Breaking News

ಸದ್ಯವೇ ಚುನಾವಣೆ ಘೋಷಣೆ !

ಸದ್ಯವೇ ಚುನಾವಣೆ ಘೋಷಣೆ ! ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆಗೆ ಸದ್ಯವೇ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಸರಕಾರ ಬಹುತೇಕ ತನ್ನ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದೆ. ತುರ್ತಾಗಿ ಮಾಡಬೇಕಾಗಿರುವ ಸರಕಾರಿ ಆದೇಶಗಳಿಗೆ ಮಂಗಳವಾರ ಪೂರಕ ಪ್ರಕ್ರಿಯೆ ನಡೆಸಿದೆ. ಕಳೆದ ಸಲ ಮೇ 12 ರಂದು ಒಂದೇ ಹಂತದ ನಡೆದು ಮೇ 15 ಕ್ಕೆ ಮತ ಎಣಿಕೆ ನಡೆದಿತ್ತು. ಈ ಸಲವು ಅದೇ ಆಸುಪಾಸಿನ …

Read More »

ಬೆಳಗಾವಿ ಜಿಲ್ಲೆಯ ನೀರಾವರಿ ಸಮಗ್ರ ಯೋಜನೆಗೆ 5500 ಕೋಟಿ ರೂ ಅನುದಾನ-ಸಿಎಮ್ ಬೊಮ್ಮಾಯಿ.

ಬೆಳಗಾವಿ ಜಿಲ್ಲೆಯ ನೀರಾವರಿ ಸಮಗ್ರ ಯೋಜನೆಗೆ 5500 ಕೋಟಿ ರೂ ಅನುದಾನ-ಸಿಎಮ್ ಬೊಮ್ಮಾಯಿ. ಗೋಕಾಕ: ನಮ್ಮ ಸರಕಾರ ರೈತರು, ಮಹಿಳೆಯರು, ದುರ್ಬಲರ ಏಳ್ಗೆಗಾಗಿ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಬೆಳಗಾವಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗಾಗಿ ೫೫೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು, ಮಂಗಳವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ಮತ್ತು ಅರಭಾಂವಿ ವಿಧಾನ ಸಭಾ ಮತಕ್ಷೇತ್ರದ ಸುಮಾರು ೨.೭೫೩ ಕೋಟಿ …

Read More »

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬೆಳಗಾವಿಯಿಂದ ಕರೆದೊಯ್ದ ಪೊಲೀಸರು

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬೆಳಗಾವಿಯಿಂದ ಕರೆದೊಯ್ದ ಪೊಲೀಸರು ಯುವ ಭಾರತ ಸುದ್ದಿ ಬೆಳಗಾವಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಎರಡು ಸಲ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನಾಗಪುರ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಜಯೇಶ್ ಪೂಜಾರಿ/ಜಯೇಶ ಕಾಂತ ಇವನ ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಬೆಳಿಗ್ಗೆ ಆತನನ್ನು ಹಿಂಡಲಗಾ ಜೈಲಿನಿಂದ ವಿಮಾನ ಮೂಲಕ ನಾಗಪುರಕ್ಕೆ ಕರೆದೊಯ್ಯಲಾಗಿದೆ. …

Read More »

ಪ್ಯಾನ್-ಆಧಾರ ಲಿಂಕ್ ಗಡುವು ವಿಸ್ತರಣೆ !

ಪ್ಯಾನ್-ಆಧಾರ ಲಿಂಕ್ ಗಡುವು ವಿಸ್ತರಣೆ ! ಪ್ಯಾನ್- ಆಧಾರ್ ಲಿಂಕ್ ಗಡುವನ್ನು ಜೂನ್ 30 ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಲಿಂಕ್ ಮಾಡಲು ನೀಡಿದ್ದ ಅವಧಿ ಮುಗಿಯುವ ಎರಡು ದಿನಗಳ ಮುಂಚೆಯೇ ಮತ್ತೆ ಗಡುವನ್ನು ವಿಸ್ತರಣೆ ಮಾಡಲಾಗದೆ. ತೆರಿಗೆ ವಂಚನೆ ತಡೆಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯವಾಗಿದೆ. ಯುವ ಭಾರತ ‌ಸುದ್ದಿ ಮುಂಬಯಿ : ಪ್ಯಾನ್ ( …

Read More »

ಬಸ್ಸಲ್ಲಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಂಡ ಪೊಲೀಸರು

ಬಸ್ಸಲ್ಲಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಂಡ ಪೊಲೀಸರು ಯುವ ಭಾರತ ಸುದ್ದಿ ಬೆಳಗಾವಿ : ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ಸಾಗಿಸುತ್ತಿದ್ದ 27.34 ಲಕ್ಷ ಹಣವನ್ನು ಪೊಲೀಸರು ಜಪ್ತ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ-ಕರ್ನಾಟಕ ಗಡಿಯ ಬಾಚಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪಾಂಡುರಂಗ ಎಂಬವರು ಬ್ಯಾಗ್ ನಲ್ಲಿ ಹಣ ಸಾಗಿಸುತ್ತಿದ್ದರು. ಇದನ್ನು ಜಪ್ತು ಮಾಡಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Read More »

