Breaking News

ಸಂಚಲನ ಮೂಡಿಸಿದ ಪುತ್ತಿಲ ಪ್ರಣಾಳಿಕೆ..!

ಸಂಚಲನ ಮೂಡಿಸಿದ ಪುತ್ತಿಲ ಪ್ರಣಾಳಿಕೆ..! ಹಿಂದೂ ನೇತಾರ, ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಹಿಂದುತ್ವದ ರಕ್ಷಣೆ ಜತೆಗೆ ಭ್ರಷ್ಟಾಚಾರ ರಹಿತ, ಜನಸ್ನೇಹಿ ಅಡಳಿತ ನೀಡುವ ಭರವಸೆಯ 31 ವಿಷಯಾಧಾರಿತ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಪುತ್ತೂರು ದರ್ಬೆ ಸುಭದ್ರ ಕಲ್ಯಾಣ ಮಂಟಪದ ಬಳಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಅಂಶಗಳನ್ನು ಜಾರಿಗೆ ಎಲ್ಲಾ ಕ್ರಮಗಳನ್ನು ಶಾಸಕನಾಗಿ ಆಯ್ಕೆಯಾದರೆ ಕೈಗೊಳ್ಳುವುದಾಗಿ ತಿಳಿಸಿದರು. …

Read More »

ಬಲ್ಲಿರೇನಯ್ಯ ಮುನ್ನುಡಿಯ ನಲ್ನುಡಿಯಿಂದ…

ಬಲ್ಲಿರೇನಯ್ಯ ಮುನ್ನುಡಿಯ ನಲ್ನುಡಿಯಿಂದ…. ದಿನೇಶ ಉಪ್ಪೂರರ ಈ ಪುಸ್ತಕ ಯಕ್ಷಗಾನದ ಲೋಕವನ್ನು ಬಲ್ಲವರಿಗೆ ಮತ್ತೆ ಮತ್ತೆ ಮೆಲ್ಲುವ ಕಜ್ಜಾಯ. ಓದಿಗೊಂದು ಹಾಸ್ಯದ ಮೆರಗು, ಮತ್ತೆ ಆಲೋಚಿಸಿದರೆ ಇಣುಕುವ ಲೋಕ ವಿವೇಕ. ಕಲೆಯ ಲೋಕ, ವಿಸ್ಮಯದ ಪ್ರಪಂಚ. ಕಲಾವಿದನನ್ನು ಸಾಮಾನ್ಯನಂತೆ ನಡೆಸಿಕೊಳ್ಳುವುದು ರಸಿಕರಿಗೆ ಒಪ್ಪುವ ಮಾತಲ್ಲ. ಕಲ್ಪನೆ, ಭ್ರಮೆಗಳಿಲ್ಲದಿದ್ದರೆ ಅದ್ಭುತ ರಮ್ಯವಾದ ಕಲೆಯನ್ನು ಅನುಭವಿಸಲಾಗುವುದಿಲ್ಲ. ಕಲಾವಿದನಿಗೂ ಸಹೃದಯನಿಗೂ ಸಮಾನವಾದ ಸಂಭ್ರಮ-ಸಮಸ್ಯೆ ಇದು. ಈ ವಿಸ್ಮಯದ ವಿಭಿನ್ನ ಮಗ್ಗುಲುಗಳು ತೆರೆದುಕೊಂಡಿವೆ ಈ ಪುಸ್ತಕದಲ್ಲಿ. …

Read More »

