Breaking News

ಕಾದರವಳ್ಳಿಯ ಮಲಪ್ರಭಾ ನದಿತೀರದ ಚರಂತಿಮಠದ ವತಿಯಿಂದ ಶ್ರೀ ಸದ್ಗುರು ಅದೃಶ್ಯ ಶಿವಯೋಗೀಶ್ವರರ 86 ನೇ ಸ್ಮರಣೋತ್ಸವ

Spread the love

ಕಾದರವಳ್ಳಿಯ ಮಲಪ್ರಭಾ ನದಿತೀರದ ಚರಂತಿಮಠದ ವತಿಯಿಂದ ಶ್ರೀ ಸದ್ಗುರು ಅದೃಶ್ಯ ಶಿವಯೋಗೀಶ್ವರರ 86 ನೇ ಸ್ಮರಣೋತ್ಸವ

ಯುವ ಭಾರತ ಸುದ್ದಿ ಇಟಗಿ :
ಕಾದರವಳ್ಳಿ ಗ್ರಾಮದ ಮಲಪ್ರಭಾ ನದಿ ತೀರದ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ ಜ್ಞಾನಾಶ್ರಮ ಚರಂತಿಮಠದಲ್ಲಿ ಶ್ರೀ ಸದ್ಗರು ಅದೃಶ್ಯಶಿವಯೋಗೀಶ್ವರರ 86 ನೇ ಸ್ಮರಣೋತ್ಸವ ಅಂಗವಾಗಿ ಮೇಣೆ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ಚರಂತಿಮಠದ ಮೂಲ ಗದ್ದುಗೆಯಿಂದ ಆರಂಭಗೊಂಡ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ ಮೇಣೆ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಕಲವಾದ್ಯಗಳೊಂದಿಗೆ ಹೊರಟ ಉತ್ಸವದಲ್ಲಿ ಪೂರ್ಣ ಕುಂಭಗಳನ್ನು ಹೊತ್ತ ಸುಮಂಗಲೆಯರು ಭಾಗವಹಿಸಿದ್ದರು.

ಮನೆ ಮುಂದೆ ಬಂದ ಮೇಣೆ ಉತ್ಸವಕ್ಕೆ ಗ್ರಾಮಸ್ಥರು ನೀರು ಹನಿಸಿ ಪೂಜಿಸಿ ಬೀಳ್ಕೊಟ್ಟರು. ನಂತರ ಮಲಪ್ರಭಾ ನದಿ ತೀರದ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ ಜ್ಞಾನಾಶ್ರಮ ಚರಂತಿಮಠದಲ್ಲಿ ಉತ್ಸವ ಸಂಪನ್ನಗೊಂಡಿತು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

six − six =