Breaking News

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the love

ಸೃಷ್ಟಿ ಸಮಷ್ಟಿಯ ಆದಿ….
ಚಿಗುರು ಚೈತನ್ಯದ ಮೂಲ ಯುಗಾದಿ

ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು ಸೃಷ್ಟಿಕರ್ತನಾದ ಪರಬ್ರಹ್ಮನು ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿಸಿ ಪೂರ್ಣಗೊಳಿಸಿದನೆಂದು ಪ್ರತೀತಿ.

ನಾವು ಪ್ರಕೃತಿ ಮಾತೆಯ ಮಡಿಲಿನ ಅತ್ಯಂತ ಬುದ್ಧಿವಂತ ಸೃಷ್ಟಿಯಾದ ಕಾರಣ ; ಈ ದಿನದಂದು ಸುತ್ತಲಿನ ನಿಸರ್ಗವನ್ನು ಸೂಕ್ಷ್ಮ ವಾಗಿ ಅವಲೋಕಿಸಿದಾಗ ಹೊಸ ಚೈತನ್ಯದ ಅನುಭವ ಖಂಡಿತವಾಗಿಯೂ ನಮ್ಮ ಇಂದ್ರಿಯ ಮತ್ತು ಮನಸ್ಸುಗಳಿಗೆ ನಿಲುಕುತ್ತದೆ. ಮಾವು -ಬೇವು ಹೊಂಗೆಯಂಥ ಮರಗಳತ್ತ ಸುಮ್ಮನೇ ಒಮ್ಮೆ ದೃಷ್ಟಿ ಹೊರಳಿದಾಗ ಹೊಸತನದ ನವಿರುಭಾವ ಮನಸ್ಸನ್ನು ಆವರಿಸುತ್ತದೆ. ಬಹುಶಃ ಈ ಹೊಸತನ ಪ್ರತಿ ವರ್ಷವೂ ಪುನರಾವರ್ತನೆಯಾಗಿ ಹಲವಾರು ದಶಕಗಳನ್ನು ಕಂಡ ಸಸ್ಯ ಸಂಕುಲಕ್ಕೆ ನವ ಪಲ್ಲವಗಳ ಉಡುಗೆ ಸಂಭ್ರಮವನ್ನು ತುಂಬದಿದ್ದರೆ
ಜಗತ್ತು ಏಕತಾನತೆಯಿಂದ ಹಳೆಯ ಬೇರು- ಬಿಳಲುಗಳಲ್ಲಿ ಅಂತೆಯೇ ಜಿಡ್ಡುಗಟ್ಟಿದ ಮನಸ್ಸುಗಳ ಜಂಜಡಗಳಲ್ಲಿ ಸೊರಗಿ ನವನಾವೀನ್ಯ ವೆಂಬುದು ಮರೀಚಿಕೆಯಾಗುತ್ತಿತ್ತು.

ಸೃಷ್ಟಿಯಿಂದ ಪ್ರೇರೇಪಿತ ಗೊಂಡ ಹೊಸ ಚಿಗುರು -ಹೊಸತನಗಳಿಗೆ ಮೈ -ಮನಗಳನ್ನು ಅರ್ಪಣೆಗೊಂಡು ಚೇತನ ಉಕ್ಕಿನೆ ಕೊರಡು- ಕೊನರಿಸುವ ;ಕೊರಡಾದ ಭಾವನೆಗಳಲ್ಲಿ ಪ್ರೀತಿ -ಕರುಣೆ ಸಂತೋಷದ ಪರಿಪೂರ್ಣ ಭಾವವನ್ನು ಪುನಃ ಪುನಃ ಸ್ಫುರಿಸುವಂತೆ ನಮ್ಮೆಲ್ಲರ ಜೀವನದಲ್ಲಿ ಹೊಸ ಸಂವತ್ಸರದ ಆಗಮನದೊಂದಿಗೆ ಹೊಸತನಕ್ಕಾಗಿ ತುಡಿಯುವಂತೆ ಮಾಡುವ ಈ ಸೃಷ್ಟಿಗೂ ಮತ್ತು ಸೃಷ್ಟಿಕರ್ತನಿಗೂ ಕೃತಜ್ಞತಾ ಭಾವದಿಂದ ನಮನಗಳನ್ನು ಸಲ್ಲಿಸುವ ಈ ದಿನವನ್ನು ಪರಿಸರದ ಕಾಳಜಿಯೊಂದಿಗೆ ಪ್ರಾರಂಭನೆ ಮುಂಬರುವ ಹೊಸ ಶೋಭಕೃತ್ ಸಂವತ್ಸರನವು ಎಲ್ಲರ ಬಾಳಲ್ಲಿ ಹೊಸತನ ಸಮೃದ್ಧಿ ಸಾಧನೆಗಳಿಗೆ ನಾಂದಿಯಾಗಲಿ ಎಂದು ಹಾರೈಸುತ್ತಾ .
‌‌ಎಲ್ಲರಿಗೂ
ಬೇವು ಬೆಲ್ಲದ ಜೀವನದಲ್ಲಿ ಬೇವಿನಯುಗ ಷಣಾರ್ಥವಾಗಿ ಬೆಲ್ಲದ ಪಾಲು ಸಾರಸಗಟಾಗಿ ದಕ್ಕಲೆಂದು ಶುಭ ಕೋರುತ್ತಾ ನವಯುಗವು ಸರ್ವರ ಬಾಳಲ್ಲಿ ನವ ಚೈತನ್ಯ ತುಂಬಲಿ.
ಯುಗಾದಿಯ ಸಂಭ್ರಮದ ಶುಭಾಷಯಗಳೊತುಂಬಲಿ

ಡಾ. ‌ಶ್ರೀದೇವಿ ಆನಂದ ಪೂಜಾರಿ


Spread the love

About Yuva Bharatha

Check Also

ಹಕ್ಕಿ-ಡಿಕ್ಕಿ

Spread the loveಹಕ್ಕಿ-ಡಿಕ್ಕಿ ———— ಚಿಕ್ಕ ಹಕ್ಕಿ ಪಕ್ಕನೆ ನುಂಗಲಾರದು, ಹಾರುವ ಬೃಹತ್ ವಿಮಾನವನ್ನು; ಆದರೂ ಓಡಿಸುತ್ತಾರೆ ದೂರ, ಡಿಕ್ಕೀ …

Leave a Reply

Your email address will not be published. Required fields are marked *

5 × three =