯರ್ಥಿಯಿಂದ ನಾಳೆ ಗೋಕಾಕ ಮತಕ್ಷೇತ್ರದಲ್ಲಿ ಪ್ರಚಾರ.!

ಗೋಕಾಕ: ಗೋಕಾಕ ಮತಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿಯ ಅಭ್ಯರ್ಥಿ ಮಂಗಳಾ ಅಂಗಡಿಯವರು ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರದಂದು ಮತಯಾಚನೆ ನಡೆಸಲಿದ್ದಾರೆಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹಾಗೂ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ತಿಳಿಸಿದ್ದಾರೆ. ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಶನಿವಾರದಂದು ಬೆಳಿಗ್ಗೆ ೯ಗಂಟೆಗೆ ಅಂಕಲಗಿ, ೧೦ಗಂಟೆಗೆ ಅಕ್ಕತಂಗೇರಹಾಳ, ೧೧ಗಂಟೆಗೆ ಖನಗಾಂವ, ೧೨ಗಂಟೆಗೆ ಮಮದಾಪುರ, ಮಧ್ಯಾಹ್ನ …

Read More »

ಬೆಳಗಾವಿ ಲೋಕಸಭಾ ಉಪ ಚುನಾವಣೆ 5ಲಕ್ಷ ಕ್ಕೂ ಹೆಚ್ಚು ಅಂತರದ ಮತಗಳ ಪಡೆಯಲು ಶ್ರಮಿಸಿ-ಮಹೇಶ ಟೆಂಗಿನಕಾಯಿ!

ಬೆಳಗಾವಿ ಲೋಕಸಭಾ ಉಪ ಚುನಾವಣೆ 5ಲಕ್ಷ ಕ್ಕೂ ಹೆಚ್ಚು ಅಂತರದ ಮತಗಳ ಪಡೆಯಲು ಶ್ರಮಿಸಿ-ಮಹೇಶ ಟೆಂಗಿನಕಾಯಿ.!! ಯುವ ಭಾರತ ಸುದ್ದಿ, ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು 5ಲಕ್ಷಕ್ಕೂ ಅಧಿಕ ಮತಗಳ ಅಂತರದಿAದ ಗೆಲ್ಲಿಸುವ ಗುರಿ ಹೊಂದಿದ್ದು, ಗೋಕಾಕ ಮತಕ್ಷೇತ್ರದಿಂದ 1ಲಕ್ಷಕ್ಕೂ ಅಧಿಕ ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಅವರು, ಬುಧವಾರದಂದು ನಗರದ ಸಮುದಾಯ …

Read More »