ಸೇಫ್ ಸಿಟಿ ಸರ್ವೆಯಲ್ಲಿ ಸ್ಥಾನ ಪಡೆಯಿತು ರಾಜ್ಯದ ಈ ನಗರಿ

ಸೇಫ್ ಸಿಟಿ ಸರ್ವೆಯಲ್ಲಿ ಸ್ಥಾನ ಪಡೆಯಿತು ರಾಜ್ಯದ ಈ ನಗರಿ ಯುವ ಭಾರತ ಸುದ್ದಿ ದೆಹಲಿ : ರೋಯಲ್ ರಾಂಕಿಂಗ್ ವೆಬ್ಸೈಟ್ 2023ರ ವಿಶ್ವದ ಸೇಫ್ ಸಿಟಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಭಾರತದಿಂದ ಸೇಫ್ ಸಿಟಿಗಳ ಪಟ್ಟಿಯಲ್ಲಿ ಕರ್ನಾಟಕದ ಏಕೈಕ ನಗರವಾಗಿ ಕಡಲ ನಗರಿ ಮಂಗಳೂರು ಸ್ಥಾನ ಪಡೆದಿದೆ. ಅಬುದಾಬಿ ಮೊದಲ ಸ್ಥಾನ (88.3), ದೋಹಾ(86) ಮತ್ತು 3ನೇ ಸ್ಥಾನದಲ್ಲಿ ಅಜ್ಮಾನ್ (84.9) ಸೇರಿವೆ. ಜಗತ್ತಿನ ಸೇಫ್ ಸಿಟಿ ಪಟ್ಟಿಯಲ್ಲಿ …

Read More »

ಬಿಜೆಪಿ ನಾಯಕ ಕೈ ಪಕ್ಷದತ್ತ ?

ಬಿಜೆಪಿ ನಾಯಕ ಕೈ ಪಕ್ಷದತ್ತ ? ಯುವ ಭಾರತ ಸುದ್ದಿ ಬೆಂಗಳೂರು : ಹಿರಿಯ ರಾಜಕಾರಣಿ, ಕೂಡ್ಲಗಿಯ ಬಿಜೆಪಿ ಹಾಲಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮೊಳಕಾಲ್ಮೂರು, ಬಳ್ಳಾರಿ ಹಾಗೂ ಕೂಡ್ಲಗಿಯಿಂದ ಆರು ಬಾರಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಪ್ರಸ್ತುತ ಕೂಡ್ಲಗಿಯಿಂದ ಶಾಸಕರಾಗಿದ್ದಾರೆ. ಗೋಪಾಲಕೃಷ್ಣ ಸೋಮವಾರ ರಾತ್ರಿ ರಾಜಾನುಕುಂಟೆ ಸಮೀಪದ …

Read More »

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿ

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿ ಯುವ ಭಾರತ ಸುದ್ದಿ ನಾಗನೂರ: ಬೈಲಹೊಂಗಲ ತಾಲೂಕಿನ ನಾಗನೂರ ಸರ್ಕಾರಿ ಎಸ್‌ಪಿಎಮ್ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಅವರಿಗೆ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ರಾಯಚೂರು ಇವರ ವತಿಯಿಂದ ಲಿಂಗಸೂರಿನ ಶ್ರೀ ವಿಜಯ ಮಹಂತೇಶ್ವರ ಅನುಭವ ಮಂಟಪದಲ್ಲಿ ಇತ್ತೀಚಿಗೆ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯುತ್ತಮ ಸಾಹಿತ್ಯ ಸೇವೆಗಾಗಿ ರಾಜ್ಯ ಮಟ್ಟದ ಶ್ರೇಷ್ಠ ಸಾಧಕ …

Read More »

ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ

ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ ಯುವ ಭಾರತ ಸುದ್ದಿ ಬೆಂಗಳೂರು : ಸಮಾಜ‌ ಸುಧಾರಣೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪತ್ರಕರ್ತರ ವೃತ್ತಿಗೆ ಅನುಕೂಲವಾಗುವಂತಹ ಲ್ಯಾಪ್‌ಟಾಪ್, ಕ್ಯಾಮೆರಾ ಮತ್ತಿತರ ಅಗತ್ಯ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗಿದ್ದು, ಇವುಗಳನ್ನು ಬಳಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ …

Read More »

ಕರಕಿ

ಕರಕಿ ——- ಆಳಕ್ಕೆ ಇಳಿದಷ್ಟು ಬೇರು, ಮೇಲಕ್ಕೆ ತರಿದಷ್ಟು ಚಿಗುರು, ಇದು ಕರಕಿಯ ಖದರು; ಆಗಬೇಕಿದು ಮನುಷ್ಯನ ಜೀವದುಸಿರು. ಡಾ. ಬಸವರಾಜ ಸಾದರ.

Read More »