ವಕೀಲರಿಗೆ ಬೇಸಿಗೆಯಲ್ಲಿ ಕಪ್ಪು ಕೋಟ್ ಕಡ್ಡಾಯವಲ್ಲ

ವಕೀಲರಿಗೆ ಬೇಸಿಗೆಯಲ್ಲಿ ಕಪ್ಪು ಕೋಟ್ ಕಡ್ಡಾಯವಲ್ಲ ಯುವ ಭಾರತ ಸುದ್ದಿ ಬೆಂಗಳೂರು : ಬಿರು ಬೇಸಿಗೆ ಕಾಲಿಟ್ಟಿದೆ. ಹೀಗಾಗಿ ಬೇಸಿಗೆಯಲ್ಲಿ ವಕೀಲರಿಗೆ ಕಪ್ಪುಕೋಟು ಕಡ್ಡಾಯವಲ್ಲ. ಬೇಸಿಗೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳನ್ನು ಹೊರತುಪಡಿಸಿ ವಿಚಾರಣಾ ನ್ಯಾಯಾಲಯಗಳನ್ನು ಪ್ರವೇಶಿಸುವ , ವಾದ ಮಂಡಿಸುವ ಅಥವಾ ಕಲಾಪಗಳಲ್ಲಿ ಸಕ್ರಿಯರಾಗುವ ವಕೀಲರು ಕಪ್ಪುಕೋಟು ಧರಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ವಕೀಲರ ಪರಿಷತ್‌ ತಿಳಿಸಿದೆ . ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲರ …

Read More »

ದೇಶದ 150 ಭಾಷೆ ಅವನತಿ

ದೇಶದ 150 ಭಾಷೆ ಅವನತಿ ಯುವ ಭಾರತ ಸುದ್ದಿ ಮೈಸೂರು : 10 ಸಾವಿರಕ್ಕಿಂತ ಕಡಿಮೆ ಮಂದಿ ಮಾತನಾಡುವ ಭಾಷೆಯನ್ನು ಅವನತಿಯ ಅಂಚಿನಲ್ಲಿರುವ ಭಾಷೆಯೆಂದು ಗುರುತಿಸುವ ಕಾರಣದಿಂದಾಗಿ ದೇಶ ಈಗಾಗಲೇ 220 ಭಾಷೆಗಳನ್ನು ಕಳೆದುಕೊಂಡಿದ್ದು , ಇನ್ನೂ 150 ಭಾಷೆಗಳಿಗೆ ಇದೇ ಗತಿ ಒದಗುವ ಸಾಧ್ಯತೆಯಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ . ಮಹೇಶ್ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ . ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ …

Read More »

ಪತ್ರಕರ್ತರಿಗೆ ಬೆದರಿಕೆ : ಡಿಕೆಶಿ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

ಪತ್ರಕರ್ತರಿಗೆ ಬೆದರಿಕೆ : ಡಿಕೆಶಿ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು ಯುವ ಭಾರತ ಸುದ್ದಿ ಬೆಂಗಳೂರು : ಪತ್ರಕರ್ತರಿಗೆ ಬೆದರಿಕೆ ಹಾಕಿ , ಗೂಂಡಾ ವರ್ತನೆ ತೋರಿದ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಬುಧವಾರ ದೂರು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು . ಅದೇ ದಿನ ದೇಶದ ಗೃಹ ಸಚಿವ ಅಮಿತ್ …

Read More »

157 ನರ್ಸಿಂಗ್ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು

157 ನರ್ಸಿಂಗ್ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು ಯುವ ಭಾರತ ಸುದ್ದಿ ದೆಹಲಿ : ಸುಮಾರು 1,526 ಕೋಟಿ ರೂ.ವೆಚ್ಚದಲ್ಲಿ ದೇಶಾದ್ಯಂತ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳ ಬಳಿ ನರ್ಸಿಂಗ್ ಕಾಲೇಜುಗಳನ್ನು ಉದ್ದೇಶ ಹೊಂದಲಾಗಿದೆ. ಎರಡು ವರ್ಷದೊಳಗೆ ಈ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ …

Read More »

