Breaking News

ಅಲೆಮಾರಿ ಜನಾಂಗದ ಕುಟುಂಬಗಳಿಗೆ ಆಸರೆಯಾದ- ಶಿವಾನಂದ ಹತ್ತಿ.!

Spread the love

ಅಲೆಮಾರಿ ಜನಾಂಗದ ಕುಟುಂಬಗಳಿಗೆ ಆಸರೆಯಾದ- ಶಿವಾನಂದ ಹತ್ತಿ.!


 ಯುವ ಭಾರತ ಸುದ್ದಿ,  ಗೋಕಾಕ: ಹಿಂದುಳಿದ ಹಾಗೂ ಅಲೇಮಾರಿ ಜನಾಂಗ ಕುಟುಂಬಕ್ಕೆ ಇಲ್ಲಿಯ ನಗರಸಭೆ ವಾರ್ಡ ನಂ 12ರ ಸದಸ್ಸೆ ಶ್ರೀಮತಿ ಭಾರತಿ ಶಿವಾನಂದ ಹತ್ತಿ ಅವರು ಈ ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ಬುದವಾರದಂದು ನಗರದ ಹೋರವಲಯದಲ್ಲಿ ವಾಸವಾಗಿರುವ ಅಲೇಮಾರಿ ಜನಾಂಗ ಹಾಗೂ ನಿರ್ಗತಿಕ ಕುಟುಂಬಕ್ಕೆ ಆಹಾರ ದಿನಸಿ ಕಿಟ್ಟ ವಿತರಿಸಿ ಮಾನವಿಯತೆ ಮೇರದಿದ್ದಾರೆ. ಅಲ್ಲದೇ ಕಳೆದ ಲಾಕ್‌ಡೌನನಲ್ಲಿಯೂ ಈ ಅಲೆಮಾರಿ ಕುಟುಂಬಗಳಿಗೆ ದಿನಸಿ ಕೀಟ್ ವಿತರಿಸಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ಅಲೆಮಾರಿ ಕುಟುಂಬಗಳಿಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಸರೆಯಾಗಿದ್ದಾರೆಂದು ಅಲೆಮಾರಿ ಜನಾಂಗದ ಪ್ರಮುಖ ಶ್ಯಾಮ ವಿಭೂತಿ ಹೇಳುತ್ತಾರೆ.


ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದ ಎಪಿಎಮ್‌ಸಿಯ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಕುಟುಂಬದವರಿಗೆ ಮಾಜಿ ಸಚಿವರ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಆಹಾರ ಧಾನ್ಯಗಳ ಕೀಟ್ ವಿತರಣೆ ಮಾಡಿರುವದಾಗಿ ಸಮಾಜ ಸೇವಕ ಶಿವಾನಂದ ಹತ್ತಿ ಪತ್ರಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರವಿ ಹನಿಮನಾಳ, ಮುತ್ತುರಾಜ ಜಮಖಂಡಿ, ನಿತ್ಯಾನಂದ ಅಮ್ಮಿನಭಾಂವಿ, ಸುಧೀರ ಜೋಗೊಜಿ, ಕಾಶಿನಾಥ, ಜಾಫರ್ ಶಭಾಶಖಾನ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × three =