Breaking News

Yuva Bharatha

ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ

ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ ಯುವ ಭಾರತ ಸುದ್ದಿ ಇಂಡಿ: ಸಮಾಜದಲ್ಲಿ ತೆರೆಮರೆಯಲ್ಲಿ ಮಹಿಳೆಯರು ಮಾಡುವ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಶ್ರೀ ಆಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸೂಲಗಿತ್ತಿಯರಿಗೆ ಸನ್ಮಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಹಿಂಥ ಮಠ,ಮಾನ್ಯಗಳಿಂದ ಮಹಿಳೆಯರ ಸಾಧನೆ ಗುರುತಿಸಲು ಸಾಧ್ಯ ಎಂದು ನಿವೃತ್ ಪ್ರಾಚಾರ್ಯ ಶೈಲಜಾ ತೆಲ್ಲೂರ ಹೇಳಿದರು. ಅವರು ತಾಲೂಕಿನ ಗೋಳಸಾರ ಗ್ರಾಮದಲ್ಲಿ ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಸೋಮವಾರ …

Read More »

ಕೊಹ್ಲಿ ಮಿಂಚಿನ ಶತಕ

ಕೊಹ್ಲಿ ಮಿಂಚಿನ ಶತಕ   ಯುವ ಭಾರತ ಸುದ್ದಿ ಗುವಾಹಟಿ : ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಗತಕಾಲದ ಬ್ಯಾಟಿಂಗ್ ವೈಭವಕ್ಕೆ ಮರಳಿದ್ದಾರೆ. ಇಂದು ವೈಭವದ ಬ್ಯಾಟಿಂಗ್ ನಡೆಸಿದ್ದಾರೆ. ಅವರು ಇಂದು ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯಾವಳಿಯಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಶ್ರೇಷ್ಠ ಬ್ಯಾಟ್ಸ್ಮನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಒಂದು ಭರ್ಜರಿ ಸಿಕ್ಸರ್, 12 …

Read More »

ಸಾರ್ಥಕ ಜೀವನ ವಿಧಾನದಿಂದ ಆಕಾಶದ ಮಿನುಗುವ ತಾರೆಗಳಂತೆ ಚಿರಾಯುವಾಗಬೇಕು : ಪ್ರಕಾಶ ಅವಲಕ್ಕಿ

ಸಾರ್ಥಕ ಜೀವನ ವಿಧಾನದಿಂದ ಆಕಾಶದ ಮಿನುಗುವ ತಾರೆಗಳಂತೆ ಚಿರಾಯುವಾಗಬೇಕು : ಪ್ರಕಾಶ ಅವಲಕ್ಕಿ ಯುವ ಭಾರತ ಸುದ್ದಿ ನಿಪ್ಪಾಣಿ : ಕೆಲವರು ತಮ್ಮ ಸಾರ್ಥಕ ಜೀವನದ ವಿಧಾನಗಳಿಂದಾಗಿ ಆಕಾಶದ ಮಿನುಗುವ ತಾರೆಗಳಂತೆ ಬೆಳಕನ್ನೀಯುತ್ತಾ ಚಿರಾಯುವಾಗಿರುತ್ತಾರೆ. ಅಂತಹ ವಿರಳ ಸಾಲಿನಲ್ಲಿ ನಮ್ಮ ತ್ಯಾಗವೀರ ಸಿರಸಂಗಿ ಲಿಂಗರಾಜರು ಸದಾ ಕಾಲಕ್ಕೂ ಪ್ರಾತಃ ಸ್ಮರಣೀಯರು ಎಂದು ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅವಲಕ್ಕಿ ಅಭಿಪ್ರಾಯಪಟ್ಟರು. ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ. ಆಯ್. …

Read More »

ಅಸ್ವಸ್ಥ ಮಹಿಳೆಯನ್ನು ಬಿಮ್ಸ್ ಗೆ ದಾಖಲಿಸಲು ನೆರವಾದ ಡಾ.ಸೋನಾಲಿ ಸರ್ನೋಬತ್

ಅಸ್ವಸ್ಥ ಮಹಿಳೆಯನ್ನು ಬಿಮ್ಸ್ ಗೆ ದಾಖಲಿಸಲು ನೆರವಾದ ಡಾ.ಸೋನಾಲಿ ಸರ್ನೋಬತ್ ಯುವ ಭಾರತ ಸುದ್ದಿ ಬೆಳಗಾವಿ : ಉದ್ಯಮಬಾಗ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಸೋನಾಲಿ ಸರ್ನೋಬತ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಸಂತೋಷ ಧಾರೇಕರ, ಅವಧೂತ ತುಡವೇಕರ, ಸೌರಭ ಸಾವಂತ, ವಿವೇಕ ಮಹಾಂತಶೆಟ್ಟಿ ಇಂದು ಉದ್ಯಮಭಾಗ ಪೊಲೀಸ್ ಠಾಣೆಯ ತಂಡದ ಸಮನ್ವಯದಲ್ಲಿ ಸಿಪಿಐ ಆರ್. ಎಸ್. ಬಿರಾದಾರ, ಪಿಸಿ …

