Breaking News

ರಮೇಶ ಜಾರಕಿಹೊಳಿ ನಾಯಕತ್ವದಲ್ಲೆ 18 ಸ್ಥಾನ ಜಿಲ್ಲೆಯಲ್ಲಿ ಗೆಲ್ಲುತ್ತೆವೆ-ನಳಿನಕುಮಾರ ಕಟೀಲ.!

Spread the love

ರಮೇಶ ಜಾರಕಿಹೊಳಿ ನಾಯಕತ್ವದಲ್ಲೆ 18 ಸ್ಥಾನ ಜಿಲ್ಲೆಯಲ್ಲಿ ಗೆಲ್ಲುತ್ತೆವೆ-ನಳಿನಕುಮಾರ ಕಟೀಲ.!


ಗೋಕಾಕ: ರಮೇಶ ಜಾರಕಿಹೊಳಿ ಸಚಿವರಾದ್ದಗಲೂ ಬೆಳಗಾವಿ ಜಿಲ್ಲೆಯ ನಾಯಕತ್ವ ಹೊಂದಿದ್ದರು ಈಗಲೂ ಇವರು ನಾಯಕತ್ವದಲ್ಲೆ ಮುಂದುವರೆಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದರು.
ಅವರು, ಬುಧವಾರದಂದು ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಈ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ೧೮ ಸ್ಥಾನಗಳನ್ನು ಗೆಲ್ಲಬೇಕು ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನು ನಾನು ಮತ್ತು ರಮೇಶ ಜಾರಕಿಹೊಳಿ ಮಾಡುತ್ತಿದ್ದೆವೆ. ರಮೇಶ ಜಾರಕಿಹೊಳಿ ಸಚಿವ ಸ್ಥಾನ ನೀಡುವದು ಮುಖ್ಯಮಂತ್ರಿಗಳಿಗೆ ವಿವೇಚಣೆಗೆ ಬಿಟ್ಟದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಮುಂದೆ ಕಾದು ನೋಡೋಣ. ಪಕ್ಷದಲ್ಲಿ ಎಲ್ಲರಿಗೂ ನಾಯಕತ್ವ ಇದ್ದೆ ಇದೆ ಎಂದರು.
ಈ ಹಿಂದೆ ಸದನದಲ್ಲಿ ಸಿದ್ಧರಾಮಯ್ಯನವರು ಸಾವಲು ಹಾಕಿದ್ದರು, ಪಿಎಫ್‌ಐ ನಿಷೇಧ ಮಾಡಿ ತಾಕತ್ತಿದ್ದರೆ ಎಂದು ಹೀಗಾಗಿ ನಮ್ಮ ಸರಕಾರ ಸಿದ್ಧರಾಮಯ್ಯನವರು ಪೋಷಿಸುತ್ತಿದ್ದ ದೇಶದ್ರೋಹಿ, ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವದರಿಂದ ಪಿಎಫ್‌ಐ ಸಂಘಟನೆಯನ್ನು ನಿಗ್ರಹ ಮಾಡಿದರೆ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಅಲ್ಪಸಂಖ್ಯಾತ ಮತಗಳ ಓಲೈಕೆಯಲ್ಲಿರುವ ನಿಮಗೆ ಹಿಂದುಗಳ ಮತಗಳು ಬೇಡ ಎಂದು ಬಹಿರಂಗವಾಗಿ ಹೇಳಿ ಎಂದು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × two =