Breaking News

ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ತೃತೀಯ ಮಹಾ ಸಮಾರಾಧನಾ ಮಹೋತ್ಸವ 24,25 ರಂದು

Spread the love

ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ತೃತೀಯ ಮಹಾ ಸಮಾರಾಧನಾ ಮಹೋತ್ಸವ 24,25 ರಂದು

ಯುವ ಭಾರತ ಸುದ್ದಿ ಬೆಳಗಾವಿ :
ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ತೃತೀಯ ಆರಾಧನಾ ಮಹೋತ್ಸವ ಡಿಸೆಂಬರ್ 24 ರಂದು ಮತ್ತು 25 ರಂದು ಇಲ್ಲಿಯ ಆರ್ ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣಮಠದಲ್ಲಿ ನಡೆಯಲಿದೆ.

ಡಿ.24 ರಂದು ಸಂಜೆ 5 ಕ್ಕೆ ಹರಿ ಭಜನೆ, ಸಂಜೆ 6 ಕ್ಕೆ ಅಥಣಿಯ ಡಾ.ಗುರುರಾಜ ಆಚಾರ್ಯ ಗುಡಿ ಅವರಿಂದ ಶ್ರೀ ವಿಶ್ವೇಶ ತೀರ್ಥರ ಬಹುಮುಖ ವ್ಯಕ್ತಿತ್ವ ಕುರಿತು ವಿಶೇಷ ಉಪನ್ಯಾಸ, ಸಂಜೆ 7 ಕ್ಕೆ ಸೂರಜ ಮಠದ ಅವರಿಂದ ಕೊಳಲು ವಾದನ ನಡೆಯಲಿದೆ.
ಡಿ.25 ರಂದು ಬೆಳಗ್ಗೆ 6 ಕ್ಕೆ ಧನುರ್ಮಾಸ ಪೂಜೆ, 7.30 ಕ್ಕೆ ಪವಮಾನ ಹೋಮ, 9 ಕ್ಕೆ ವಾಯು ಸ್ತುತಿ, 10.30 ಕ್ಕೆ ವಿದ್ವಾಂಸರಿಂದ ಶ್ರಾಸ್ತ್ರಾನುವಾದ, ಪ್ರವಚನ, ಮಧ್ಯಾಹ್ನ 12.30 ಕ್ಕೆ ರಥೋತ್ಸವ, ನೈವೇದ್ಯ, ಸೇವಾಕತೃಗಳಿಗೆ ಪ್ರಸಾದ ವಿತರಣೆ, ಮಹಾ ಮಂಗಳಾರತಿ, ಸಂಜೆ 4 ಕ್ಕೆ ಹರಿ ಭಜನೆ, ಸಂಜೆ 6 ಕ್ಕೆ ಅರ್ಚನಾ ಕುಲಕರ್ಣಿ ಹಾಗೂ ತಂಡದವರಿಂದ ಸುಗಮ ಸಂಗೀತ, ರಾತ್ರಿ 8 ಕ್ಕೆ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

4 + 12 =