Read More »

ಹರ್ ಘರ್ ಭಗವಾ.. ಹರ್ ಘರ್ ಶಿವಬಸವ.. ಘೋಷವಾಕ್ಯ ಬಿಡುಗಡೆ ಮಾಡಿದ ಡಾ.ಸೋನಾಲಿ ಸರ್ನೋಬತ್

ಹರ್ ಘರ್ ಭಗವಾ.. ಹರ್ ಘರ್ ಶಿವಬಸವ.. ಘೋಷವಾಕ್ಯ ಬಿಡುಗಡೆ ಮಾಡಿದ ಡಾ.ಸೋನಾಲಿ ಸರ್ನೋಬತ್ ಯುವ ಭಾರತ ಸುದ್ದಿ ಖಾನಾಪುರ : ಖಾನಾಪುರ ಬಿಜೆಪಿ ಕಚೇರಿಯಲ್ಲಿ ದೂರು ನಿವಾರಣಾ ಕಾರ್ಯಕ್ರಮ ನಡೆಯಿತು. ಹರ್ ಘರ್ ಭಗವಾ.. ಹರ್ ಘರ್ ಶಿವಬಸವ..ಎಂಬ ಘೋಷಣೆಯ ಅಭಿಯಾನದ ಘೋಷವಾಕ್ಯ ಬಿಡುಗಡೆ ಮಾಡಲಾಯಿತು. ಪರಮಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿ ಆವರೊಳ್ಳಿ, ಪರಮಪೂಜ್ಯ ಶ್ರೀ ಸಿದ್ಧ ಶಿವಯೋಗಿ ಶಾಂಡಿಲ್ಯೇಶ್ವರ ಮಠ ಹಿರೇಮುನವಳ್ಳಿ, ಶ್ರೀ ಶಿವಪುತ್ರ ಮಹಾ ಸ್ವಾಮೀಜಿ …

Read More »

ಸಂಗನಕೇರಿ :ಅಯ್ಯಪ್ಪಸ್ವಾಮಿ ಮಹಾಪೂಜೆಯಲ್ಲಿ ಪಾಲ್ಗೊಂಡ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಂಗನಕೇರಿ :ಅಯ್ಯಪ್ಪಸ್ವಾಮಿ ಮಹಾಪೂಜೆಯಲ್ಲಿ ಪಾಲ್ಗೊಂಡ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವ ಯುವ ಭಾರತ ಸುದ್ದಿ ಸಂಗನಕೇರಿ (ಘಟಪ್ರಭಾ):      ಶಬರಿಮಲೈ ಅಯ್ಯಪ್ಪಸ್ವಾಮಿಯ ಸಾನಿಧ್ಯವಾಗಿದ್ದು ಈ ಪವಿತ್ರ ದೇವಸ್ಥಾನಕ್ಕೆ ದೇಶದಾದ್ಯಂತ ಲಕ್ಷಾಂತರ ಭಕ್ತರು ಜಾತ್ಯಾತೀತ ಮನೋಭಾವನೆಯಿಂದ ಭಕ್ತಿ ಹಾಗೂ ಶೃದ್ಧಾಪೂರ್ವಕವಾಗಿ ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಮೊರೆಯಿಡುತ್ತಾರೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಂಗನಕೇರಿ ಪಟ್ಟಣದಲ್ಲಿ ಇತ್ತೀಚೆಗೆ ಅಯ್ಯಪ್ಪಸ್ವಾಮಿ ಸೇವಾ ಸಮೀತಿಯಿಂದ ಜರುಗಿದ …

Read More »

