Breaking News

ಹಳದಿ ಕುಂಕುಮ ಕಾರ್ಯಕ್ರಮ ಸಂಪನ್ನ

Spread the love

ಹಳದಿ ಕುಂಕುಮ ಕಾರ್ಯಕ್ರಮ ಸಂಪನ್ನ

ಯುವ ಭಾರತ ಸುದ್ದಿ ಬೆಳಗಾವಿ :
ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಶಹಾಪುರ ಎಸ್ ಪಿ ಎಂ ವಿಶ್ವಕರ್ಮ ಮಂಗಲ ಕಾರ್ಯಾಲಯದಲ್ಲಿ
ಹಳದಿ ಕುಂಕುಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕೊಲ್ಲಾಪುರ ವಿಭಾಗದ ಮುಖ್ಯ ರಾಷ್ಟ್ರೀಯ ನಿರ್ದೇಶಕ ಹಾಗೂ ಶಿವಾಜಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೇಶವ ರಾಜಪುರೆ, ಕಿರಣ ಜಾಧವ, ಮಾಜಿ ಮೇಯರ್ ಸರಿತಾ ಪಾಟೀಲ, ಮಾಜಿ ಉಪಮೇಯರ್ ರೇಣು ಕಿಲ್ಲೇಕರ್ ಜೈ ಹಿಂದ್ ಫೌಂಡೇಶನ್ ಮುಖ್ಯ ಅತಿಥಿಗಳಾಗಿದ್ದರು.ರಾಷ್ಟ್ರೀಯ ಸಂಚಾಲಕಿ ಮನಿಶಾ ಅರ್ಗುಣೆ, ಸತಾರಾ ಜಿಲ್ಲಾ ಮಹಿಳಾ ಮುಖ್ಯಸ್ಥೆ ಊರ್ಮಿಳಾ ತಾಯಿ ಕದಂ, ಮಹಿಳಾ ಸಂಪರ್ಕ ಮುಖ್ಯಸ್ಥೆ ಸುನೀತಾ ಪಾಟೀಲ ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಗಣ್ಯರು ದೀಪ ಬೆಳಗಿಸಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಾವಿತ್ರಿಬಾಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಿರಣ ಜಾಧವ ಮಾರ್ಗದರ್ಶನ ನೀಡಿ ಮಹಿಳಾ ದಿನಾಚರಣೆ ಕೇವಲ ಮಹಿಳಾ ದಿನಾಚರಣೆಗೆ ಸೀಮಿತವಾಗದೆ ಪ್ರತಿದಿನವೂ ಮಹಿಳೆಯರಿಂದಲೇ ಮಹಿಳಾ ದಿನಾಚರಣೆ ಆರಂಭಗೊಂಡು ಇಂದು ಮಹಿಳೆಯರು ಪುರುಷರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದರು.

ಮಹಿಳೆಯರು ಪುರುಷರನ್ನು ಬೆಂಬಲಿಸುವಂತೆ ನಾವು ಪುರುಷರು ಸಹ ಮಹಿಳೆಯರಿಗೆ ಬೆಂಬಲ ನೀಡಬೇಕು, ನಮ್ಮ ತಾಯಿ, ಹೆಂಡತಿ, ಸಹೋದರಿಯರನ್ನು ಬೆಂಬಲಿಸಬೇಕು, ಜೊತೆಗೆ ಸಮಾಜದ ಎಲ್ಲಾ ಸಹೋದರಿಯರು ಮುಂದೆ ಬರಲು ಸಹಾಯ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು.

 

ಜೈ ಹಿಂದ್ ಫೌಂಡೇಶನ್ ಕಾರ್ಯದ ಕುರಿತು ಮಾಹಿತಿ ನೀಡಿದ ಡಾ.ಕೇಶವ ರಾಜಪುರೆ, ಹುತಾತ್ಮ ಯೋಧರ ಹಾಗೂ ಅವರ ಕುಟುಂಬದವರ ಶ್ರೇಯೋಭಿವೃದ್ಧಿಗೆ ಜೈ ಹಿಂದ್ ಫೌಂಡೇಶನ್ ಮಾತ್ರ ಸಮಾಜಮುಖಿ ಸಂಸ್ಥೆಯಾಗಿದೆ. ಇಂದಿನಿಂದ ಬೆಳಗಾವಿಯಲ್ಲೂ ಈ ಶಾಖೆಯನ್ನು ಆರಂಭಿಸಲಾಗಿದೆ ಎಂದರು.

 

ಬಳಿಕ ಮಾತನಾಡಿದ ಉಪಮೇಯರ್ ಹಾಗೂ ಮಹಿಳಾ ಅಘಾಡಿ ಅಧ್ಯಕ್ಷೆ ರೇಣು ಕಿಲ್ಲೇಕರ ಮಾತನಾಡಿ, ಜೈ ಹಿಂದ್ ಫೌಂಡೇಶನ್ ಜವಾನರ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿದೆ. ಜವಾನರ ಕುಟುಂಬಗಳನ್ನು ಒಂದೇ ಸೂರಿನಡಿ ತಂದು ಅವರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರಿಗೆ ಸಹಾಯ ಹಸ್ತವನ್ನು ನೀಡುವ ಜೊತೆಗೆ ಸಮಾಜದಲ್ಲಿ ಅವರಿಗೆ ಗೌರವವನ್ನು ನೀಡುತ್ತಿರುವ ಸಂಸ್ಥೆಯನ್ನು ಶ್ಲಾಘಿಸಿದರು.

 

ಬಳಿಕ ಹಲವು ಗಣ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಲ್ಲಾ ವೀರ ಪತ್ನಿಯರು ಮತ್ತು ಅವರ ತಾಯಂದಿರನ್ನು ಸನ್ಮಾನಿಸಲಾಯಿತು. ಆ ನಂತರ ಈ ಸ್ಥಳದಲ್ಲಿ ಜೈ ಹಿಂದ್ ಫೌಂಡೇಶನ್ ಜಲಗಾಂವ್ ಶಾಖೆಯನ್ನು ಎಲ್ಲಾ ವೀರ ಪತ್ನಿಯರಿಗೆ ಹಳದಿ ಕುಂಕುಮ ನೀಡುವ ಮೂಲಕ ಪ್ರಾರಂಭಿಸಲಾಯಿತು.

ಅಕ್ಷತಾ ನಾಯಕ್ ದೇಸಾಯಿ ನಿರ್ವಹಿಸಿದರು. ಸುನೀತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಖಾದರವಾಡಕರ ವಂದಿಸಿದರು.ಈ ಸಂದರ್ಭದಲ್ಲಿ ವೀರಪತ್ನಿ ಮಾತಾ ಮತ್ತು ಜೈ ಹಿಂದ್ ಫೌಂಡೇಶನ್ ಕೊಲ್ಲಾಪುರ ಮತ್ತು ಸತಾರಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × one =