Breaking News

ಶನಿ ಪ್ರದೋಷ ಶನಿವಾರ

Spread the love

ಶನಿ ಪ್ರದೋಷ ಶನಿವಾರ

ಯುವ ಭಾರತ ಸುದ್ದಿ ಬೆಳಗಾವಿ :
ಫೆ. 18 ರಂದು ಒಂದೇ ದಿನ ಶನಿ ಪ್ರದೋಷ ಹಾಗೂ ಮಹಾಶಿವರಾತ್ರಿ ಯೋಗಾಯೋಗದಿಂದ ಬಂದಿದೆ. ಈ ನಿಮಿತ್ತ ಪಾಟೀಲ ಗಲ್ಲಿಯ ಶನಿ ದೇವಸ್ಥಾನದಲ್ಲಿ ಶನಿಶಾಂತಿ , ತೈಲಾಭಿಷೇಕ, ರುದ್ರಾಭಿಷೇಕ ಮುಂತಾದವುಗಳ ಸೇವೆಗಳ ಆಯೋಜನೆ ಮಾಡಲಾಗಿದೆ. ಶನಿ ಪ್ರದೋಷ ನಿಮಿತ್ತ ಸಂಜೆ 6 ಗಂಟೆಗೆ ವಿಶೇಷ ಅಭಿಷೇಕ, ಮಾಡಲಾಗುವುದು. ದಿವಸಪೂರ್ತಿ ಮಂದಿರದಲ್ಲಿ ಪ್ರಸಾದದ ಆಯೋಜನೆ ಮಾಡಲಾಗಿದೆ. ಸಂಜೆ 7.30 ಕ್ಕೆ ಪಾಲಕಿ ಸೇವೆ ಮಾಡಲಾಗುವುದು. ಭಕ್ತರು ಹೆಚ್ಚಿನ ಮಾಹಿತಿಗಾಗಿ ಮಂದಿರದಲ್ಲಿ ಸಂಪರ್ಕಿಸಬಹುದು. ಶನಿ ಪ್ರದೋಷದ ಮಹತ್ವ : ಶನಿದೇವರು ಶ್ರೀ ಶಿವ ಶಂಕರನ ಭಕ್ತರಿರುವುದರಿಂದ ಶನಿವಾರ ಬರುವ ತ್ರಯೋದಶಿಯ ದಿನ ಉಪವಾಸ ಮಾಡಿದರೆ ಎಲ್ಲಾ ದೋಷದಿಂದ ಮುಕ್ತಿ ಸಿಗುವುದು ಎನ್ನುತ್ತಾರೆ. ಶನಿ ಪೀಡೆಯ ಜನರು ಈ ದಿವಸ ಉಪವಾಸ ಪೂಜಾ ಮಾಡಿದರೆ ಲಾಭದಾಯಕ ಆಗುವುದು. ಶನಿವಾರಿ ಶನಿ ಪ್ರದೋಷ ಆಗುತ್ತದೆ. ಈ ವ್ರತದಿಂದ ಸಂತಾನ ಪ್ರಾಪ್ತಿ , ಯಶ ಪ್ರಾಪ್ತಿ ಆಗುವುದು, ಆಯುಷ್ಯದಲ್ಲಿ ಮಾನಸಿಕ, ಶಾರೀರಿಕ , ಆರ್ಥಿಕ ತೊಂದರೆಯವರಿಗೆ ಶನಿಯ ಅಶುಭದವರಿಗೆ, ಈ ಸಮಯದಲ್ಲಿ ಉಪವಾಸ ಹಾಗೂ ಉಪಾಯ ತಿಳಿದುಕೊಳ್ಳುವುದು ಮಹತ್ವ. ಇದು ಮಾಡಲಾಗಲಿಲ್ಲ ಎಂದರೆ ಪ್ರದೋಷ ಮತ್ತು ಶನಿವಾರದ ಯೋಗ ಅಂದರೆ ಶನಿ ಪ್ರದೋಷ ಶನಿ ದೇವರ ಶಾಂತಿಯ ಸಲುವಾಗಿ ಉಪಯೋಗವಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

three × three =