29 ರಿಂದ 23 ಕಡೆಗಳಲ್ಲಿ ಪ್ರಧಾನಿ ಮೋದಿ ಪ್ರಚಾರ

29 ರಿಂದ 23 ಕಡೆಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ಯುವ ಭಾರತ ಸುದ್ದಿ ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ವೇಳಾಪಟ್ಟಿ ಬಿಡುಗಡೆಯಾಗಿದೆ. ಏ .29 ರಿಂದ ಮೇ 7 ರವರೆಗೆ ಒಟ್ಟು 6 ದಿನ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಏ .29 ರಂದು ಬೀದರ್ ಜಿಲ್ಲೆ ಹುಮ್ನಾಬಾದ್ ನಿಂದ ಪ್ರಚಾರ ಆರಂಭಿಸುವ ಪ್ರಧಾನಿ , ಮೇ 7 ರಂದು ಬೆಂಗಳೂರಿನಲ್ಲಿ ತಮ್ಮ ಪ್ರಚಾರ ಅಂತ್ಯಗೊಳಿಸಲಿದ್ದಾರೆ. …

Read More »

ಗೋಕಾಕ ಮತಕ್ಷೇತ್ರದಲ್ಲಿ ಗುರುವಾರ ರಮೇಶ ಜಾರಕಿಹೊಳಿ ಅಬ್ಬರದ ಪ್ರಚಾರ !

ಗೋಕಾಕ ಮತಕ್ಷೇತ್ರದಲ್ಲಿ ಗುರುವಾರ ರಮೇಶ ಜಾರಕಿಹೊಳಿ ಅಬ್ಬರದ ಪ್ರಚಾರ ! ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಗುರುವಾರ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಡೀ ದಿನ ಅವರು ವಿವಿಧ ಗ್ರಾಮಗಳಿಗೆ ತೆರಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

Read More »

ಗೋಕಾಕ್ ಶುಗರ್ಸ್ ಲಿ. ಕೊಳವಿ: ಕಬ್ಬು ಬೆಳೆಯಲ್ಲಿ ಬರುವ ಗೊಣ್ಣೆ ಹುಳುವಿನ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷತೆ

ಗೋಕಾಕ್ ಶುಗರ್ಸ್ ಲಿ. ಕೊಳವಿ: ಕಬ್ಬು ಬೆಳೆಯಲ್ಲಿ ಬರುವ ಗೊಣ್ಣೆ ಹುಳುವಿನ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷತೆ. ಕೊಳವಿ: ಏಪ್ರಿಲ್ 26 ರಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿ, ಗೋಕಾಕ್ ಶುಗರ್ಸ್ ಲಿ. ಕೊಳವಿ ಹಾಗೂ ಸೋಲಿಡರಿಡ್ಯಾಡ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರೈತರಿಗೆ ಕಬ್ಬಿನ ಬೆಳೆಯಲ್ಲಿ ಬರುವ ಗೊಣ್ಣೆ ಹುಳುವಿನ ನಿಯಂತ್ರಣದ ತರಬೇತಿ ಪ್ರಾತ್ಯಕ್ಷಿತೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿಯ ಸಹಾಯಕ ಪ್ರಾಧ್ಯಾಪಕ, ವಿಷಯ ತಜ್ಞರಾದಂತಹ ಡಾ.ಮಂಜುನಾಥ ಚೌರೆಡ್ಡಿ …

Read More »

ಹೆಬ್ಬಾಳಕರ ಪಾಲಿಗೆ ಶಾಲಾ ಮಕ್ಕಳೇ ಸ್ಟಾರ್ ಪ್ರಚಾರಕರು !

ಹೆಬ್ಬಾಳಕರ ಪಾಲಿಗೆ ಶಾಲಾ ಮಕ್ಕಳೇ ಸ್ಟಾರ್ ಪ್ರಚಾರಕರು ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಾಲಿಗೆ ಶಾಲಾ ಮಕ್ಕಳೇ ಈಗ ಸ್ಟಾರ್ ಪ್ರಚಾರಕರಾಗಿದ್ದಾರೆ. ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ವ್ಯಾಪಕ ಪ್ರಮಾಣದಲ್ಲಿ ಬಳಸಿಕೊಂಡರೂ ಚುನಾವಣಾ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬೆಳಗಾವಿ ತಾಲೂಕಿನ ಖನಗಾಂವ ಬಿ.ಕೆ. ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಪಕ್ಷದ …

Read More »