ಸಂಗನಕೇರಿಯಲ್ಲಿ ಅದ್ದೂರಿಯಾಗಿ ಜರುಗಿದ ಹನುಮಾನ ಕಾರ್ತಿಕೋತ್ಸವ.!
![](http://yuvabharatha.com/wp-content/uploads/2022/11/IMG-20221107-WA0393-138x300.jpg)
ಗೋಕಾಕ: ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತಿ ವಿಜೃಂಭಣೆಯಿಂದ ಶ್ರೀ ಹನುಮಾನ್ ಕಾರ್ತಿಕೋತ್ಸವನ್ನು ಆಚರಿಸಲಾಯಿತು.ಅದೇ ದಿನ ಸಾಯಂಕಾಲ ಫ್ರೆಂಡ್ಸ್ ಗ್ರೂಪ್ ವತಿಯಿಂದ ಹಮ್ಮಿಕೊಳ್ಳಲಾದ ಜಿದ್ದಾಜಿದ್ದಿನ ಟಗರಿನ ಕಾಳಗಕ್ಕೆ ಊರಿನ ಗಣ್ಯರಿಂದ ಚಾಲನೆ ನೀಡಲಾಯಿತು .ಅದೇ ಸಂದರ್ಭದಲ್ಲಿ ಹನುಮಾನ್ ದೇವರ ಕಾರ್ತಿಕೋತ್ಸವಕ್ಕೆ ತನು ಮನ ಧನ ಸಹಾಯ ಮಾಡಿದಂತ ಊರಿನ ಯುವಕರಿಗೆ ಮತ್ತು ಹಿರಿಯರಿಗೆ ಹಾಗೂ ಪತ್ರಕರ್ತರಿಗೂ ಶಾಲ್ ಹೊದಿಸಿ ಸನ್ಮಾನ ಮಾಡಲಾಯಿತು .
ಕಾರ್ತಿಕೋತ್ಸವದ ನಿಮಿತ್ತ ಇನ್ನು ಏನೇನು ಕ್ರೀಡೆ ಹಾಗೂ ಮನರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಲ್ಲ ಕಾರ್ಯಕ್ರಮಕ್ಕೆ ಊರಿನ ಗಣ್ಯರಾದ ಬಸವರಾಜ್ ಕ ಮಾಳೆದವ, ರ್ಅರ್ಜುನ್ ಚಿಕ್ಕೋಡಿ ,ಮುತ್ತಪ್ಪ ಜಲ್ಲಿ ,ಭೀಮಶಿ ಮಾಳೆದವರ್ , ದೊಡ್ಡಪ್ಪ ಸಂಪಗಾವಿ ,ನಾಗಪ್ಪ ಮಾಳೆದವರ್ ,ಅಶೋಕ್ ಗಾಡಿ ವಡ್ಡರ್ ,ಮಲಗೌಡ ಮಾಳಗೋಳ ,ವಿಠ್ಠಲ್ ಸಿಂಗೋಟಿ ,ಯಲ್ಲಪ್ಪ ಮಾಳಗೋಳ, ಶಶಿಕಾಂತ್ ಮಾಳೆದವರ್ ,ದುಂಡಪ್ಪ ಮಾಂಗ್ಲಿ ,ಭೀಮಸಿ ಮರಾಠಿ. ಸುಭಾಷ್ ಗೊಡ್ಯಾಗೋಳ್ ,ಎಲ್ಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .