Breaking News

ಮಂಜುಳಾ ಪಾಟೀಲ, ಎಂ.ಎನ್.ಪಾಟೀಲ ಅವರಿಗೆ ಸಾರ್ವಜನಿಕ ವಾಚನಾಲಯದ ಪ್ರಶಸ್ತಿ ಪ್ರಕಟ

Spread the love

ಮಂಜುಳಾ ಪಾಟೀಲ, ಎಂ.ಎನ್.ಪಾಟೀಲ ಅವರಿಗೆ
ಸಾರ್ವಜನಿಕ ವಾಚನಾಲಯದ ಪ್ರಶಸ್ತಿ ಪ್ರಕಟ

ಯುವ ಭಾರತ ಸುದ್ದಿ ಬೆಳಗಾವಿ:
ಇಲ್ಲಿಯ ಸಾರ್ವಜನಿಕ ವಾಚನಾಲಯ ಪ್ರತಿವರ್ಷ ನೀಡುವ ಪತ್ರಕರ್ತ ಪ್ರಶಸ್ತಿ
ಕನ್ನಡ ವಿಭಾಗದಲ್ಲಿ
ಎಂ.ಎನ್. ಪಾಟೀಲ (ಮುಖ್ಯ ವರದಿಗಾರರು, ಲೋಕದರ್ಶನ ದಿನಪತ್ರಿಕೆ, ಬೆಳಗಾವಿ),
ಮರಾಠಿ ವಿಭಾಗದಲ್ಲಿ ಅಣ್ಣಪ್ಪ ಪಾಟೀಲ (ಪತ್ರಕರ್ತ, ತರುಣ ಭಾರತ ದಿನ ಪತ್ರಿಕೆ, ಬೆಳಗಾವಿ)
ಹಾಗೂ ಎಸ್.ಆರ್.ಜೋಗ ಮಹಿಳಾ ಪತ್ರಕರ್ತೆ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಮಂಜುಳಾ ಪಾಟೀಲ, (ಸಂಪಾದಕಿ, ಸಂಧ್ಯಾ ಸಮಯ ದಿನ ಪತ್ರಿಕೆ, ಬೆಳಗಾವಿ) ಹಾಗೂ
ಮರಾಠಿ ವಿಭಾಗದಲ್ಲಿ ಕ್ರಾಂತಿ ಹುದ್ದಾರ (ಸಂಪಾದಕಿ, ಬೆಳಗಾವ ವಾರ್ತಾ ದಿನ ಪತ್ರಿಕೆ) ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಪ್ರಶಸ್ತಿಯನ್ನು ಜನವರಿ 18 ರಂದು ಸಂಜೆ 5:30 ಗಂಟೆಗೆ ಖಾನಾಪುರ ರಸ್ತೆಯ ಮರಾಠಾ ಮಂದಿರ ಸಭಾಗೃಹದಲ್ಲಿ ಬ್ಯಾರಿಸ್ಟರ್ ನಾಥ ಪೈ ವ್ಯಾಖ್ಯಾನಮಾಲೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

1 × three =