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ ಯುವ ಭಾರತ ಸುದ್ದಿ ಮಂಗಳೂರು : ನಾಡಿನ ಹೆಸರಾಂತ ಸಾಹಿತಿ ಸಾರಾ ಅಬುಬಕ್ಕರ್ (87) ಮಂಗಳವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ಮಂಗಳೂರಿನ ಕ್ಯಾಟ್ ಹಿಲ್ ಬಳಿ ನೆಲೆಸಿದ್ದು ನಾಲ್ವರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ನಗರದ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಅಂತ್ಯಕ್ರಿಯೆ ನಗರದ ಬಂದರ್ ನ ಜೀನತ್ ಬಕ್ಷ್ ಮಸೀದಿಯಲ್ಲಿ …

Read More »

ನೀರಿನ ಸಂಪಿಗೆ ಬಿದ್ದು ಮಕ್ಕಳಿಬ್ಬರ ದುರ್ಮರಣ

ನೀರಿನ ಸಂಪಿಗೆ ಬಿದ್ದು ಮಕ್ಕಳಿಬ್ಬರ ದುರ್ಮರಣ ಯುವ ಭಾರತ ಸುದ್ದಿ ಬೆಳಗಾವಿ : ಸವದತ್ತಿ ನಗರದ ಗುರ್ಲಹೊಸೂರ ವಾರ್ಡಿನಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೀರಿನ ಸಂಪಿಗೆ ಬಿದ್ದು ಎರಡು ಮಕ್ಕಳು ಮೃತಪಟ್ಟಿದ್ದಾರೆ. ಎರಡು ಮಕ್ಕಳು ನಾಲ್ಕು ವರ್ಷದವರಾಗಿದ್ದಾರೆ. ದಿನಾಂಕ 10.01.2023 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಗುರ್ಲ ಹೊಸೂರು ವಾರ್ಡಿನಲ್ಲಿರುವ ಇನ್ನು ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನ ಕಟ್ಟಡದ ನೀರು ಸಂಗ್ರಹ ಮಾಡುವ ಸಂಪಿನಲ್ಲಿ …

Read More »

ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಸಿನಿಮಾ ತಾರೆಯರು, ರಾಜಕಾರಣಿಗಳ ಪೋಸ್ಟರ್‌ ಒಯ್ಯುವುದನ್ನು ನಿಷೇಧಿಸಿದ ಕೇರಳ ಹೈಕೋರ್ಟ್‌

ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಸಿನಿಮಾ ತಾರೆಯರು, ರಾಜಕಾರಣಿಗಳ ಪೋಸ್ಟರ್‌ ಒಯ್ಯುವುದನ್ನು ನಿಷೇಧಿಸಿದ ಕೇರಳ ಹೈಕೋರ್ಟ್‌ ಯುವ ಭಾರತ ಸುದ್ದಿ ತಿರುವನಂತಪುರಂ: ಪೂಜ್ಯ ಶಬರಿಮಲೆ ಸನ್ನಿಧಾನಂ ಪ್ರವೇಶಿಸುವ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳು ಮತ್ತು ದೊಡ್ಡ ಛಾಯಾಚಿತ್ರಗಳನ್ನು ಹೊಂದಿದ್ದರೆ ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಕೇರಳ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ಈ ಕುರಿತು ಯಾತ್ರಾರ್ಥಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ …

Read More »

ಆಸ್ಕರ್‌ 2023 : ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಅತ್ಯುತ್ತಮ ಚಿತ್ರ-ಅತ್ಯುತ್ತಮ ನಟ ವಿಭಾಗದ ಪ್ರಶಸ್ತಿಗೆ ಅರ್ಹತೆ ಪಡೆದ ಕಾಂತಾರ

ಆಸ್ಕರ್‌ 2023 : ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಅತ್ಯುತ್ತಮ ಚಿತ್ರ-ಅತ್ಯುತ್ತಮ ನಟ ವಿಭಾಗದ ಪ್ರಶಸ್ತಿಗೆ ಅರ್ಹತೆ ಪಡೆದ ಕಾಂತಾರ ಯುವ ಭಾರತ ಸುದ್ದಿ ಬೆಂಗಳೂರು : ರಿಷಬ್ ಶೆಟ್ಟಿ ಅವರ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಈ ಎರಡು ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿ (ಆಸ್ಕರ್‌)ಗಳ ಸ್ಪರ್ಧೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಚಲನಚಿತ್ರ ಮುಖ್ಯ ನಾಮನಿರ್ದೇಶನಗಳಿಗೆ ಹೋಗಲು ಆಸ್ಕರ್ ಸದಸ್ಯರು ಮತ ಚಲಾಯಿಸಲು ಇದು ಅರ್ಹವಾಗಿದೆ. ಕಾಂತಾರ …

Read More »