Breaking News

ಕನ್ಹಯ್ಯಾ ಲಾಲ್ ಹತ್ಯೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ.!

Spread the love

ಕನ್ಹಯ್ಯಾ ಲಾಲ್ ಹತ್ಯೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ.!


ಗೋಕಾಕ: ಕನ್ಹಯ್ಯಾ ಲಾಲ್ ಹತ್ಯೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೇದರಿಕೆ ಹಾಕಿರುವದನ್ನು ಖಂಡಿಸಿ ಇಲ್ಲಿಯ ಶ್ರೀರಾಮ ಸೇನೆಯ ಕಾರ್ಯಕರ್ತರು ಶುಕ್ರವಾರದಂದು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಸಲ್ಲಿಸಿದರು.
ಶ್ರೀರಾಮ ಸೇನೆಯ ಅಧ್ಯಕ್ಷ ರವಿ ಪೂಜೇರಿ ಮಾತನಾಡಿ, ರಾಜಸ್ಥಾನದ ಉದಪುರ ನಿವಾಸಿ ಕನ್ಹಯ್ಯಲಾಲ್ ಅವರನ್ನು ಮತಾಂದರು ಅಮನುಷವಾಗಿ ಕೊಲೆ ಮಾಡಿ, ದೇಶದ ಪ್ರಧಾನಿಯವರಿಗೆ ಬೇದರಿಕೆಯೊಡ್ಡಿದ್ದು ಗಂಭೀರ ಪ್ರಕರಣ, ಇದರ ಹಿಂದೆ ದೊಡ್ಡ ಜಾಲವೇ ಇದ್ದು ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಎನ್-ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದ ಒಂದೇ ಕಾರಣಕ್ಕೆ ಹತ್ಯೆ ಮಾಡಲು ಮುಂದಾಗುತ್ತಿರುವದು ಖಂಡನೀಯ. ಕೊಲೆಯಾದ ಕನ್ಹಯ್ಯಲಾಲ ಅವರಿಗೆ ರಾಜಸ್ಥಾನ ಸರಕಾರ ೫೦ಲಕ್ಷ ರೂ, ಸಹಾಯಧನ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಬಸವರಾಜ ಪಡತಾರೆ, ಮಂಜು ತೇಲಿ, ವಿಠ್ಠಲ ಗಣಾಚಾರಿ, ರಾಘವ ಪೂಜೇರಿ, ಶಿವು ಹಟ್ಟಿ, ಬಸವರಾಜ ವಡೇರ, ಶಿವು ಪೂಜೇರಿ, ಪ್ರವೀಣ ಹೂವನ್ನವರ ಸೇರಿದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

seventeen − eleven =