Breaking News

ಗೋಕಾಕ ಬಿಜೆಪಿ ಕಚೇರಿಯಲ್ಲಿ ವಿವೇಕಾನಂದರ ಜನ್ಮದಿನಾಚರಣೆ : ವಿವೇಕಾನಂದರು ಯುವ ಸಮುದಾಯದ ಸ್ಪೂರ್ತಿ ಸೆಲೆ ; ಭೀಮಶಿ ಭರಮಣ್ಣವರ

Spread the love

ಗೋಕಾಕ ಬಿಜೆಪಿ ಕಚೇರಿಯಲ್ಲಿ ವಿವೇಕಾನಂದರ ಜನ್ಮದಿನಾಚರಣೆ : ವಿವೇಕಾನಂದರು ಯುವ ಸಮುದಾಯದ ಸ್ಪೂರ್ತಿ ಸೆಲೆ ; ಭೀಮಶಿ ಭರಮಣ್ಣವರ

ಯುವ ಭಾರತ ಸುದ್ದಿ ಗೋಕಾಕ :
ಸ್ವಾಮಿ ವಿವೇಕಾನಂದರು ಯುವ ಸಮುದಾಯದ ಸ್ಪೂರ್ತಿ ಸೆಲೆ. ಅವರ ವಿಚಾರಧಾರೆಗಳು ಮನುಕುಲಕ್ಕೆ ಸದಾ ಮಾರ್ಗದರ್ಶಕವಾಗಿವೆ ಎಂದು ಗೋಕಾಕ ನಗರ ಬಿಜೆಪಿ ಅಧ್ಯಕ್ಷ ಭೀಮಶಿ ಭರಮಣ್ಣವರ ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ ಪ್ರಭಾವಪೂರ್ಣ ವಾಗ್ಮಿತ್ವದ ಮೂಲಕ ಹಾಗೂ ಪ್ರಚೋದಕತ್ವ ಬರಹಗಳಿಂದ ನಮ್ಮ ರಾಷ್ಟ್ರ ಚೇತನವನ್ನು ಜಾಗೃತಗೊಳಿಸಿದವರು. ಯುವಕರಲ್ಲಿ ನವೋತ್ಸವ ಕೆರಳಿಸಿ ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದವರಾಗಿದ್ದಾರೆ ಎಂದು ಹೇಳಿದರು.

ಸ್ವಾಮೀಜಿಯವರ ಕೃತಿಗಳನ್ನು ಓದಿದಾಗ ಇಂದಿಗೂ ಅವರ ಶಕ್ತಿ, ಪ್ರಭಾವಗಳ ಸಂಚಾರ ನಮ್ಮಲ್ಲಿ ಉಂಟಾಗುತ್ತದೆ. ಅವರ ಚಿಂತನೆಗಳು ಪ್ರಜ್ವಲಿಸುತ್ತಿರುವ ಭಾವಾಗ್ನಿಕುಂಡದಿಂದ ಸಿಡಿದುಬಂದ ಕಿಡಿಗಳಾಗಿವೆ. ಅವರ ವಿದ್ಯುತ್ ವಾಣಿಗಳು ಯುವ ಸಮೂಹವನ್ನೇ ಅತ್ಯಂತ ಪ್ರಭಾವಯುತವಾಗಿ ಸೆಳೆಯುತ್ತವೆ. 100 ವರ್ಷಗಳ ಹಿಂದೆಯೇ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ್ದ ಸ್ವಾಮಿ ವಿವೇಕಾನಂದರು ಅಂದು ಹೇಳಿದ್ದ ಏಳಿ ಎಚ್ಚರಗೊಳ್ಳಿ ಎಂಬ ಮಾತು ಭಾರತೀಯರಿಗೆ ಇಂದಿಗೂ ಸ್ಪೂರ್ತಿಯ ಸೆಲೆಯಾಗಿದೆ. ಸ್ವಾಮಿ ವಿವೇಕಾನಂದರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅವರ ಸ್ಪೂರ್ತಿಯ ಮಾತಿನಂತೆ ನಾವು ನಮ್ಮ ಜೀವನವನ್ನು ರೂಪಿಸಿಕೊಂಡು ಮಹಾನ್ ವ್ಯಕ್ತಿತ್ವ ಬೆಳೆಸಿಕೊಳ್ಳೋಣ ಎಂದು ಹೇಳಿದರು.

ಸುರೇಶ ಸನದಿ, ಲಕ್ಷ್ಮೀಕಾಂತ ಎತ್ತಿನಮನಿ, ಕೆಂಪಣ್ಣ ಮೈಲನ್ನವರ, ಮಡ್ಡೆಪ್ಪ ತೋಳಿನವರ, ಪ್ರಮೋದ ಜೋಶಿ ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ವಡೇಯರ,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿರೇಂದ್ರ ಎಕ್ಕೇರಿಮಠ,ಶ್ರೀ ಭೀಮಶಿ ಕೊಳವಿ, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

twenty + two =